<?xml version="1.0" encoding="UTF-8"?>
<rss version="2.0"
     xmlns:dc="http://purl.org/dc/elements/1.1/"
     xmlns:sy="http://purl.org/rss/1.0/modules/syndication/"
     xmlns:admin="http://webns.net/mvcb/"
     xmlns:rdf="http://www.w3.org/1999/02/22-rdf-syntax-ns#"
     xmlns:content="http://purl.org/rss/1.0/modules/content/"
     xmlns:media="http://search.yahoo.com/mrss/">
<channel>
<title> &#45; Newsfirst</title>
<link>https://thinkerr.in/rss/author/newsfirst</link>
<description> &#45; Newsfirst</description>
<dc:language>en</dc:language>

<item>
<title>ಕೇಂದ್ರ ಸರ್ಕಾರದಿಂದ ವಂದೇ ಮಾತರಂಗೆ ಹೊಸ ಗೈಡ್​ಲೈನ್ಸ್​!: ಇನ್ಮುಂದೆ ಜನಗಣಮನಕ್ಕೂ ಮುನ್ನ ವಂದೇ ಮಾತರಂ ಕಡ್ಡಾಯ!</title>
<link>https://thinkerr.in/%E0%B2%95%E0%B3%87%E0%B2%82%E0%B2%A6%E0%B3%8D%E0%B2%B0-%E0%B2%B8%E0%B2%B0%E0%B3%8D%E0%B2%95%E0%B2%BE%E0%B2%B0%E0%B2%A6%E0%B2%BF%E0%B2%82%E0%B2%A6-%E0%B2%B5%E0%B2%82%E0%B2%A6%E0%B3%87-%E0%B2%AE%E0%B2%BE%E0%B2%A4%E0%B2%B0%E0%B2%82%E0%B2%97%E0%B3%86-%E0%B2%B9%E0%B3%8A%E0%B2%B8-%E0%B2%97%E0%B3%88%E0%B2%A1%E0%B3%8D%E0%B2%B2%E0%B3%88%E0%B2%A8%E0%B3%8D%E0%B2%B8%E0%B3%8D-%E0%B2%87%E0%B2%A8%E0%B3%8D%E0%B2%AE%E0%B3%81%E0%B2%82%E0%B2%A6%E0%B3%86-%E0%B2%9C%E0%B2%A8%E0%B2%97%E0%B2%A3%E0%B2%AE%E0%B2%A8%E0%B2%95%E0%B3%8D%E0%B2%95%E0%B3%82-%E0%B2%AE%E0%B3%81%E0%B2%A8%E0%B3%8D%E0%B2%A8-%E0%B2%B5%E0%B2%82%E0%B2%A6%E0%B3%87-%E0%B2%AE%E0%B2%BE%E0%B2%A4%E0%B2%B0%E0%B2%82-%E0%B2%95%E0%B2%A1%E0%B3%8D%E0%B2%A1%E0%B2%BE%E0%B2%AF</link>
<guid>https://thinkerr.in/%E0%B2%95%E0%B3%87%E0%B2%82%E0%B2%A6%E0%B3%8D%E0%B2%B0-%E0%B2%B8%E0%B2%B0%E0%B3%8D%E0%B2%95%E0%B2%BE%E0%B2%B0%E0%B2%A6%E0%B2%BF%E0%B2%82%E0%B2%A6-%E0%B2%B5%E0%B2%82%E0%B2%A6%E0%B3%87-%E0%B2%AE%E0%B2%BE%E0%B2%A4%E0%B2%B0%E0%B2%82%E0%B2%97%E0%B3%86-%E0%B2%B9%E0%B3%8A%E0%B2%B8-%E0%B2%97%E0%B3%88%E0%B2%A1%E0%B3%8D%E0%B2%B2%E0%B3%88%E0%B2%A8%E0%B3%8D%E0%B2%B8%E0%B3%8D-%E0%B2%87%E0%B2%A8%E0%B3%8D%E0%B2%AE%E0%B3%81%E0%B2%82%E0%B2%A6%E0%B3%86-%E0%B2%9C%E0%B2%A8%E0%B2%97%E0%B2%A3%E0%B2%AE%E0%B2%A8%E0%B2%95%E0%B3%8D%E0%B2%95%E0%B3%82-%E0%B2%AE%E0%B3%81%E0%B2%A8%E0%B3%8D%E0%B2%A8-%E0%B2%B5%E0%B2%82%E0%B2%A6%E0%B3%87-%E0%B2%AE%E0%B2%BE%E0%B2%A4%E0%B2%B0%E0%B2%82-%E0%B2%95%E0%B2%A1%E0%B3%8D%E0%B2%A1%E0%B2%BE%E0%B2%AF</guid>
<description><![CDATA[ ದೇಶದ ಸಾಂಸ್ಕೃತಿಕ ಮತ್ತು ದೇಶಭಕ್ತಿಯ ಸಂಕೇತವಾದ ವಂದೇ ಮಾತರಂ ಗೀತೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ಮಹತ್ವದ ನಿರ್ಧಾರ ಒಂದನ್ನ ತೆಗೆದುಕೊಂಡಿದೆ. ಮಹತ್ವದ ಬೆಳವಣಿಗೆಯೊಂದರಲ್ಲಿ ವಂದೇ ಮಾತರಂ ಗೀತೆಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿರೋ ಕೇಂದ್ರ ಸರ್ಕಾರ, ಸರ್ಕಾರಿ ಕಾರ್ಯಕ್ರಮಗಳಲ್ಲಿ.. ಶಾಲೆಗಳಲ್ಲಿ ವಂದೇ ಮಾತರಂ ನುಡಿಸುವಾಗ ಎದ್ದು ನಿಲ್ಲುವುದನ್ನ ಕಡ್ಡಾಯಗೊಳಿಸಿದೆ. ಕೇಂದ್ರ ಸರ್ಕಾರದಿಂದ ವಂದೇ ಮಾತರಂಗೆ ಹೊಸ ಗೈಡ್​ಲೈನ್ಸ್​!ಇನ್ಮುಂದೆ ಜನಗಣಮನಕ್ಕೂ ಮುನ್ನ ವಂದೇ ಮಾತರಂ ಕಡ್ಡಾಯ!ಜನ.. ಗಣ.. ಮನ.. ಅಂತ ಕೇಳ್ತಿದ್ದಂತೆ ಯಾರು ಯಾವುದೇ ಕೆಸಲದಲ್ಲಿದ್ರೂ.. ಎಲ್ಲವನ್ನೂ ಬಿಟ್ಟು ನಿಂತು. ರಾಷ್ಟ್ರ ಗೀತೆಗೆ ಗೌರವ ಸಲ್ಲಿಸುತ್ತಿದ್ರು. ಈಗ, ರಾಷ್ಟ್ರಗೀತೆ ಜನ ಗಣ ಮನದಂತೆಯೇ ವಂದೇ ಮಾತರಂ ಗೀತೆ ಕೂಡ ಕಡ್ಡಾಯವಾಗಿದೆ. ವಂದೇ ಮಾತರಂ ಬಗ್ಗೆ ಹೊಸ ನಿಯಮವನ್ನ ಜಾರಿಗೊಳಿಸಲಾಗಿದೆ. ಈ ನಿಯಮದಡಿಯಲ್ಲಿ, ರಾಷ್ಟ್ರಗೀತೆಗೆ ಮೊದಲು ವಂದೇ ಮಾತರಂ ಹಾಡಲಾಗುತ್ತದೆ. ಈ ಸಮಯದಲ್ಲಿ ಎದ್ದು ನಿಲ್ಲುವುದು ಕಡ್ಡಾಯ. ಪ್ರತಿ ಸರ್ಕಾರಿ ಸಮಾರಂಭದಲ್ಲಿ ಅದನ್ನ ಹಾಡುವುದು ಕಡ್ಡಾಯವಾಗಿರುತ್ತೆ ಅಂತ ಕೇಂದ್ರ ಸರ್ಕಾರ ವಂದೇ ಮಾತರಂ ಬಗ್ಗೆ ತನ್ನ ಆದೇಶವನ್ನ ಹೊರಡಿಸಿದೆ. ಕೇಂದ್ರ ಗೃಹ ಸಚಿವಾಲಯವು ಇಂದು ಬೆಳಗ್ಗೆ ವಂದೇ ಮಾತರಂ ಗೀತೆಯ ಕುರಿತು ಹೊಸ ಮಾರ್ಗಸೂಚಿಗಳನ್ನ ಹೊರಡಿಸಿದೆ. ಈ ಮಾರ್ಗಸೂಚಿಗಳ ಅನ್ವಯ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮತ್ತು ಎಲ್ಲಾ ಶಾಲೆಗಳಲ್ಲಿ ರಾಷ್ಟ್ರಗೀತೆ ಜನ ಗಣ ಮನ ನುಡಿಸುವ ಮೊದಲು ಬಳಿಕ ವಂದೇ ಮಾತರಂ ನುಡಿಸಬೇಕು ಮತ್ತು ಎಲ್ಲರೂ ಹಾಡುವಾಗ ಎದ್ದು ನಿಲ್ಲಬೇಕು ಅನ್ನೋದನ್ನ ಸ್ಪಷ್ಟಪಡಿಸಿದೆ. 1937ರಲ್ಲಿ ಕಾಂಗ್ರೆಸ್ ತೆಗೆದುಹಾಕಿದ ನಾಲ್ಕು ಚರಣಗಳನ್ನ ಒಳಗೊಂಡಂತೆ.. 3 ನಿಮಿಷ 10 ಸೆಕೆಂಡ್​ನ ವಂದೇ ಮಾತರಂ ಗೀತೆಯ ಎಲ್ಲಾ ಆರು ಚರಣಗಳನ್ನ ನುಡಿಸುವುದು ಕಡ್ಡಾಯಗೊಳಿಸಲಾಗಿದೆ. ಆದರೆ ಚಿತ್ರಮಂದಿರಗಳಲ್ಲಿ ಈ ಗೀತೆಯನ್ನ ನುಡಿಸುವುದು ಕಡ್ಡಾಯವಲ್ಲ ಎಂದು ಕೇಂದ್ರ ಗೃಹ ಸಚಿವಾಲಯದ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದ್ದು, ವಂದೇ ಮಾತರಂ ಹಾಡುವಾಗ ಎದ್ದು ನಿಲ್ಲದಿದ್ದರೆ ಶಿಕ್ಷೆ-ದಂಡಕ್ಕೆ ಫಿಕ್ಸ್​ ಅಂತಾನೂ ಘೋಷಿಸಿದೆ.ಮಾರ್ಗಸೂಚಿಯಲ್ಲಿ ಏನಿದೆ? ‘ಜನಗಣಮನ’ಕ್ಕಿರುವ ಗೌರವ ‘ವಂದೇ ಮಾತರಂ’ಗೂ ನೀಡಬೇಕುರಾಷ್ಟ್ರ ಗೀತೆಗೂ ಮೊದಲು ಇನ್ಮುಂದೆ ‘ವಂದೇ ಮಾತರಂ’ ಕಡ್ಡಾಯ ಶಾಲೆ, ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಹಾಡಬೇಕುಸರ್ಕಾರಿ ಕಚೇರಿಗಳು, ಸರ್ಕಾರಿ ಸಮಾರಂಭಗಳಿಗೂ ಅನ್ವಯಿಸುತ್ತದೆಸರ್ಕಾರಿ ಕಾರ್ಯಕ್ರಮದಲ್ಲಿ ಹಾಡುವಾಗ ಎದ್ದು ನಿಲ್ಲುವುದು ಕಡ್ಡಾಯಚಿತ್ರಮಂದಿರಗಳಲ್ಲಿ ವಂದೇ ಮಾತರಂ ಗೀತೆ ನುಡಿಸೊದು ಕಡ್ಡಾಯವಲ್ಲ ರಾಷ್ಟ್ರಗೀತೆಗೆ ಇರುವ ಶಿಷ್ಟಾಚಾರಗಳನ್ನ ವಂದೇ ಮಾತರಂ ಗೀತೆಗೆ ವಿಸ್ತಾರರಾಷ್ಟ್ರಗೀತೆಗೆ ಅಡ್ಡಿಪಡಿಸಿ, ಗೌರವಿಸುವುದನ್ನ ತಡೆದ ವ್ಯಕ್ತಿಗೆ 3 ವರ್ಷ ಜೈಲು(ಜನಗಣಮನಕ್ಕಿರುವ ಗೌರವ ವಂದೇ ಮಾತರಂಗೂ ನೀಡಬೇಕು. ರಾಷ್ಟ್ರ ಗೀತೆಗೂ ಮೊದಲು ಇನ್ಮುಂದೆ ವಂದೇ ಮಾತರಂ ಕೂಡ ಕಡ್ಡಾಯವಾಗಿರುತ್ತೆ. ಶಾಲೆ, ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆ ಹಾಡಬೇಕು. ಸರ್ಕಾರಿ ಕಚೇರಿಗಳು, ಸರ್ಕಾರಿ ಸಮಾರಂಭಗಳಿಗೂ ಅನ್ವಯಿಸುತ್ತದೆ. ಸರ್ಕಾರಿ ಕಾರ್ಯಕ್ರಮದಲ್ಲಿ ಹಾಡುವಾಗ ಎದ್ದು ನಿಲ್ಲುವುದು ಕಡ್ಡಾಯ ಎಂದಿದೆ. ಚಿತ್ರಮಂದಿರಗಳಲ್ಲಿ ವಂದೇ ಮಾತರಂ ಗೀತೆ ನುಡಿಸುವುದು ಕಡ್ಡಾಯವಲ್ಲ ಅಂತ ಕೂಡ ಹೇಳಿದೆ. ರಾಷ್ಟ್ರಗೀತೆಗೆ ಇರುವ ಶಿಷ್ಟಾಚಾರಗಳನ್ನ ವಂದೇ ಮಾತರಂ ಗೀತೆಗೆ ವಿಸ್ತಾರಿಸಲಾಗಿದೆ. ರಾಷ್ಟ್ರಗೀತೆಗೆ ಅಡ್ಡಿಪಡಿಸಿ, ಗೌರವಿಸುವುದನ್ನ ತಡೆದ ವ್ಯಕ್ತಿಗೆ 3 ವರ್ಷ ಜೈಲು ಎಂಬ ಕಾನೂನು ಘೋಷಣೆಯಾಗಿದೆ)ಎಲ್ಲೆಲ್ಲಿ ಗೈಡ್​ಲೈನ್ಸ್?ಕಡ್ಡಾಯ?                          ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ             ರಾಷ್ಟ್ರಪತಿಗಳು ಹಾಡೋ ಕಾರ್ಯಕ್ರಮಗಳಲ್ಲಿ     ಸರ್ಕಾರಿ ಕಚೇರಿಗಳು, ಸರ್ಕಾರಿ ಸಮಾರಂಭ      ಕಡ್ಡಾಯವಲ್ಲ?ಸಿನಿಮಾ ಮಂದಿರಗಳಲ್ಲಿಯಾವುದೇ ಖಾಸಗಿ ಸಮಾರಂಭದಲ್ಲಿಧಾರ್ಮಿಕ ಅಥವಾ ಸಾಮಾಜಿಕ ಸಭೆಯಲ್ಲಿ(ವಂದೇ ಮಾತರಂ ಗೀತೆಯನ್ನ ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಮತ್ತು ರಾಷ್ಟ್ರಪತಿಗಳು ಭಾಗವಹಿಸುವ ಕಾರ್ಯಕ್ರಮಗಳಲ್ಲಿ. ಸರ್ಕಾರಿ ಕಚೇರಿಗಳು, ಸರ್ಕಾರಿ ಸಮಾರಂಭಗಳಲ್ಲಿ ಹಾಡಲೇ ಬೇಕು ಅಂತ ಕೇಂದ್ರ ಹೇಳಿದೆ. ಸಿನಿಮಾ ಮಂದಿರಗಳಲ್ಲಿ.. ಯಾವುದೇ ಖಾಸಗಿ ಸಮಾರಂಭದಲ್ಲಿ. ಧಾರ್ಮಿಕ ಅಥವಾ ಸಾಮಾಜಿಕ ಸಭೆಯಲ್ಲಿ ಕಡ್ಡಾಯವಲ್ಲ ಅಂತ ಸೂಚಿಸಲಾಗಿದೆ.) ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆ ಅಂಗವಾಗಿ ಸಂಸತ್ತಿನಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿತ್ತು. ಈ ಚರ್ಚೆಗಳಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್‌ ನೇತೃತ್ವದ ವಿಪಕ್ಷಗಳ ನಡುವೆ ಭಾರೀ ವಾದ-ವಿವಾದಗಳು ಏರ್ಪಟ್ಟಿದ್ದವು. ಈ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಯೆ ನೀಡಿದ ಡಿಸಿಎಂ ಡಿ.ಕೆ ಶಿವಕುಮಾರ್, ವಂದೇ ಮಾತರಂಗೆ.. ದೇಶಕ್ಕೆ ಬುನಾದಿ ಹಾಕಿದ್ದೇ ಕಾಂಗ್ರೆಸ್​. ಸ್ವಾತಂತ್ರ್ಯ, ಸಂವಿಧಾನ ತಂದುಕೊಟ್ಟ ಪಕ್ಷ ನಮ್ಮದು... ನಮ್ಮ ಹಾದಿಯನ್ನ ಬಿಜೆಪಿ ಹಿಡಿದಿದೆ ಅಂತ ಕ್ರೆಡಿಟ್​ ತಗೊಂಡಿದ್ದಾರೆ.ಡಿಕೆಶಿ ಹೇಳಿಕೆ ನೋಡ್ತಿದ್ರೆ ಪರೋಕ್ಷವಾಗಿ ಸ್ವಾಗತ ಮಾಡಿದಂತೆ ಕಾಣ್ತಿದೆ. ಅದ್ದೇನೆ ಇರಲಿ, ಒಂದು ಕಾರ್ಯಕ್ರಮದಲ್ಲಿ ಎರಡೂ ಹಾಡುಗಳನ್ನ ಒಟ್ಟಿಗೆ ನುಡಿಸಿದಾಗ, ವಂದೇ ಮಾತರಂ ಮೊದಲು ಬರುತ್ತದೆ.. ನಂತರ ಜನ ಗಣ ಮನ ಬರುತ್ತದೆ ಎಂದು ಆದೇಶವು ಸ್ಪಷ್ಟವಾಗಿ ಹೇಳ್ತಿದೆ. ಎರಡ್ರಲ್ಲೂ ನಿಲ್ಲುವುದು ಕಡ್ಡಾಯವಾಗಿದೆ.ನ್ಯೂಸ್ ಫಸ್ಟ್​ ಬ್ಯುರೋ.ವಿಶೇಷ ಸೂಚನೆ: ಎಲ್ಲಾ DTH &amp; Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ ]]></description>
<enclosure url="https://img-cdn.publive.online/fit-in/1280x960/newsfirstlive-kannada/media/media_files/2026/02/11/vande-matharam-new-guidelines-2026-02-11-19-59-17.jpg" length="49398" type="image/jpeg"/>
<pubDate>Thu, 12 Feb 2026 09:44:07 +0530</pubDate>
<dc:creator>Newsfirst</dc:creator>
<media:keywords>ಕೇಂದ್ರ, ಸರ್ಕಾರದಿಂದ, ವಂದೇ, ಮಾತರಂಗೆ, ಹೊಸ, ಗೈಡ್​ಲೈನ್ಸ್​:, ಇನ್ಮುಂದೆ, ಜನಗಣಮನಕ್ಕೂ, ಮುನ್ನ, ವಂದೇ, ಮಾತರಂ, ಕಡ್ಡಾಯ</media:keywords>
</item>

<item>
<title>ಭಾರತ&#45; ಅಮೆರಿಕಾ ವ್ಯಾಪಾರ ಒಪ್ಪಂದ ಪರಿಷ್ಕರಣೆ : ಭಾರತಕ್ಕೆ ಸಿಕ್ತು ಗುಡ್ ನ್ಯೂಸ್‌!</title>
<link>https://thinkerr.in/%E0%B2%AD%E0%B2%BE%E0%B2%B0%E0%B2%A4-%E0%B2%85%E0%B2%AE%E0%B3%86%E0%B2%B0%E0%B2%BF%E0%B2%95%E0%B2%BE-%E0%B2%B5%E0%B3%8D%E0%B2%AF%E0%B2%BE%E0%B2%AA%E0%B2%BE%E0%B2%B0-%E0%B2%92%E0%B2%AA%E0%B3%8D%E0%B2%AA%E0%B2%82%E0%B2%A6-%E0%B2%AA%E0%B2%B0%E0%B2%BF%E0%B2%B7%E0%B3%8D%E0%B2%95%E0%B2%B0%E0%B2%A3%E0%B3%86-%E0%B2%AD%E0%B2%BE%E0%B2%B0%E0%B2%A4%E0%B2%95%E0%B3%8D%E0%B2%95%E0%B3%86-%E0%B2%B8%E0%B2%BF%E0%B2%95%E0%B3%8D%E0%B2%A4%E0%B3%81-%E0%B2%97%E0%B3%81%E0%B2%A1%E0%B3%8D-%E0%B2%A8%E0%B3%8D%E0%B2%AF%E0%B3%82%E0%B2%B8%E0%B3%8D</link>
<guid>https://thinkerr.in/%E0%B2%AD%E0%B2%BE%E0%B2%B0%E0%B2%A4-%E0%B2%85%E0%B2%AE%E0%B3%86%E0%B2%B0%E0%B2%BF%E0%B2%95%E0%B2%BE-%E0%B2%B5%E0%B3%8D%E0%B2%AF%E0%B2%BE%E0%B2%AA%E0%B2%BE%E0%B2%B0-%E0%B2%92%E0%B2%AA%E0%B3%8D%E0%B2%AA%E0%B2%82%E0%B2%A6-%E0%B2%AA%E0%B2%B0%E0%B2%BF%E0%B2%B7%E0%B3%8D%E0%B2%95%E0%B2%B0%E0%B2%A3%E0%B3%86-%E0%B2%AD%E0%B2%BE%E0%B2%B0%E0%B2%A4%E0%B2%95%E0%B3%8D%E0%B2%95%E0%B3%86-%E0%B2%B8%E0%B2%BF%E0%B2%95%E0%B3%8D%E0%B2%A4%E0%B3%81-%E0%B2%97%E0%B3%81%E0%B2%A1%E0%B3%8D-%E0%B2%A8%E0%B3%8D%E0%B2%AF%E0%B3%82%E0%B2%B8%E0%B3%8D</guid>
<description><![CDATA[ ಅಮೆರಿಕಾ ಜೊತೆಗಿನ ವ್ಯಾಪಾರ ಒಪ್ಪಂದದಲ್ಲಿ ಭಾರತಕ್ಕೆ ದೊಡ್ಡ ರಾಜತಾಂತ್ರಿಕ ಗೆಲುವು ಸಿಕ್ಕಿದೆ. ಭಾರತ–ಅಮೆರಿಕ ನಡುವಿನ ತಾತ್ಕಾಲಿಕ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ವೈಟ್ ಹೌಸ್ ಪರಿಷ್ಕೃತ ಫ್ಯಾಕ್ಟ್ ಶೀಟ್ ಬಿಡುಗಡೆಗೊಳಿಸಿದೆ. ಇದರಲ್ಲಿ ಏನೆಲ್ಲಾ ಭಾರತಕ್ಕೆ ಸಿಕ್ಕ ಗುಡ್​ ನ್ಯೂಸ್ ಏನು ಅನ್ನೋ ಡೀಟೇಲ್ಸ್​ ಇಲ್ಲಿದೆ.ಅಮೆರಿಕಾ ಜೊತೆಗಿನ ವ್ಯಾಪಾರ ಒಪ್ಪಂದದಲ್ಲಿ ಭಾರತಕ್ಕೆ ದೊಡ್ಡ ರಾಜತಾಂತ್ರಿಕ ಗೆಲುವು ಸಿಕ್ಕಿದೆ. ಭಾರತ–ಅಮೆರಿಕ ನಡುವಿನ ತಾತ್ಕಾಲಿಕ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ವೈಟ್ ಹೌಸ್ ಪರಿಷ್ಕೃತ ಫ್ಯಾಕ್ಟ್ ಶೀಟ್ ಬಿಡುಗಡೆಗೊಳಿಸಿದ್ದು, ಇದರಲ್ಲಿ ಕೆಲವು ದ್ವಿದಳ ಧಾನ್ಯಗಳು ಎಂಬ ಉಲ್ಲೇಖವನ್ನ ಕೈಬಿಟ್ಟಿರುವುದು ಕಂಡು ಬಂದಿದೆ.ಭಾರತ-ಅಮೆರಿಕ ವ್ಯಾಪಾರ ಒಪ್ಪಂದದಲ್ಲಿ ಸದ್ದಿಲ್ಲದೆ ಪರಿಷ್ಕರಫ್ಯಾಕ್ಟ್‌ಶೀಟ್‌ನಲ್ಲಿ ದ್ವಿದಳ ಧಾನ್ಯಗಳು ಉಲ್ಲೇಖ ಕೈಬಿಟ್ಟ USಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವು ಈಗ ಭಾರತೀಯ ರೈತರ ಅಸ್ತಿತ್ವದ ಚರ್ಚೆ ಹುಟ್ಟುಹಾಕಿದೆ. ಈ ಒಪ್ಪಂದದ ಮೂಲಕ ಭಾರತದ ಕೃಷಿ ಕ್ಷೇತ್ರವನ್ನು ಸರ್ಕಾರ ಅಮೆರಿಕಕ್ಕೆ ಮಾರಿಬಿಟ್ಟಿದೆ ಎಂದು ಆರೋಪಿಸಿ ವಿವಿಧ ರೈತ ಸಂಘಟನೆಗಳು ಪ್ರತಿಭಟನೆಗಳಿಗೆ ಸಜ್ಜಾಗಿವೆ. ಕೃಷಿ ಮತ್ತು ಡೈರಿ ಸೆಕ್ಟರ್​ಗಳನ್ನು ತೆರೆದಿಡುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರ ಹೇಳುತ್ತಿದ್ದರೂ ಟ್ರಂಪ್ ಸರ್ಕಾರದ ಫ್ಯಾಕ್ಟ್ ಶೀಟ್​ನಲ್ಲಿ ಕೃಷಿ ಉತ್ಪನ್ನಗಳನ್ನು ಸೇರಿಸಲಾಗಿರುವುದು ರೈತ ಸಂಘಟನೆಗಳ ಅನುಮಾನ ಬಲಗೊಳ್ಳಲು ಕಾರಣವಾಗಿದೆ. ಈ ಮಧ್ಯೆ, ಅಮೆರಿಕ ಸರ್ಕಾರವು ಈ ಒಪ್ಪಂದದ ಫ್ಯಾಕ್ಟ್ ಶೀಟ್​ನಲ್ಲಿ ಸದ್ದಿಲ್ಲದೆ ಬದಲಾವಣೆ ಮಾಡಿದೆ. ಫ್ಯಾಕ್ಟ್‌ಶೀಟ್‌ನಲ್ಲಾದ ಬದಲಾವಣೆ!ಮೊದಲ ಫ್ಯಾಕ್ಟ್‌ಶೀಟ್‌ನಲ್ಲಿ ಡ್ರೈಡ್ ಡಿಸ್ಟಿಲರ್ಸ್ ಗ್ರೇನ್ಸ್ಕೆಂಪು ಜೋಳ, ಡ್ರೈಫ್ರೂಟ್ಸ್, ಕೆಲವು ಬೇಳೆಗಳು, ಎಣ್ಣೆವೈನ್, ಮದ್ಯಪಾನ ಪದಾರ್ಥ, ಕೆಲ ಉತ್ಪನ್ನ ಸೇರಿದ್ದವು500 ಶತಕೋಟಿ US ಡಾಲರ್ಸ್​ ಗಿಂತ ಹೆಚ್ಚಿನ ಇಂಧನಕೃಷಿ.. ಕಲ್ಲಿದ್ದಲು ಮತ್ತು ಇತರೆ ಉತ್ಪನ್ನ ಖರೀದಿಸಲು ಬದ್ಧನಿನ್ನೆಯ ಪರಿಷ್ಕೃತ ಫ್ಯಾಕ್ಟ್‌ಶೀಟ್‌ನಲ್ಲಿ ಬೇಳೆ ಉಲ್ಲೇಖ ರದ್ದುಭಾರತ ಬದ್ಧ ಎಂಬ ಪದವನ್ನ ಭಾರತ ಉದ್ದೇಶಿಸಿದೆ ಬದಲುಮೊನ್ನೆ ಅಂದ್ರೆ ಸೋಮವಾರ ಬಿಡುಗಡೆಗೊಂಡ ಮೊದಲ ಫ್ಯಾಕ್ಟ್‌ಶೀಟ್‌ನಲ್ಲಿ, ಡ್ರೈಡ್ ಡಿಸ್ಟಿಲರ್ಸ್ ಗ್ರೇನ್ಸ್, ಕೆಂಪು ಜೋಳ, ಡ್ರೈಫ್ರೂಟ್ಸ್, ತಾಜಾ ಹಣ್ಣುಗಳು, ಕೆಲವು ಬೇಳೆಗಳು, ಸೋಯಾಬೀನ್ ಎಣ್ಣೆ, ವೈನ್ ಮತ್ತು ಮದ್ಯಪಾನ ಪದಾರ್ಥಗಳು ಸೇರಿದಂತೆ ಹಲವು ಉತ್ಪನ್ನಗಳು ಸೇರಿದ್ದವು. ಭಾರತವು ಹೆಚ್ಚಿನ ಅಮೇರಿಕನ್ ಉತ್ಪನ್ನಗಳನ್ನ ಖರೀದಿಸಲು ಮತ್ತು 500 ಶತಕೋಟಿ US ಡಾಲರ್ಸ್​ ಗಿಂತ ಹೆಚ್ಚಿನ ಅಮೆರಿಕಾ ಇಂಧನ.. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ.. ಕೃಷಿ.. ಕಲ್ಲಿದ್ದಲು ಮತ್ತು ಇತರ ಉತ್ಪನ್ನಗಳನ್ನ ಖರೀದಿಸಲು ಬದ್ಧವಾಗಿದೆ ಹೇಳಲಾಗಿತ್ತು. ಆದರೆ, ನಿನ್ನೆ ಬಿಡುಗಡೆಗೊಂಡ ಟರ್ಮ್ಸ್ ಆಫ್ ಅಗ್ರೀಮೆಂಟ್​ನಲ್ಲಿ ಬೇಳೆಗಳು ಎಂಬ ಉಲ್ಲೇಖವನ್ನ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಜೊತೆಗೆ, ಮೊದಲ ಪಟ್ಟಿಯಲ್ಲಿ ಬಳಸಿದ್ದ India is committed ಆಂದ್ರೆ ಭಾರತ ಬದ್ಧವಾಗಿದೆ ಎಂಬ ಪದವನ್ನ India intends ಅಂದ್ರೆ ಭಾರತ ಉದ್ದೇಶಿಸಿದೆ ಎಂದು ಬದಲಾಯಿಸಲಾಗಿದೆ.ವಿಪಕ್ಷಗಳು ಸಂಸತ್‌ನಲ್ಲಿ ಆಕ್ರೋಶ ಹೊರ ಹಾಕಿದ್ವು. ಸಂಯುಕ್ತ್ ಕಿಸಾನ್ ಮೋರ್ಚಾ ಮತ್ತು ಅಖಿಲ ಭಾರತ ಕಿಸಾನ್ ಸಭಾ ಸೇರಿದಂತೆ ಹಲವಾರು ರೈತ ಸಂಘಟನೆಗಳು ಭಾರತ-ಅಮೆರಿಕಾ ವ್ಯಾಪಾರ ಒಪ್ಪಂದವನ್ನ ಟೀಕಿಸಿ ಫೆಬ್ರವರಿ 12ಕ್ಕೆ ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನ ನಡೆಸೋದಾಗಿ ಘೋಷಿಸಿತ್ತು. ಇದ್ರ ಬೆನ್ನಲ್ಲೇ ಈ ಮಹತ್ವದ ಬೆಳವಣಿಕೆ ಹಾಗೂ ಬದಲಾವಣೆಗಳು ಕಂಡು ಬಂದಿದೆ. ಅಮೆರಿಕಾದ ದಾನ್ಯಗಳು, ಸಂಸ್ಕರಿಸಿದ ಹಣ್ಣು ಸೇರಿದಂತೆ ಹಲವು ಕೃಷಿ ಉತ್ಪನ್ನಗಳು ಭಾರತಕ್ಕೆ ರಫ್ತಾಗಲಿದೆ ಎಂದು ಅಮೆರಿಕಾದ United States Trade Representative ಪೋಸ್ಟ್‌ ಹಾಕಿತ್ತು. ಅಚ್ಚರಿಯೆಂಬಂತೆ ಅದ್ರಲ್ಲಿನ ಭಾರತದ ನಕ್ಷೆಯಲ್ಲಿ ಪಿಓಕೆ ಮತ್ತು ಅಕ್ಸಾಯ್‌ ಚಿನ್‌ ಪ್ರದೇಶಗಳು ಒಳಗೊಂಡ ಭಾರತದ ಭೂಪಟವನ್ನ ಪೋಸ್ಟ್‌ ಮಾಡಿತ್ತು. ಸಾಮಾನ್ಯವಾಗಿ ಪಿಓಕೆ ಮತ್ತು ಅಕ್ಸಾಯ್‌ಚಿನ್‌ ಪ್ರದೇಶಗಳನ್ನ ವಿವಾದಿತ ಪ್ರದೇಶವೆಂದು ಮಾರ್ಕ್‌ ಮಾಡಿರುತ್ತಿದ್ದ ಅಮೆರಿಕಾ.. ಈ ಬಾರಿ ಸಂಪೂರ್ಣವಾಗಿ ಈ ಭಾಗಗಳು ಭಾರತದ್ದೆ ಭಾಗ ಅನ್ನೋದನ್ನ ಒಪ್ಪಿಕೊಂಡಂತೆ ನಕ್ಷೆ ಹಾಕಿರೋದು ವ್ಯಾಪಕ ಚರ್ಚೆ ಶುರು ಮಾಡಿತ್ತು. ಅಮೆರಿಕಾ ಈ ಪ್ರದೇಶಗಳು ಭಾರತದ್ದೆಂದು ಒಪ್ಪಿಕೊಂಡಿದೆ ಎಂದೇ ಬಿಂಬಿಸಲಾಗಿತ್ತು. ಇದರ ಬೆನ್ನಲ್ಲೇ ಪೋಸ್ಟ್‌ ಡಿಲೀಟ್‌ ಮಾಡಿರೋ ಯುಎಸ್‌ಟಿಆರ್‌. ಧಾನ್ಯಗಳನ್ನ ರಫ್ತು ಮಾಡುವ ನಿರ್ಧಾರದಿಂದ ಹಿಂದೆ ಸರಿದ ಕಾರಣಕ್ಕೋ, ಅಥವಾ ನಕ್ಷೆ ವಿವಾದಕ್ಕೋ ಅನ್ನೋದು ಈಗಲೂ ಪ್ರಶ್ನೆಯಾಗೇ ಉಳಿದಿದೆ.ನ್ಯೂಸ್​ ಫಸ್ಟ್​ ಬ್ಯುರೋವಿಶೇಷ ಸೂಚನೆ: ಎಲ್ಲಾ DTH &amp; Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. ]]></description>
<enclosure url="https://img-cdn.publive.online/fit-in/1280x960/newsfirstlive-kannada/media/media_files/2026/02/04/india-and-usa-trade-deal-2026-02-04-13-31-51.jpg" length="49398" type="image/jpeg"/>
<pubDate>Thu, 12 Feb 2026 09:44:07 +0530</pubDate>
<dc:creator>Newsfirst</dc:creator>
<media:keywords>ಭಾರತ-, ಅಮೆರಿಕಾ, ವ್ಯಾಪಾರ, ಒಪ್ಪಂದ, ಪರಿಷ್ಕರಣೆ, ಭಾರತಕ್ಕೆ, ಸಿಕ್ತು, ಗುಡ್, ನ್ಯೂಸ್‌</media:keywords>
</item>

<item>
<title>ಭಾರತ ಮಾತೆಯನ್ನು ಮಾರಾಟ ಮಾಡಿದ್ದೀರಿ ಎಂದ ರಾಹುಲ್ ಗಾಂಧಿ: ರಾಹುಲ್ ಭಾಷಣಕ್ಕೆ ಬಿಜೆಪಿ ಆಕ್ಷೇಪ</title>
<link>https://thinkerr.in/%E0%B2%AD%E0%B2%BE%E0%B2%B0%E0%B2%A4-%E0%B2%AE%E0%B2%BE%E0%B2%A4%E0%B3%86%E0%B2%AF%E0%B2%A8%E0%B3%8D%E0%B2%A8%E0%B3%81-%E0%B2%AE%E0%B2%BE%E0%B2%B0%E0%B2%BE%E0%B2%9F-%E0%B2%AE%E0%B2%BE%E0%B2%A1%E0%B2%BF%E0%B2%A6%E0%B3%8D%E0%B2%A6%E0%B3%80%E0%B2%B0%E0%B2%BF-%E0%B2%8E%E0%B2%82%E0%B2%A6-%E0%B2%B0%E0%B2%BE%E0%B2%B9%E0%B3%81%E0%B2%B2%E0%B3%8D-%E0%B2%97%E0%B2%BE%E0%B2%82%E0%B2%A7%E0%B2%BF-%E0%B2%B0%E0%B2%BE%E0%B2%B9%E0%B3%81%E0%B2%B2%E0%B3%8D-%E0%B2%AD%E0%B2%BE%E0%B2%B7%E0%B2%A3%E0%B2%95%E0%B3%8D%E0%B2%95%E0%B3%86-%E0%B2%AC%E0%B2%BF%E0%B2%9C%E0%B3%86%E0%B2%AA%E0%B2%BF-%E0%B2%86%E0%B2%95%E0%B3%8D%E0%B2%B7%E0%B3%87%E0%B2%AA</link>
<guid>https://thinkerr.in/%E0%B2%AD%E0%B2%BE%E0%B2%B0%E0%B2%A4-%E0%B2%AE%E0%B2%BE%E0%B2%A4%E0%B3%86%E0%B2%AF%E0%B2%A8%E0%B3%8D%E0%B2%A8%E0%B3%81-%E0%B2%AE%E0%B2%BE%E0%B2%B0%E0%B2%BE%E0%B2%9F-%E0%B2%AE%E0%B2%BE%E0%B2%A1%E0%B2%BF%E0%B2%A6%E0%B3%8D%E0%B2%A6%E0%B3%80%E0%B2%B0%E0%B2%BF-%E0%B2%8E%E0%B2%82%E0%B2%A6-%E0%B2%B0%E0%B2%BE%E0%B2%B9%E0%B3%81%E0%B2%B2%E0%B3%8D-%E0%B2%97%E0%B2%BE%E0%B2%82%E0%B2%A7%E0%B2%BF-%E0%B2%B0%E0%B2%BE%E0%B2%B9%E0%B3%81%E0%B2%B2%E0%B3%8D-%E0%B2%AD%E0%B2%BE%E0%B2%B7%E0%B2%A3%E0%B2%95%E0%B3%8D%E0%B2%95%E0%B3%86-%E0%B2%AC%E0%B2%BF%E0%B2%9C%E0%B3%86%E0%B2%AA%E0%B2%BF-%E0%B2%86%E0%B2%95%E0%B3%8D%E0%B2%B7%E0%B3%87%E0%B2%AA</guid>
<description><![CDATA[ ಕಳೆದ ಮೂರ್ನಾಲ್ಕು ವಾರಗಳಿಂದ ಭಾರೀ ಗದ್ದಲ-ಗಲಾಟೆಗೆ ಸಾಕ್ಷಿಯಾಗಿದ್ದ ಲೋಕಸಭೆಯಲ್ಲಿ ಇಂದು ಕೊನೆಗೂ ರಾಹುಲ್ ಗಾಂಧಿಗೆ ಮಾತನಾಡಲು ಅವಕಾಶ ಸಿಕ್ತು. ಇದನ್ನು ಭರ್ಜರಿಯಾಗೇ ಬಳಸಿಕೊಂಡ ರಾಗಾ, ಅಮೆರಿಕದ ಜೊತೆಗಿನ ಒಪ್ಪಂದ ಪ್ರಶ್ನಿಸಿ ಅಕ್ಷರಶಃ ಕೇಂದ್ರದ ವಿರುದ್ಧ ಮುಗಿಬಿದ್ದರು. ಭಾರತ ಮಾತೆಯನ್ನು ಮಾರಿದ್ದೀರಿ ಅಂತೆಲ್ಲ ಗುಡುಗಿದ್ದಾರೆ. ಆದ್ರೆ ನಿರಾಧಾರ ಆರೋಪ ಅಂತ ಹಕ್ಕುಚ್ಯುತಿ ಸಂಕಷ್ಟ ಎದುರಾಗಿದೆ.ಗದ್ದಲ-ಗಲಾಟೆ.. ಡ್ರಾಮಾ ಅಲ್ಲ ಹೈಡ್ರಾಮಾ.. ಇದು ಸುಮಾರು 20 ದಿನಗಳಿಂದ ಲೋಕಸಭೆಯಲ್ಲಿ ಕಂಡುಬರುತ್ತಿರುವ ದೃಶ್ಯ.. ನರವಣೆ ಪುಸ್ತಕ ಪ್ರಸ್ತಾಪಿಸಿ ಗಲ್ವಾನ್‌ ಘರ್ಷಣೆ ವಿಚಾರ ಪ್ರಸ್ತಾಪಿಸಲು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮುಂದಾಗಿದ್ದರು. ಆದ್ರೆ ಆ ಪುಸ್ತಕ ಪ್ರಕಟವಾಗದ ಕಾರಣ ಸ್ಪೀಕರ್‌ ಓಂ ಬಿರ್ಲಾ ಅವಕಾಶ ನಿರಾಕರಿಸಿದ್ದರು. ಇದು ಆಡಳಿತ ವರ್ಸಸ್​ ವಿಪಕ್ಷ ಸದಸ್ಯರ ನಡುವೆ ವಾಗ್ಯುದ್ಧಕ್ಕೆ ರಣವೀಳ್ಯ ಕೊಟ್ಟಿತ್ತು. ರಾಹುಲ್​ಗೆ ಮಾತನಾಡಲು ಅವಕಾಶ ಬೇಕೆಂದು ಪ್ರತಿಭಟನೆ ಮಾಡಿ ಕಾಗದ ಎಸೆದ 8 ಸಂಸದರ ಅಮಾನತು ಪ್ರಹಸನ ಕೂಡ ನಡೆಯಿತು. ಇಷ್ಟೆಲ್ಲಾ ರಾದ್ಧಾಂತಗಳ ಬೆನ್ನಲ್ಲೇ ರಾಹುಲ್ ಗಾಂಧಿಗೆ ಲೋಕಸಭೆಯಲ್ಲಿ ಮಾತನಾಡಲು ಕೊನೆಗೂ ಸ್ಪೀಕರ್ ಅವಕಾಶ ಕೊಟ್ಟಿದ್ದಾರೆ.‘ಭಾರತ ಮಾತೆಯನ್ನು ಮಾರಾಟ ಮಾಡಿದ್ದೀರಿ’ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದಕ್ಕೆ ರಾಹುಲ್ ಕೆಂಡಇಂದು ಲೋಕಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆ ಮಾತನಾಡಿದ ರಾಹುಲ್‌ ಗಾಂಧಿ ಅಕ್ಷರಶಃ ಕೇಂದ್ರದ ವಿರುದ್ಧ ಕೆಂಡವಾಗಿದ್ರು. ಬಜೆಟ್‌ನಲ್ಲಿ ಎಐನಿಂದ ಉದ್ಭವಿಸಿರುವ ಉದ್ಯೋಗ ಸಮಸ್ಯೆಯನ್ನ ಪ್ರಸ್ತಾಪಿಸಿಲ್ಲ. ಅಲ್ಲದೇ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಟೀಕಾ ಪ್ರಹಾರ ನಡೆಸಿದ್ರು. ಮುಂದುವರೆದ ಅವರ ವಾಗ್ಬಾಣಗಳು, ಅಮೆರಿಕ ಜೊತೆಗಿನ ವ್ಯಾಪಾರ ಒಪ್ಪಂದದ ಮೇಲೂ ದಾಳಿ ಮಾಡಿದವು. ಭಾರತ ಯಾರಿಂದ ತೈಲ ಖರೀದಿಸಬೇಕು ಅಂತ ಅಮೆರಿಕ ನಿರ್ಧರಿಸುತ್ತಿದೆ. ಈ ವ್ಯಾಪಾರ ಒಪ್ಪಂದದ ಮೂಲಕ ಭಾರತ ಮಾತೆಯನ್ನು ಮಾರಾಟ ಮಾಡಿದ್ದೀರಿ. ನಿಮಗೆ ನಾಚಿಕೆ ಇಲ್ಲ. ಈ ಒಪ್ಪಂದವು ಸಂಪೂರ್ಣ ಶರಣಾಗತಿ. ರೈತರ ಹಿತಾಸಕ್ತಿಗಳನ್ನು ರಾಜಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ರು. 
ಮುಂದುವರೆದು ಮಾತನಾಡಿದ ರಾಹುಲ್, ಪ್ರಧಾನಿ ಮೋದಿ ಟ್ರಂಪ್‌ಗೆ ಶರಣಾಗಿಬಿಟ್ಟಿದ್ದಾರೆ. ಟ್ರಂಪ್‌ ಜೊತೆ ಸೇವಕರಂತೆ ಮಾತಾಡದೇ ಸರಿ ಸಮಾನರಂತೆ ಮಾತನಾಡಿ ಎಂದಿದ್ದಾರೆ. ಅಲ್ಲದೇ ನಾವು ಮತ್ತು ಪಾಕಿಸ್ತಾನ ಸರಿ ಸಮಾನವಲ್ಲ. ಭಾರತ ಅಪಾರ ಡಾಟಾವನ್ನ ಹೊಂದಿದೆ. ನಮ್ಮ ಭಾರತದ ಜನಸಂಖ್ಯೆಯೇ ಬಲು ದೊಡ್ಡ ಡಾಟಾ. ಇದುವೇ ಎಐ ಯುಗಕ್ಕೆ ಬಲುದೊಡ್ಡ ಸಂಪನ್ಮೂಲ. ಆದರೆ ನಮ್ಮ ಡಾಟಾವನ್ನ ಸರ್ಕಾರ ಉಚಿತವಾಗಿ ಅಮೆರಿಕಕ್ಕೆ ಅಪ್‌ಲೋಡ್‌ ಮಾಡ್ತಿದೆ ಅಂತಾನೂ ಸಿಡಿಗುಂಡು ಎಸೆದ್ರು. ವ್ಯಾಪಾರ ಡೀಲ್‌ನಲ್ಲಿ ಸಾಕಷ್ಟು ವ್ಯತ್ಯಾಸಗಳಿದ್ದು ನಾವು ಅಮೆರಿಕದ ಮುಂದೆ ಮೂರ್ಖರಾಗಿದ್ದೇವೆ ಅಂತ ಗರಂ ಆದ್ರು.ಇನ್ನು ಇಷ್ಟೆಲ್ಲ ಆರೋಪ ಮಾಡ್ತಿದ್ದಂತೆ ಕೇಂದ್ರ ಸರ್ಕಾರ ರಾಹುಲ್​ ಗಾಂಧಿ ವಿರುದ್ಧ ಹಕ್ಕು ಚ್ಯುತಿ ಮಂಡಿಸಲು ಮುಂದಾಗಿದೆ. ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಕ್ಕೆ, ಆಧಾರರಹಿತ ಆರೋಪ ಮಾಡಿದ್ದಕ್ಕೆ ರಾಹುಲ್ ವಿರುದ್ಧ ಹಕ್ಕುಚ್ಯುತಿ ಮಂಡಿಸಲಾಗುವುದು ಅಂತ ಕೇಂದ್ರ ಸಚಿವ ಕಿರಣ್​ ರಿಜಿಜು ಹೇಳಿದ್ದಾರೆ. ಭಾರತವನ್ನು ಯಾರೂ ಮಾರಲು ಸಾಧ್ಯವಿಲ್ಲ ಎಂದಿದ್ದಾರೆ. 
ಒಟ್ಟಾರೆ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಇಂದು ಅಕ್ಷರಶಃ ಕೆಂಡವಾಗಿದ್ರು. ಮೊದಲೇ ಮಾತನಾಡಲು ಅವಕಾಶ ಸಿಗದೇ ವಂಚಿತರಾಗಿದ್ದ ಅವರು ಇಂದು ಸಿಕ್ಕ ಅವಕಾಶವನ್ನು ಭರ್ಜರಿಯಾಗೇ ಬಳಸಿಕೊಂಡ್ರು. ಆದ್ರೆ ರಾಹುಲ್ ನಿರಾಧಾರ ಆರೋಪ ಮಾಡಿದ್ದಾರೆಂದು ಕೇಂದ್ರ ಹಕ್ಕುಚ್ಯುತಿ ಮಂಡಿಸಲು ಮುಂದಾಗಿದ್ದು ಸಂಕಷ್ಟ ಎದುರಾಗಲಿದೆ.ನ್ಯೂಸ್​ ಫಸ್ಟ್​ ಬ್ಯೂರೋ.ವಿಶೇಷ ಸೂಚನೆ: ಎಲ್ಲಾ DTH &amp; Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. ]]></description>
<enclosure url="https://img-cdn.publive.online/fit-in/1280x960/newsfirstlive-kannada/media/media_files/2026/02/11/rahul-gandhi-speech-in-lok-sabha-2026-02-11-19-31-08.jpg" length="49398" type="image/jpeg"/>
<pubDate>Thu, 12 Feb 2026 09:44:07 +0530</pubDate>
<dc:creator>Newsfirst</dc:creator>
<media:keywords>ಭಾರತ, ಮಾತೆಯನ್ನು, ಮಾರಾಟ, ಮಾಡಿದ್ದೀರಿ, ಎಂದ, ರಾಹುಲ್, ಗಾಂಧಿ:, ರಾಹುಲ್, ಭಾಷಣಕ್ಕೆ, ಬಿಜೆಪಿ, ಆಕ್ಷೇಪ</media:keywords>
</item>

<item>
<title>ವಿದೇಶ ಪ್ರವಾಸ ಹೊರಟ ಕಾಂಗ್ರೆಸ್‌ನ 25 ಶಾಸಕರು: ಪ್ರಾಯೋಜಕರು ಯಾರು? ಏತಕ್ಕಾಗಿ ಪ್ರವಾಸ ಎಂಬುದೇ ನಿಗೂಢ</title>
<link>https://thinkerr.in/%E0%B2%B5%E0%B2%BF%E0%B2%A6%E0%B3%87%E0%B2%B6-%E0%B2%AA%E0%B3%8D%E0%B2%B0%E0%B2%B5%E0%B2%BE%E0%B2%B8-%E0%B2%B9%E0%B3%8A%E0%B2%B0%E0%B2%9F-%E0%B2%95%E0%B2%BE%E0%B2%82%E0%B2%97%E0%B3%8D%E0%B2%B0%E0%B3%86%E0%B2%B8%E0%B3%8D%E0%B2%A8-25-%E0%B2%B6%E0%B2%BE%E0%B2%B8%E0%B2%95%E0%B2%B0%E0%B3%81-%E0%B2%AA%E0%B3%8D%E0%B2%B0%E0%B2%BE%E0%B2%AF%E0%B3%8B%E0%B2%9C%E0%B2%95%E0%B2%B0%E0%B3%81-%E0%B2%AF%E0%B2%BE%E0%B2%B0%E0%B3%81-%E0%B2%8F%E0%B2%A4%E0%B2%95%E0%B3%8D%E0%B2%95%E0%B2%BE%E0%B2%97%E0%B2%BF-%E0%B2%AA%E0%B3%8D%E0%B2%B0%E0%B2%B5%E0%B2%BE%E0%B2%B8-%E0%B2%8E%E0%B2%82%E0%B2%AC%E0%B3%81%E0%B2%A6%E0%B3%87-%E0%B2%A8%E0%B2%BF%E0%B2%97%E0%B3%82%E0%B2%A2</link>
<guid>https://thinkerr.in/%E0%B2%B5%E0%B2%BF%E0%B2%A6%E0%B3%87%E0%B2%B6-%E0%B2%AA%E0%B3%8D%E0%B2%B0%E0%B2%B5%E0%B2%BE%E0%B2%B8-%E0%B2%B9%E0%B3%8A%E0%B2%B0%E0%B2%9F-%E0%B2%95%E0%B2%BE%E0%B2%82%E0%B2%97%E0%B3%8D%E0%B2%B0%E0%B3%86%E0%B2%B8%E0%B3%8D%E0%B2%A8-25-%E0%B2%B6%E0%B2%BE%E0%B2%B8%E0%B2%95%E0%B2%B0%E0%B3%81-%E0%B2%AA%E0%B3%8D%E0%B2%B0%E0%B2%BE%E0%B2%AF%E0%B3%8B%E0%B2%9C%E0%B2%95%E0%B2%B0%E0%B3%81-%E0%B2%AF%E0%B2%BE%E0%B2%B0%E0%B3%81-%E0%B2%8F%E0%B2%A4%E0%B2%95%E0%B3%8D%E0%B2%95%E0%B2%BE%E0%B2%97%E0%B2%BF-%E0%B2%AA%E0%B3%8D%E0%B2%B0%E0%B2%B5%E0%B2%BE%E0%B2%B8-%E0%B2%8E%E0%B2%82%E0%B2%AC%E0%B3%81%E0%B2%A6%E0%B3%87-%E0%B2%A8%E0%B2%BF%E0%B2%97%E0%B3%82%E0%B2%A2</guid>
<description><![CDATA[ ರಾಜ್ಯ ಬಜೆಟ್​ ಸಮೀಪಿಸ್ತಿದೆ. ಈ ನಡುವೆಯೇ ರಾಜ್ಯದ 25ಕ್ಕೂ ಹೆಚ್ಚು ಕಾಂಗ್ರೆಸ್‌ ಶಾಸಕರ ವಿದೇಶ ಪ್ರವಾಸ  ಹಲ್​ಚಲ್​ ಸೃಷ್ಟಿಸಿದೆ. ಡಿಕೆ ಸಿಎಂ ಆಗಲು ಬೆಂಬಲಕ್ಕಾಗಿ ಶಾಸಕರಿಗೆ ವಿದೇಶ ಪ್ರವಾಸ ಮಾಡಿಸ್ತಿದ್ದಾರೆಂಬ ಚರ್ಚೆ ಕೇಳಿಬಂದಿತ್ತು. ಆದ್ರೆ ಹೊಸ ವಿಷಯ ಅಂದ್ರೆ ಈ ವಿದೇಶ ಪ್ರವಾಸದ ಬಗ್ಗೆ ಹಸ್ತ ಮನೆಯಲ್ಲೇ ಸ್ಪಷ್ಟ ಉತ್ತರವಿಲ್ಲ. ಶಾಸಕರು ತಮ್ಮ ದುಡ್ಡಲ್ಲಿ ಹೋದ್ರೇನು ಅಂತ ಸಿಎಂ ಇದಕ್ಕೂ ಖಾರವಾಗಿದ್ದಾರೆ.ಶಾಸಕರ‌ ವಿದೇಶ ಪ್ರವಾಸ.. ಸದ್ಯ ರಾಜ್ಯ ರಾಜಕಾರಣದಲ್ಲಿ ಅದರಲ್ಲೂ ಕಾಂಗ್ರೆಸ್​ ಪಾಳಯದಲ್ಲಿ ಕುರ್ಚಿ ವಿಚಾರ ಸಖತ್ ಸದ್ದು ಮಾಡ್ತಿದೆ. ಹೋದಲ್ಲಿ ಬಂದಲ್ಲಿ ಡಿಕೆ ಈ ಬಗ್ಗೆಯೇ ಮಾತಾಡೋ ಮೂಲಕ ವಿಚಾರವನ್ನ ಜೀವಂತವಾಗಿಡುತ್ತಿದ್ದಾರೆ. ಇದರ ಜೊತೆಗೆ ಶಾಸಕರ ವಿದೇಶ ಪ್ರವಾಸವೂ ಟಾಕ್​ ಆಫ್​ ರಾಜಕೀಯ ಪಡಸಾಲೆ ಆಗೋಗಿದೆ. ಅಲ್ಲದೇ ಈ ಪ್ರವಾಸದ ಬಗ್ಗೆ ಕೈ ಪಡೆಯೇ ಗೊಂದಲದ ಗೂಡಾಗಿದೆ.
ಶಾಸಕರ ವಿದೇಶ ಪ್ರವಾಸ ವಿಚಾರವಾಗಿ ಕಾಂಗ್ರೆಸ್‌ನಲ್ಲೇ ಸ್ಪಷ್ಟತೆ ಇಲ್ಲರಾಜ್ಯದ 25 ಶಾಸಕರಿಗೆ ವಿದೇಶ ಪ್ರವಾಸ ಆಯೋಜನೆ ವಿಚಾರ ಭಾರೀ ಸಂಚಲನ ಸೃಷ್ಟಿಸಿದೆ. ಪುಟ್ಟರಂಗಶೆಟ್ಟಿ, ರಾಘವೇಂದ್ರ ಹಿಟ್ನಾಳ್, ಅನಿಲ್ ಚಿಕ್ಕಮಾದು ಸೇರಿದಂತೆ ಕಾಂಗ್ರೆಸ್​ನ ಹಲವು ಶಾಸಕರು ವಿದೇಶ ಪ್ರವಾಸ ಮಾಡ್ತಿದ್ದಾರೆ. ತಮ್ಮ ಸ್ವಂತ ಖರ್ಚಿನಲ್ಲಿ ಕುಟುಂಬ ಸಮೇತ ಪ್ರವಾಸಕ್ಕೆ ಟಿಕೆಟ್ ಬುಕ್ ಮಾಡಿದ್ದು ಫೆಬ್ರವರಿ 18ರಂದು ಪ್ರವಾಸ ತೆರಳಲಿದ್ದಾರೆ. ಆದ್ರೆ ಇದು ಚರ್ಚೆಯಾಗಿದ್ದೇ ಬೇರೆ ವಿಚಾರಕ್ಕೆ.. ಅದರಲ್ಲೂ ಡಿಕೆ ಶಿವಕುಮಾರ್‌ ಸಿಎಂ ಆಗಲು ಬೆಂಬಲಕ್ಕಾಗಿ ಶಾಸಕರಿಗೆ ವಿದೇಶ ಪ್ರವಾಸ ಆಯೋಜಿಸಿದ್ದಾರೆ ಅಂತ ಗುಲ್ಲು ಎದ್ದಿತ್ತು. ಆದರೆ ವಿದೇಶ ಪ್ರವಾಸದ ವಿಚಾರದಲ್ಲಿ ಕಾಂಗ್ರೆಸ್‌ನಲ್ಲೇ ಸ್ಪಷ್ಟತೆ ಇಲ್ಲದಂತಾಗಿದೆ. ಈ ಬಗ್ಗೆ ಯಾರನ್ನ ಕೇಳಿದ್ರೂ ಹಾರಿಕೆಯ ಅಥವಾ ಜಾರಿಕೊಳ್ಳುವ ಉತ್ತರ ಕೊಡ್ತಿದ್ದಾರೆ.  ಅವರ ದುಡ್ಡಲ್ಲಿ ಹೋದ್ರೆ ತಪ್ಪೇನು ಎಂದ ಸಿದ್ದರಾಮಯ್ಯಇನ್ನು ಶಾಸಕರು ಅವರ ದುಡ್ಡಲ್ಲಿ ಪ್ರವಾಸ ಹೋದ್ರೆ ತಪ್ಪೇನು ಅಂತ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಅಲ್ಲದೇ ನನ್ನ ಗಮನಕ್ಕೆ ಇದು ಬಂದಿಲ್ಲ ಎಂದಿದ್ದಾರೆ. ಅಲ್ಲದೇ ಈ ವಿಚಾರವೇ ನಮಗೆ ಗೊತ್ತಿಲ್ಲ ಎಂದಿದ್ದಾರೆ.ವಿದೇಶ ಪ್ರವಾಸಕ್ಕೂ ಡಿಕೆಶಿಗೂ ಸಂಬಂಧವಿಲ್ಲ ಎಂದ ಜಾರಕಿಹೊಳಿವಿದೇಶ ಪ್ರವಾಸ,  ಸರ್ಕಾರಿ ಕಾರ್ಯಕ್ರಮ ಅಂತ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಶಾಸಕರ ಫಾರಿನ್ ಟ್ರಿಪ್ ಹಾಗೂ ಡಿಕೆ ದೆಹಲಿ ಟ್ರಿಪ್ ವಿಚಾರವಾಗಿ ಸಚಿವ ಮಾತನಾಡಿದ್ದು, ಡಿಕೆಶಿ ದೆಹಲಿ ಪ್ರವಾಸ ಹೊಸದೇನಲ್ಲ ಅಂತಾನೂ ಹೇಳಿದ್ದಾರೆ.ಸಚಿವ ವೆಂಕಟೇಶ್ ಕರೆದುಕೊಂಡು ಹೋಗ್ತಿದ್ದಾರೆಂದ ಪುಟ್ಟರಂಗಶೆಟ್ಟಿಇನ್ನು ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟಿ, ನಮ್ಮನ್ನು ಸಚಿವ ವೆಂಕಟೇಶ್ ಕರೆದುಕೊಂಡು ಹೋಗ್ತಾರೆ. ಪ್ರವಾಸದ ಬಗ್ಗೆ ಸಿಎಂ ಗಮನಕ್ಕೆ ಇರುತ್ತೆ. ಬಜೆಟ್ ಒಳಗೆ ಪ್ರವಾಸ ಮುಗಿಸಿ ವಾಪಸ್ ಬರುತ್ತೇವೆ ಎಂದಿದ್ದಾರೆ.ಒಟ್ಟಾರೆ ಶಾಸಕರ ವಿದೇಶ ಪ್ರವಾಸ ಕಾಂಗ್ರೆಸ್ ಮನೆಯಲ್ಲಿ ಸಖತ್ ಸದ್ದು ಮಾಡ್ತಿದೆ. ಆದ್ರೆ ಈ ಬಗ್ಗೆ ಸಿಎಂಗೇ ಮಾಹಿತಿ ಇಲ್ಲ ಅಂದಿದ್ದು ಹಲವು ಪ್ರಶ್ನೆ ಉದ್ಭವವಾಗುವಂತೆ ಮಾಡಿವೆ. 

ಹರೀಶ್​ ಕಾಕೋಳ್​, ಪೊಲಿಟಿಕಲ್ ಬ್ಯೂರೋ, ನ್ಯೂಸ್​ ಫಸ್ಟ್​ ವಿಶೇಷ ಸೂಚನೆ: ಎಲ್ಲಾ DTH &amp; Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. ]]></description>
<enclosure url="https://img-cdn.publive.online/fit-in/1280x960/newsfirstlive-kannada/media/media_files/2026/02/11/congress-mla-foriegn-tour-2026-02-11-18-44-45.jpg" length="49398" type="image/jpeg"/>
<pubDate>Thu, 12 Feb 2026 09:44:07 +0530</pubDate>
<dc:creator>Newsfirst</dc:creator>
<media:keywords>ವಿದೇಶ, ಪ್ರವಾಸ, ಹೊರಟ, ಕಾಂಗ್ರೆಸ್‌ನ, ಶಾಸಕರು:, ಪ್ರಾಯೋಜಕರು, ಯಾರು, ಏತಕ್ಕಾಗಿ, ಪ್ರವಾಸ, ಎಂಬುದೇ, ನಿಗೂಢ</media:keywords>
</item>

<item>
<title>ಬೆಂಗಳೂರಿನಲ್ಲಿ ಹಿರಿಯ ಪತ್ರಕರ್ತ ಪಿ.ರಾಮಯ್ಯ ವಿಧಿವಶ: ಸಿಎಂ, ಎಚ್‌ಡಿಕೆಯಿಂದ ಸಂತಾಪ</title>
<link>https://thinkerr.in/%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B2%BF%E0%B2%A8%E0%B2%B2%E0%B3%8D%E0%B2%B2%E0%B2%BF-%E0%B2%B9%E0%B2%BF%E0%B2%B0%E0%B2%BF%E0%B2%AF-%E0%B2%AA%E0%B2%A4%E0%B3%8D%E0%B2%B0%E0%B2%95%E0%B2%B0%E0%B3%8D%E0%B2%A4-%E0%B2%AA%E0%B2%BF%E0%B2%B0%E0%B2%BE%E0%B2%AE%E0%B2%AF%E0%B3%8D%E0%B2%AF-%E0%B2%B5%E0%B2%BF%E0%B2%A7%E0%B2%BF%E0%B2%B5%E0%B2%B6-%E0%B2%B8%E0%B2%BF%E0%B2%8E%E0%B2%82-%E0%B2%8E%E0%B2%9A%E0%B3%8D%E0%B2%A1%E0%B2%BF%E0%B2%95%E0%B3%86%E0%B2%AF%E0%B2%BF%E0%B2%82%E0%B2%A6-%E0%B2%B8%E0%B2%82%E0%B2%A4%E0%B2%BE%E0%B2%AA</link>
<guid>https://thinkerr.in/%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B2%BF%E0%B2%A8%E0%B2%B2%E0%B3%8D%E0%B2%B2%E0%B2%BF-%E0%B2%B9%E0%B2%BF%E0%B2%B0%E0%B2%BF%E0%B2%AF-%E0%B2%AA%E0%B2%A4%E0%B3%8D%E0%B2%B0%E0%B2%95%E0%B2%B0%E0%B3%8D%E0%B2%A4-%E0%B2%AA%E0%B2%BF%E0%B2%B0%E0%B2%BE%E0%B2%AE%E0%B2%AF%E0%B3%8D%E0%B2%AF-%E0%B2%B5%E0%B2%BF%E0%B2%A7%E0%B2%BF%E0%B2%B5%E0%B2%B6-%E0%B2%B8%E0%B2%BF%E0%B2%8E%E0%B2%82-%E0%B2%8E%E0%B2%9A%E0%B3%8D%E0%B2%A1%E0%B2%BF%E0%B2%95%E0%B3%86%E0%B2%AF%E0%B2%BF%E0%B2%82%E0%B2%A6-%E0%B2%B8%E0%B2%82%E0%B2%A4%E0%B2%BE%E0%B2%AA</guid>
<description><![CDATA[ ವಿಧಾನಪರಿಷತ್ ಮಾಜಿ ಸದಸ್ಯ ಹಾಗೂ ಹಿರಿಯ ಪತ್ರಕರ್ತ ಪಿ.ರಾಮಯ್ಯ ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ಪಿ.ರಾಮಯ್ಯ ಅವರಿಗೆ ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದಾರೆ. ಅನಾರೋಗ್ಯದಿಂದ ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಗೆ ದಾಖಲಾಗಿ ಪಿ.ರಾಮಯ್ಯ ಚಿಕಿತ್ಸೆ ಪಡೆಯುತ್ತಿದ್ದರು. ವಿವಿಧ ಅಂಗಾಂಗ ವೈಫಲ್ಯದಿಂದ ಮಂಗಳವಾರ ರಾತ್ರಿ ಪಿ.ರಾಮಯ್ಯ ನಿಧನರಾಗಿದ್ದಾರೆ ಎಂದು ಅವರ ಪುತ್ರ ಡಾ.ಬಾಲಾಜಿ ಮಾಹಿತಿ ನೀಡಿದ್ದಾರೆ. ದಿ ಹಿಂದೂ ಪತ್ರಿಕೆಯಲ್ಲಿ ಐದು ದಶಕಗಳ ಕಾಲ ವಿವಿಧ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಹಿಂದೂ ರಾಮಯ್ಯ ಎಂದೇ ಪಿ.ರಾಮಯ್ಯ ಅವರು ಹೆಸರಾಗಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ, ಪುರಸ್ಕಾರಗಳನ್ನ ನೀಡಿ ಪಿ.ರಾಮಯ್ಯ ಅವರ ಸೇವೆ, ಸಾಧನೆಗೆ ಗೌರವ ಸಲ್ಲಿಸಲಾಗಿತ್ತು. ಸಣ್ಣ ಪತ್ರಿಕೆಗಳ ಸಮಸ್ಯೆಯ ಅಧ್ಯಯನಕ್ಕಾಗಿ ರಚಿಸಲಾಗಿದ್ದ ಸಮಿತಿಯ ಅಧ್ಯಕ್ಷರಾಗಿದ್ದರು.  ಬೆಂಗಳೂರಿನ ಸದಾಶಿವನಗರದ ಕ್ಲಬ್‌ ಸಮೀಪ ಇರುವ ಮನೆಯಲ್ಲಿ ಪಿ.ರಾಮಯ್ಯ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗಿದೆ. ಇಂದು ಸಿಎಂ ಸಿದ್ದರಾಮಯ್ಯ ಅವರು ಪಿ.ರಾಮಯ್ಯ ಅವರ ಮನೆಗೆ ಭೇಟಿ ನೀಡಿ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ. ಪಿ.ರಾಮಯ್ಯ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಟ್ವೀಟರ್ ನಲ್ಲಿ ಪಿ.ರಾಮಯ್ಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ನನ್ನ ಬಗ್ಗೆ ಮಮತೆಯನ್ನು ಹೊಂದಿದ್ದರು ಎಂದು ಕುಮಾರಸ್ವಾಮಿ ಅವರು ಪಿ.ರಾಮಯ್ಯ ಅವರನ್ನು ಸ್ಮರಿಸಿಕೊಂಡಿದ್ದಾರೆ. 


ಹಿರಿಯರು, ವಿಧಾನ ಪರಿಷತ್ ಮಾಜಿ ಸದಸ್ಯರು, ಕರ್ನಾಟಕ ಪತ್ರಿಕೋದ್ಯಮದ ಮಹಾವೃಕ್ಷ ಎಂದೇ ಹೆಸರಾಗಿದ್ದ ನನ್ನ ಗುರು, ಪಿತೃ ಸಮಾನರೂ ಆಗಿದ್ದ ಶ್ರೀ ಪಿ. ರಾಮಯ್ಯನವರು ನಿಧನರಾದರೆಂಬ ವಾರ್ತೆ ಕೇಳಿ ಬಹಳ ದುಃಖವಾಯಿತು.ಮಾನವೀಯತೆ, ಪ್ರಾಮಾಣಿಕತೆ ಹಾಗೂ ಮೌಲ್ಯಾಧರಿತ ಪತ್ರಿಕಾ ಧರ್ಮದ ಶ್ರೇಷ್ಠ ಪತಿನಿಧಿಯಾಗಿದ್ದ ಅವರು, ಜನಮಾನಸದಲ್ಲಿ ಹಿಂದೂ ರಾಮಯ್ಯ… pic.twitter.com/lWg0z3dS6W
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) February 10, 2026
ವಿಶೇಷ ಸೂಚನೆ: ಎಲ್ಲಾ DTH &amp; Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.


 ]]></description>
<enclosure url="https://img-cdn.publive.online/fit-in/1280x960/newsfirstlive-kannada/media/media_files/2026/02/11/hindu-ramaiah-is-no-more-1-2026-02-11-15-03-53.jpg" length="49398" type="image/jpeg"/>
<pubDate>Thu, 12 Feb 2026 09:44:07 +0530</pubDate>
<dc:creator>Newsfirst</dc:creator>
<media:keywords>ಬೆಂಗಳೂರಿನಲ್ಲಿ, ಹಿರಿಯ, ಪತ್ರಕರ್ತ, ಪಿ.ರಾಮಯ್ಯ, ವಿಧಿವಶ:, ಸಿಎಂ, ಎಚ್‌ಡಿಕೆಯಿಂದ, ಸಂತಾಪ</media:keywords>
</item>

<item>
<title>ನಿಧಾನವಾದರೂ ಪರವಾಗಿಲ್ಲ, ಸಿದ್ದರಾಮಯ್ಯ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ ಎಂದ ಡಿ.ಕೆ.ಸುರೇಶ್‌ : ರಾಂಗ್ ಆದ ಸಿದ್ದರಾಮಯ್ಯ</title>
<link>https://thinkerr.in/%E0%B2%A8%E0%B2%BF%E0%B2%A7%E0%B2%BE%E0%B2%A8%E0%B2%B5%E0%B2%BE%E0%B2%A6%E0%B2%B0%E0%B3%82-%E0%B2%AA%E0%B2%B0%E0%B2%B5%E0%B2%BE%E0%B2%97%E0%B2%BF%E0%B2%B2%E0%B3%8D%E0%B2%B2-%E0%B2%B8%E0%B2%BF%E0%B2%A6%E0%B3%8D%E0%B2%A6%E0%B2%B0%E0%B2%BE%E0%B2%AE%E0%B2%AF%E0%B3%8D%E0%B2%AF-%E0%B2%95%E0%B3%8A%E0%B2%9F%E0%B3%8D%E0%B2%9F-%E0%B2%AE%E0%B2%BE%E0%B2%A4%E0%B3%81-%E0%B2%89%E0%B2%B3%E0%B2%BF%E0%B2%B8%E0%B2%BF%E0%B2%95%E0%B3%8A%E0%B2%B3%E0%B3%8D%E0%B2%B3%E0%B3%81%E0%B2%A4%E0%B3%8D%E0%B2%A4%E0%B2%BE%E0%B2%B0%E0%B3%86-%E0%B2%8E%E0%B2%82%E0%B2%A6-%E0%B2%A1%E0%B2%BF%E0%B2%95%E0%B3%86%E0%B2%B8%E0%B3%81%E0%B2%B0%E0%B3%87%E0%B2%B6%E0%B3%8D-%E0%B2%B0%E0%B2%BE%E0%B2%82%E0%B2%97%E0%B3%8D-%E0%B2%86%E0%B2%A6-%E0%B2%B8%E0%B2%BF%E0%B2%A6%E0%B3%8D%E0%B2%A6%E0%B2%B0%E0%B2%BE%E0%B2%AE%E0%B2%AF%E0%B3%8D%E0%B2%AF</link>
<guid>https://thinkerr.in/%E0%B2%A8%E0%B2%BF%E0%B2%A7%E0%B2%BE%E0%B2%A8%E0%B2%B5%E0%B2%BE%E0%B2%A6%E0%B2%B0%E0%B3%82-%E0%B2%AA%E0%B2%B0%E0%B2%B5%E0%B2%BE%E0%B2%97%E0%B2%BF%E0%B2%B2%E0%B3%8D%E0%B2%B2-%E0%B2%B8%E0%B2%BF%E0%B2%A6%E0%B3%8D%E0%B2%A6%E0%B2%B0%E0%B2%BE%E0%B2%AE%E0%B2%AF%E0%B3%8D%E0%B2%AF-%E0%B2%95%E0%B3%8A%E0%B2%9F%E0%B3%8D%E0%B2%9F-%E0%B2%AE%E0%B2%BE%E0%B2%A4%E0%B3%81-%E0%B2%89%E0%B2%B3%E0%B2%BF%E0%B2%B8%E0%B2%BF%E0%B2%95%E0%B3%8A%E0%B2%B3%E0%B3%8D%E0%B2%B3%E0%B3%81%E0%B2%A4%E0%B3%8D%E0%B2%A4%E0%B2%BE%E0%B2%B0%E0%B3%86-%E0%B2%8E%E0%B2%82%E0%B2%A6-%E0%B2%A1%E0%B2%BF%E0%B2%95%E0%B3%86%E0%B2%B8%E0%B3%81%E0%B2%B0%E0%B3%87%E0%B2%B6%E0%B3%8D-%E0%B2%B0%E0%B2%BE%E0%B2%82%E0%B2%97%E0%B3%8D-%E0%B2%86%E0%B2%A6-%E0%B2%B8%E0%B2%BF%E0%B2%A6%E0%B3%8D%E0%B2%A6%E0%B2%B0%E0%B2%BE%E0%B2%AE%E0%B2%AF%E0%B3%8D%E0%B2%AF</guid>
<description><![CDATA[ ಅಧಿಕಾರ ಹಂಚಿಕೆ ವಿಚಾರಕ್ಕೆ  ಸಿಎಂ ಸಿದ್ದರಾಮಯ್ಯ ರಾಂಗ್ ಆಗಿದ್ದಾರೆ.  ಪದೇ ಪದೇ ಅದೇ ವಿಚಾರವನ್ನ ಯಾಕೆ ಕೇಳ್ತೀರಾ ಎಂದು ಸಿಎಂ  ಸಿದ್ದರಾಮಯ್ಯ ಹೇಳಿದ್ದಾರೆ.  ಹೈಕಮಾಂಡ್‌ ಹೇಳಿದಂತೆ ಕೇಳುತ್ತೇನೆ ಎಂದು  ಸಿಎಂ ಸ್ಪಷ್ಟಪಡಿಸಿದ್ದಾರೆ.   ಈಗಾಗಲೇ  ಡಿಸಿಎಂ ಡಿ.ಕೆ.ಶಿವಕುಮಾರ್‌ ದೆಹಲಿಗೆ ತೆರಳಿದ್ದಾರೆ. ರಾಜಕಾರಣಕ್ಕಾಗಿ ದೆಹಲಿಗೆ ಹೋಗುತ್ತಿರುವುದಾಗಿ  ಡಿಕೆಶಿ ಸ್ಪಷ್ಟವಾಗಿ ಹೇಳಿದ್ದಾರೆ . ಈ ನಡುವೆ ಇವತ್ತು ಈ ವಿಚಾರದ ಬಗ್ಗೆ ಪ್ರಶ್ನಿಸಿದ ಮಾಧ್ಯಮ ಪ್ರತಿನಿಧಿಗಳ ಮುಂದೆ ಸಿಎಂ ಸಿದ್ದರಾಮಯ್ಯ ರಾಂಗ್‌ ಆದರು. ನಿನ್ನೆ ದೆಹಲಿಗೆ ಹೊರಡುವ ಮುನ್ನಾ ಒಪ್ಪಂದದ ಬಗ್ಗೆ ಡಿಸಿಎಂ  ಡಿಕೆಶಿವಕುಮಾರ್‌ ಮಾತನಾಡಿದ್ದಾರೆ.  ಕದ್ದು ಮುಚ್ಚಿ ಮಾತಾಡಿಲ್ಲ. ಸಿದ್ದರಾಮಯ್ಯ ಉಪಸ್ಥಿತಿಯಲ್ಲಿ ಹೈಕಮಾಂಡ್‌ ಮುಂದೆ ಮಾತುಕತೆ ಆಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.  ಇವತ್ತು ಇದೇ ವಿಚಾರ ಪ್ರಸ್ತಾಪಿಸಿ ಡಿಕೆ ಸುರೇಶ್‌ ಕೂಡ ಮಾತನಾಡಿದ್ದಾರೆ. ಬೆಂಗಳೂರಿನಲ್ಲಿ ಮಾಜಿ ಸಂಸದ‌ ಡಿ.ಕೆ. ಸುರೇಶ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.  ನನಗೆ ಈಗಲೂ ಭರವಸೆ ಇದೆ. ಸಿದ್ದರಾಮಯ್ಯ ನಿಧಾನವಾದ್ರೂ ಪರವಾಗಿಲ್ಲ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ  ಎಂಬ ವಿಶ್ವಾಸವಿದೆ ಎಂದು ಡಿ.ಕೆ.ಸುರೇಶ್ ಹೇಳಿದ್ದಾರೆ. ನನ್ನ ತಂದೆ ಪೂರ್ಣಾವಧಿ ಸಿಎಂ ಎಂಬ  ಪುತ್ರ ‌ಯತೀಂದ್ರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಸುರೇಶ್,  ಅವರ ಮಾತೇ ನಮಗೆ ವೇದ ವಾಕ್ಯ , ಅವರು ಹೇಳಿದ ಮೇಲೆ ಅದೇ ಫೈನಲ್ ಎಂದು ತಿರುಗೇಟು ನೀಡಿದ್ದಾರೆ. ಸುರೇಶ್‌ ಮಾತಿನ ಬಗ್ಗೆ ಪ್ರಶ್ನೆಗೂ ಸಿದ್ದರಾಮಯ್ಯ ಗರಂ ಆಗಿದ್ದರು.  ಅದರ ಬಗ್ಗೆ ಸುರೇಶ್‌ನೇ ಕೇಳಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ದೆಹಲಿಯಲ್ಲಿ ಡಿಕೆ ಶಿವಕುಮಾರ್‌ ಮಾತನಾಡಿದ್ದಾರೆ.   ಡಿಕೆ ಸುರೇಶ್ ರವರ ಹೇಳಿಕೆಗೆ ಅಣ್ಣ  ಡಿಕೆ ಶಿವಕುಮಾರ್ ‌ ಮುಗುಳ್ನಕ್ಕಿದ್ದಾರೆ.   ನಾನು ಕಾಲ ಉತ್ತರ ಕೊಡುತ್ತೆ ಅಂತಾ ಹೇಳಿದಿನಿ. ನಾನು ಏನು ಮಾತನಾಡಿದ್ದೀವಿ,  ನಮಗೆ ಮಾತ್ರ ಗೊತ್ತು ಅಂತಾ ಹೇಳಿದ್ದೀನಿ.  ಟೈಮ್ ನೋಡಿ ಹೇಳುತ್ತೇನೆ. ರಾಹುಲ್ ಗಾಂಧಿ ಭೇಟಿಯಾಗಲು  ನಾನು ಇನ್ನೂ ಸಮಯ ಕೇಳಿಲ್ಲ.  ಪ್ರಿಯಾಂಕಾ ಗಾಂಧಿ ಭೇಟಿಯಾಗಿ ಅಸ್ಸಾಂ ಚುನಾವಣೆ ವಿಚಾರದ ಬಗ್ಗೆ ಮಾತಾಡಿದ್ದೇನೆ.  ನಾನು ಯಾರನ್ನ ಭೇಟಿ ಮಾಡಿಲ್ಲ.   ಯಾಕೆ ಸುಮ್ಮನೇ ವಿಭಿನ್ನ ರೀತಿಯಲ್ಲಿ ಬೇಡ, ಮಾತ‌ನಾಡುತ್ತೆೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ವಿಶೇಷ ಸೂಚನೆ: ಎಲ್ಲಾ DTH &amp; Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. ]]></description>
<enclosure url="https://img-cdn.publive.online/fit-in/1280x960/newsfirstlive-kannada/media/media_files/2026/02/11/dk-brothers-in-delhi-2026-02-11-13-57-18.jpg" length="49398" type="image/jpeg"/>
<pubDate>Thu, 12 Feb 2026 09:44:07 +0530</pubDate>
<dc:creator>Newsfirst</dc:creator>
<media:keywords>ನಿಧಾನವಾದರೂ, ಪರವಾಗಿಲ್ಲ, ಸಿದ್ದರಾಮಯ್ಯ, ಕೊಟ್ಟ, ಮಾತು, ಉಳಿಸಿಕೊಳ್ಳುತ್ತಾರೆ, ಎಂದ, ಡಿ.ಕೆ.ಸುರೇಶ್‌, ರಾಂಗ್, ಆದ, ಸಿದ್ದರಾಮಯ್ಯ</media:keywords>
</item>

<item>
<title>ಬಿಜೆಪಿ ಮುಖಂಡ ಬಿ.ಡಿ.ಭೂಕಾಂತ್‌ಗೆ ರಾಜ್ಯ ಸಚಿವ ಸ್ಥಾನಮಾನದ ಹುದ್ದೆ ನೀಡಿಕೆ !: ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಪೋಟ</title>
<link>https://thinkerr.in/%E0%B2%AC%E0%B2%BF%E0%B2%9C%E0%B3%86%E0%B2%AA%E0%B2%BF-%E0%B2%AE%E0%B3%81%E0%B2%96%E0%B2%82%E0%B2%A1-%E0%B2%AC%E0%B2%BF%E0%B2%A1%E0%B2%BF%E0%B2%AD%E0%B3%82%E0%B2%95%E0%B2%BE%E0%B2%82%E0%B2%A4%E0%B3%8D%E0%B2%97%E0%B3%86-%E0%B2%B0%E0%B2%BE%E0%B2%9C%E0%B3%8D%E0%B2%AF-%E0%B2%B8%E0%B2%9A%E0%B2%BF%E0%B2%B5-%E0%B2%B8%E0%B3%8D%E0%B2%A5%E0%B2%BE%E0%B2%A8%E0%B2%AE%E0%B2%BE%E0%B2%A8%E0%B2%A6-%E0%B2%B9%E0%B3%81%E0%B2%A6%E0%B3%8D%E0%B2%A6%E0%B3%86-%E0%B2%A8%E0%B3%80%E0%B2%A1%E0%B2%BF%E0%B2%95%E0%B3%86-%E0%B2%95%E0%B2%BE%E0%B2%82%E0%B2%97%E0%B3%8D%E0%B2%B0%E0%B3%86%E0%B2%B8%E0%B3%8D-%E0%B2%A8%E0%B2%B2%E0%B3%8D%E0%B2%B2%E0%B2%BF-%E0%B2%85%E0%B2%B8%E0%B2%AE%E0%B2%BE%E0%B2%A7%E0%B2%BE%E0%B2%A8-%E0%B2%B8%E0%B3%8D%E0%B2%AA%E0%B3%8B%E0%B2%9F</link>
<guid>https://thinkerr.in/%E0%B2%AC%E0%B2%BF%E0%B2%9C%E0%B3%86%E0%B2%AA%E0%B2%BF-%E0%B2%AE%E0%B3%81%E0%B2%96%E0%B2%82%E0%B2%A1-%E0%B2%AC%E0%B2%BF%E0%B2%A1%E0%B2%BF%E0%B2%AD%E0%B3%82%E0%B2%95%E0%B2%BE%E0%B2%82%E0%B2%A4%E0%B3%8D%E0%B2%97%E0%B3%86-%E0%B2%B0%E0%B2%BE%E0%B2%9C%E0%B3%8D%E0%B2%AF-%E0%B2%B8%E0%B2%9A%E0%B2%BF%E0%B2%B5-%E0%B2%B8%E0%B3%8D%E0%B2%A5%E0%B2%BE%E0%B2%A8%E0%B2%AE%E0%B2%BE%E0%B2%A8%E0%B2%A6-%E0%B2%B9%E0%B3%81%E0%B2%A6%E0%B3%8D%E0%B2%A6%E0%B3%86-%E0%B2%A8%E0%B3%80%E0%B2%A1%E0%B2%BF%E0%B2%95%E0%B3%86-%E0%B2%95%E0%B2%BE%E0%B2%82%E0%B2%97%E0%B3%8D%E0%B2%B0%E0%B3%86%E0%B2%B8%E0%B3%8D-%E0%B2%A8%E0%B2%B2%E0%B3%8D%E0%B2%B2%E0%B2%BF-%E0%B2%85%E0%B2%B8%E0%B2%AE%E0%B2%BE%E0%B2%A7%E0%B2%BE%E0%B2%A8-%E0%B2%B8%E0%B3%8D%E0%B2%AA%E0%B3%8B%E0%B2%9F</guid>
<description><![CDATA[ ಬಿಜೆಪಿ ಮುಖಂಡನಿಗೆ ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ  ರಾಜ್ಯ ಸಚಿವ ಸ್ಥಾನಮಾನ ನೀಡಲಾಗಿದೆ. ಶಿಕಾರಿಪುರದ ಬಿಜೆಪಿ ಮುಖಂಡ ಬಿ.ಡಿ.ಭೂಕಾಂತ್​ಗೆ  ರಾಜ್ಯ ಸಚಿವ  ಸ್ಥಾನಮಾನ ನೀಡಲಾಗಿದೆ. ಫೆಬ್ರವರಿ 7ನೇ ತಾರೀಖು 54 ನಿಗಮ-ಮಂಡಳಿ ಅಧ್ಯಕ್ಷರ ನೇಮಕವನ್ನು ಮಾಡಿ ರಾಜ್ಯ  ಸರ್ಕಾರ ಆದೇಶ ಹೊರಡಿಸಿದೆ. ಇದರಲ್ಲಿ ಬಿಜೆಪಿ ಮುಖಂಡ ಬಿ.ಡಿ.ಭೂಕಾಂತ್‌ಗೆ ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳಿ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ. ಜೊತೆಗೆ ರಾಜ್ಯ ಸಚಿವ ಸ್ಥಾನಮಾನವನ್ನು ಸಹ ನೀಡಲಾಗಿದೆ. ಇದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.  ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಆಂತರಿಕ ಅಸಮಾಧಾನ ಸೃಷ್ಟಿಯಾಗಿದೆ. ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳಿ ಅಧ್ಯಕ್ಷರಾಗಿ ನೇಮಕ ಮಾಡಿದ್ದು ಏಕೆ ಎಂದು ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ.  ಭೂಕಾಂತ್ ಅವರ ಪತ್ನಿ ಕೂಡ ಬಿಜೆಪಿಯಿಂದ ಜಿಲ್ಲಾ ಪಂಚಾಯತಿ ಸದಸ್ಯೆಯಾಗಿದ್ದರು.  ರಾಜ್ಯ ಸರ್ಕಾರದ ಆದೇಶವೇ ಈಗ ಸ್ವಪಕ್ಷ ಕಾಂಗ್ರೆಸ್  ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ. ಶಾಸಕರಿಗೆ ಪ್ರಮುಖ ನಿಗಮ ಮಂಡಳಿ ಸ್ಥಾನಮಾನ ಅನ್ವಯವಾಗುವಂತೆ ಸರ್ಕಾರ ಆದೇಶ ಮಾಡಿದೆ.  ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಶಿಷ್ಟಾಚಾರ ವಿಭಾಗದಿಂದ ಆದೇಶ ಮಾಡಲಾಗಿದೆ. ವಿಶೇಷ ಸೂಚನೆ: ಎಲ್ಲಾ DTH &amp; Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ ]]></description>
<enclosure url="https://img-cdn.publive.online/fit-in/1280x960/newsfirstlive-kannada/media/media_files/2026/02/11/bjp-leader-b-d-bhookantha-2026-02-11-13-02-35.jpg" length="49398" type="image/jpeg"/>
<pubDate>Thu, 12 Feb 2026 09:44:07 +0530</pubDate>
<dc:creator>Newsfirst</dc:creator>
<media:keywords>ಬಿಜೆಪಿ, ಮುಖಂಡ, ಬಿ.ಡಿ.ಭೂಕಾಂತ್‌ಗೆ, ರಾಜ್ಯ, ಸಚಿವ, ಸ್ಥಾನಮಾನದ, ಹುದ್ದೆ, ನೀಡಿಕೆ, ಕಾಂಗ್ರೆಸ್, ನಲ್ಲಿ, ಅಸಮಾಧಾನ, ಸ್ಪೋಟ</media:keywords>
</item>

<item>
<title>ಲೆಕ್ಸಾಸ್ ಕಂಪನಿಯ ಹೊಸ ಕಾರ್ ಖರೀದಿಸಿದ ಡಿಸಿಎಂ ಡಿಕೆಶಿ : ಹೊಸ ಸದಸ್ಯನ ಸ್ವಾಗತಿಸಿದ ಡಿಕೆಶಿ ಪತ್ನಿ ಉಷಾ</title>
<link>https://thinkerr.in/%E0%B2%B2%E0%B3%86%E0%B2%95%E0%B3%8D%E0%B2%B8%E0%B2%BE%E0%B2%B8%E0%B3%8D-%E0%B2%95%E0%B2%82%E0%B2%AA%E0%B2%A8%E0%B2%BF%E0%B2%AF-%E0%B2%B9%E0%B3%8A%E0%B2%B8-%E0%B2%95%E0%B2%BE%E0%B2%B0%E0%B3%8D-%E0%B2%96%E0%B2%B0%E0%B3%80%E0%B2%A6%E0%B2%BF%E0%B2%B8%E0%B2%BF%E0%B2%A6-%E0%B2%A1%E0%B2%BF%E0%B2%B8%E0%B2%BF%E0%B2%8E%E0%B2%82-%E0%B2%A1%E0%B2%BF%E0%B2%95%E0%B3%86%E0%B2%B6%E0%B2%BF-%E0%B2%B9%E0%B3%8A%E0%B2%B8-%E0%B2%B8%E0%B2%A6%E0%B2%B8%E0%B3%8D%E0%B2%AF%E0%B2%A8-%E0%B2%B8%E0%B3%8D%E0%B2%B5%E0%B2%BE%E0%B2%97%E0%B2%A4%E0%B2%BF%E0%B2%B8%E0%B2%BF%E0%B2%A6-%E0%B2%A1%E0%B2%BF%E0%B2%95%E0%B3%86%E0%B2%B6%E0%B2%BF-%E0%B2%AA%E0%B2%A4%E0%B3%8D%E0%B2%A8%E0%B2%BF-%E0%B2%89%E0%B2%B7%E0%B2%BE</link>
<guid>https://thinkerr.in/%E0%B2%B2%E0%B3%86%E0%B2%95%E0%B3%8D%E0%B2%B8%E0%B2%BE%E0%B2%B8%E0%B3%8D-%E0%B2%95%E0%B2%82%E0%B2%AA%E0%B2%A8%E0%B2%BF%E0%B2%AF-%E0%B2%B9%E0%B3%8A%E0%B2%B8-%E0%B2%95%E0%B2%BE%E0%B2%B0%E0%B3%8D-%E0%B2%96%E0%B2%B0%E0%B3%80%E0%B2%A6%E0%B2%BF%E0%B2%B8%E0%B2%BF%E0%B2%A6-%E0%B2%A1%E0%B2%BF%E0%B2%B8%E0%B2%BF%E0%B2%8E%E0%B2%82-%E0%B2%A1%E0%B2%BF%E0%B2%95%E0%B3%86%E0%B2%B6%E0%B2%BF-%E0%B2%B9%E0%B3%8A%E0%B2%B8-%E0%B2%B8%E0%B2%A6%E0%B2%B8%E0%B3%8D%E0%B2%AF%E0%B2%A8-%E0%B2%B8%E0%B3%8D%E0%B2%B5%E0%B2%BE%E0%B2%97%E0%B2%A4%E0%B2%BF%E0%B2%B8%E0%B2%BF%E0%B2%A6-%E0%B2%A1%E0%B2%BF%E0%B2%95%E0%B3%86%E0%B2%B6%E0%B2%BF-%E0%B2%AA%E0%B2%A4%E0%B3%8D%E0%B2%A8%E0%B2%BF-%E0%B2%89%E0%B2%B7%E0%B2%BE</guid>
<description><![CDATA[ ಡಿಸಿಎಂ ಡಿಕೆ ಶಿವಕುಮಾರ್  ಅವರ ಮನೆಗೆ ಹೊಸ ಸದಸ್ಯರ ಆಗಮನವಾಗಿದೆ. ಅರ್ಥಾತ್‌ ಡಿಸಿಎಂ ಡಿ.ಕೆ. ಶಿವಕುಮಾರ್‌  ಅವರು ಹೊಸ ಕಾರ್ ಖರೀದಿಸಿದ್ದಾರೆ. ಇಂದು ಡಿ.ಕೆ.ಶಿವಕುಮಾರ್ ಅವರ ಬೆಂಗಳೂರಿನ ಸದಾಶಿವನಗರ ನಿವಾಸಕ್ಕೆ ಹೊಸ ಕಾರ್ ಡೆಲಿವರಿ ಆಗಿದೆ.  ಲೆಕ್ಸಾಸ್ ಕಂಪನಿಯ ಕಾರ್ ಅನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಖರೀದಿಸಿದ್ದಾರೆ.  ಡಿಕೆಶಿ ನಿವಾಸಕ್ಕೆ ಬ್ರಾಂಡ್ ನ್ಯೂ ಕಾರು ಬಂದಿದೆ. Lexus LM 350h 7 ಸೀಟರ್ ಕಾರು  ಅನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ ಖರೀದಿಸಿದ್ದಾರೆ. ಈ ಕಾರ್‌ನ ಬೆಲೆ ಬರೋಬ್ಬರಿ 2.8 ಕೋಟಿ ರೂಪಾಯಿ. ಬಿಳಿ ಬಣ್ಣದ ಕಾರ್ ಅನ್ನು ಡಿಕೆ ಶಿವಕುಮಾರ್ ಖರೀದಿಸಿದ್ದಾರೆ. ಸದಾಶಿವನಗರದ ಡಿಸಿಎಂ ಡಿಕೆಶಿ ನಿವಾಸಕ್ಕೆ ಲೆಕ್ಸಾಸ್ ಕಂಪನಿಯ ಷೋರೂಮು ಸಿಬ್ಬಂದಿಯೇ ಕಾರ್ ಅನ್ನು ಹೋಮ್ ಡೆಲಿವರಿ ಮಾಡಿದ್ದಾರೆ.  ಹೊಸ ಬ್ರಾಂಡ್ ನ್ಯೂ ಕಾರ್ ಅನ್ನು ಡಿ.ಕೆ.ಶಿವಕುಮಾರ್ ಪತ್ನಿ ಉಷಾ ಮನೆಗೆ ಬರಮಾಡಿಕೊಂಡಿದ್ದಾರೆ.  KA 03 NZ 6666 ನಂಬರ್ ಪ್ಲೇಟ್ ಇರುವ ಕಾರು ಅನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಖರೀದಿಸಿದ್ದಾರೆ. ವಿಶೇಷ ಸೂಚನೆ: ಎಲ್ಲಾ DTH &amp; Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. ]]></description>
<enclosure url="https://img-cdn.publive.online/fit-in/1280x960/newsfirstlive-kannada/media/media_files/2026/02/11/dcm-dk-shivkuamr-bought-new-car-2026-02-11-12-02-43.jpg" length="49398" type="image/jpeg"/>
<pubDate>Thu, 12 Feb 2026 09:44:07 +0530</pubDate>
<dc:creator>Newsfirst</dc:creator>
<media:keywords>ಲೆಕ್ಸಾಸ್, ಕಂಪನಿಯ, ಹೊಸ, ಕಾರ್, ಖರೀದಿಸಿದ, ಡಿಸಿಎಂ, ಡಿಕೆಶಿ, ಹೊಸ, ಸದಸ್ಯನ, ಸ್ವಾಗತಿಸಿದ, ಡಿಕೆಶಿ, ಪತ್ನಿ, ಉಷಾ</media:keywords>
</item>

<item>
<title>ನಾವಿಬ್ಬರೂ ಕದ್ದು ಮುಚ್ಚೇನೂ ಮಾತಾಡಿಲ್ಲ ಎಂದ ಡಿಕೆಶಿ ಸಂದೇಶವೇನು?: ದೆಹಲಿ ತಲುಪಿದ ಡಿಕೆಶಿ</title>
<link>https://thinkerr.in/%E0%B2%A8%E0%B2%BE%E0%B2%B5%E0%B2%BF%E0%B2%AC%E0%B3%8D%E0%B2%AC%E0%B2%B0%E0%B3%82-%E0%B2%95%E0%B2%A6%E0%B3%8D%E0%B2%A6%E0%B3%81-%E0%B2%AE%E0%B3%81%E0%B2%9A%E0%B3%8D%E0%B2%9A%E0%B3%87%E0%B2%A8%E0%B3%82-%E0%B2%AE%E0%B2%BE%E0%B2%A4%E0%B2%BE%E0%B2%A1%E0%B2%BF%E0%B2%B2%E0%B3%8D%E0%B2%B2-%E0%B2%8E%E0%B2%82%E0%B2%A6-%E0%B2%A1%E0%B2%BF%E0%B2%95%E0%B3%86%E0%B2%B6%E0%B2%BF-%E0%B2%B8%E0%B2%82%E0%B2%A6%E0%B3%87%E0%B2%B6%E0%B2%B5%E0%B3%87%E0%B2%A8%E0%B3%81-%E0%B2%A6%E0%B3%86%E0%B2%B9%E0%B2%B2%E0%B2%BF-%E0%B2%A4%E0%B2%B2%E0%B3%81%E0%B2%AA%E0%B2%BF%E0%B2%A6-%E0%B2%A1%E0%B2%BF%E0%B2%95%E0%B3%86%E0%B2%B6%E0%B2%BF</link>
<guid>https://thinkerr.in/%E0%B2%A8%E0%B2%BE%E0%B2%B5%E0%B2%BF%E0%B2%AC%E0%B3%8D%E0%B2%AC%E0%B2%B0%E0%B3%82-%E0%B2%95%E0%B2%A6%E0%B3%8D%E0%B2%A6%E0%B3%81-%E0%B2%AE%E0%B3%81%E0%B2%9A%E0%B3%8D%E0%B2%9A%E0%B3%87%E0%B2%A8%E0%B3%82-%E0%B2%AE%E0%B2%BE%E0%B2%A4%E0%B2%BE%E0%B2%A1%E0%B2%BF%E0%B2%B2%E0%B3%8D%E0%B2%B2-%E0%B2%8E%E0%B2%82%E0%B2%A6-%E0%B2%A1%E0%B2%BF%E0%B2%95%E0%B3%86%E0%B2%B6%E0%B2%BF-%E0%B2%B8%E0%B2%82%E0%B2%A6%E0%B3%87%E0%B2%B6%E0%B2%B5%E0%B3%87%E0%B2%A8%E0%B3%81-%E0%B2%A6%E0%B3%86%E0%B2%B9%E0%B2%B2%E0%B2%BF-%E0%B2%A4%E0%B2%B2%E0%B3%81%E0%B2%AA%E0%B2%BF%E0%B2%A6-%E0%B2%A1%E0%B2%BF%E0%B2%95%E0%B3%86%E0%B2%B6%E0%B2%BF</guid>
<description><![CDATA[ ಶತಾಯಗತಾಯವಾಗಿ ಸಿಎಂ ಗದ್ದುಗೆ ಏರಲೇಬೇಕು ಅಂತ ಕನಸು ಕಾಣ್ತಿರುವ ಡಿಕೆಶಿ ಮಾಡದ ಸರ್ಕಸ್​ಗಳಿಲ್ಲ.. ಬೆಂಗಳೂರು, ದೆಹಲಿ ಅಂತ ನಡೆಸಿದ ಪರ್ಯಟನೆಗೆ ಲೆಕ್ಕಗಳೇ ಇಲ್ಲ.. ಇಷ್ಟಾದ್ರೂ ಕುರ್ಚಿ ಮಾತ್ರ ಅವರಿಂದ ದೂರವೇ ಹೋಗ್ತಿದೆ. ಆದ್ರೂ ಛಲಬಿಡದ ತ್ರಿವಿಕ್ರಮನಂತೆ ಮತ್ತೆ ದೆಹಲಿಗೆ ಹಾರಿದ್ದು ಹೋಗುವಾಗ ಒಪ್ಪಂದದ ವಿಷಯವನ್ನು ಮತ್ತೆ ನೆನಪಿಸಿದ್ದಾರೆ.ಡಿಕೆಶಿ ಎಂಬ ನಾನು.. ಈ ಮಾತನ್ನು ವಿಧಾನದೌದದ ಮುಂದೆ ಹೇಳಬೇಕು.. ಪ್ರತಿಜ್ಞಾವಿಧಿ ಸ್ವೀಕರಿಸಬೇಕು ಅಂತ ಡಿಸಿಎಂ ಡಿಕೆಶಿ ಕಾಣುವ ಕನಸುಗಳಿಗೆ ಲೆಕ್ಕವೇ ಇಲ್ಲದಂತಾಗಿದೆ. ತಮ್ಮ ಉಪಮುಖ್ಯಮಂತ್ರಿ ಹುದ್ದೆಯಿಂದ ಉಪ ಅನ್ನೋದನ್ನು ತೆಗೆದು ಕೇವಲ ಮುಖ್ಯಮಂತ್ರಿ ಅನ್ನೋದು ಮಾತ್ರ ಉಳಿಬೇಕು ಅಂತ ಮಾಡಬಾರದ ಸರ್ಕಸ್​ ಮಾಡ್ತಿದ್ದಾರೆ.. ಇದೇ ನಿಟ್ಟಿನಲ್ಲಿ ಡಿಕೆ ಶಿವಕುಮಾರ್​ ದೆಹಲಿ ದಂಡಯಾತ್ರೆ ಮಾಡಿದ್ದಾರೆ.
ಬಜೆಟ್​ ಬಳಿಕ ಬದಲಾವಣೆ.. ಬಜೆಟ್​​ಗೂ ಮುನ್ನವೇ ಆಟ ಶುರುಕುರ್ಚಿ ಕನೆಕ್ಷನ್.. ಸೋನಿಯಾ ಗಾಂಧಿ ಭೇಟಿಗೆ ಡಿಕೆ ಸಜ್ಜುರಾಜ್ಯ ಕಾಂಗ್ರೆಸ್​ನಲ್ಲಿ ಸಿಎಂ ಕುರ್ಚಿಗಾಗಿ ಕುರುಕ್ಷೇತ್ರವೇ ನಡೆಯುತ್ತಿದೆ. ಈ ಯುದ್ಧದಲ್ಲಿ ಗೆಲ್ಲಲೇಬೇಕೆಂದು ಜಿದ್ದಿಗೆ ಬಿದ್ದಿರುವ ಡಿಕೆ ಇಂದು ಮತ್ತೆ ದೆಹಲಿಗೆ ಹಾರಿದ್ದಾರೆ. ಈ ಬಾರಿ ಸೋನಿಯಾ ಗಾಂಧಿ ಭೇಟಿಗೆ ಸಜ್ಜಾಗಿದ್ದು ಇವತ್ತು ದೆಹಲಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ದೆಹಲಿಗೆ ತೆರಳುವ ಮುನ್ನ ಮಾತನಾಡಿದ ಡಿಕೆ, ಯಾಱರು ಸಿಕ್ತಾರೋ ಎಲ್ಲರನ್ನು ಭೇಟಿ ಮಾಡ್ತೇನೆ. ನಿತ್ಯವೂ ನನಗೇ ಸಂತೋಷದ ದಿನವೇ. ಪ್ರತಿ ದಿನವೂ ಕಷ್ಟದ ದಿನವೇ.. ಟೀಕೆಗಳು ಬರುತ್ತಾನೆ  ಇರುತ್ತಾವೆ, ಟೀಕೆಗಳನ್ನು ಎದುರಿಸಲೇಬೇಕು. ನಮ್ಮ ಕೆಲಸ ನಾವು ಮಾಡಿಕೊಂಡು ಹೋಗಲೇಬೇಕು ಅಂತ ಮಾರ್ಮಿಕವಾಗಿ ಮಾತನಾಡಿದ್ರು.
ನಾವಿಬ್ಬರೂ ಕದ್ದು ಮುಚ್ಚೇನೂ ಮಾತಾಡಿಲ್ಲ.. ಡಿಕೆ ಸಂದೇಶವೇನು?ಇನ್ನು ಪದೇ ಪದೇ ಒಪ್ಪಂದದ ಬಗ್ಗೆ ಮಾತನಾಡುವ ಡಿಕೆ ಶಿವಕುಮಾರ್ ಈಗ ಮತ್ತೆ ಅದೇ ಮಾತನ್ನೇ ಪುನರುಚ್ಚರಿಸಿದ್ದಾರೆ. ನಾನು, ಸಿದ್ದರಾಮಯ್ಯ ಏನು ಮಾತಾಡಿದ್ದೇವಂತ ನನಗೆ ಗೊತ್ತು. ನಾವಿಬ್ಬರೂ ಕದ್ದು ಮುಚ್ಚೇನೂ ಮಾತಾಡಿಕೊಂಡಿಲ್ಲ ಅಂತ ಒಪ್ಪಂದ ಅಂದ್ರೆ ಅಧಿಕಾರ ಹಂಚಿಕೆ ವಿಷಯವನ್ನು ಜೀವಂತವಾಗಿಟ್ಟಿದ್ದಾರೆ. ಇತ್ತ ಸಚಿವರು, ಶಾಸಕರು ಕುರ್ಚಿ ಸಂಬಂಧ ನೀಡುವ ಹೇಳಿಕೆಗಳು ಪಕ್ಷಕ್ಕೆ ಹಾನಿ ಮಾಡುತ್ತವೆ. ಹೀಗಾಗಿ ಎಲ್ಲರೂ ಬಾಯಿಮುಚ್ಚಿಕೊಂಡಿರಬೇಕೆಂದು ಪರೋಕ್ಷವಾಗಿ ಯತೀಂದ್ರಗೆ ಟಾಂಗ್ ಕೊಟ್ಟಿದ್ದಾರೆ.
ಇನ್ನು ಇಂದು ಸಂಜೆ ನಡೆದ ಎಐಸಿಸಿ ನಾಯಕರ ಸಭೆಯಲ್ಲಿ ಡಿಕೆಶಿ ಭಾಗಿಯಾಗಿದ್ರು. ಈ ವೇಳೆ ಚುನಾವಣೆ ವಿಚಾರವಾಗಿ ಚರ್ಚೆ ನಡೆದಿದೆ. ಇನ್ನು ದೆಹಲಿಯಲ್ಲೇ ವಾಸ್ತವ್ಯ ಹೂಡಲಿರುವ ಡಿಕೆ ನಾಳೆ ಕೆಲ ಕೇಂದ್ರ ಸಚಿವರನ್ನ ಭೇಟಿಯಾಗಲಿದ್ದಾರೆ. ರಾಜ್ಯದ ನೀರಾವರಿ ಸೇರಿದಂತೆ ಇತರೆ ಯೋಜನೆ ಕುರಿತು ಚರ್ಚೆ ಮಾಡಲಿದ್ದಾರೆ.ಬಜೆಟ್​ನಿಂದ ಡಿಕೆ ಅಂತರ.. ದೆಹಲಿಯಲ್ಲಿ ಹೈಕಮಾಂಡ್​ಗೆ ಹತ್ತಿರಇನ್ನು ಬಜೆಟ್​ ಹಿನ್ನೆಲೆ ಸಿಎಂ ಸಿದ್ದರಾಮಯ್ಯರ ಬಜೆಟ್ ಸಭೆಯಲ್ಲೂ ಡಿಕೆ ಭಾಗಿಯಾಗಲ್ಲ. ದೆಹಲಿಗೆ ತೆರಳುವುದಕ್ಕೂ ಮುನ್ನ ಸಿದ್ದರಾಮಯ್ಯರಿಗೆ ಪತ್ರ ಬರೆದು ಅನುಮತಿ ಪಡೆದಿದ್ದಾರೆ. ಬಜೆಟ್ ಪೂರ್ವಭಾವಿ ಸಭೆಗೆ ಗೈರಾಗುವ ಕುರಿತು ಪತ್ರ ಬರೆದು ಅನುಮತಿ ತೆಗೆದುಕೊಂಡಿದ್ದಾರೆ.
ಡಿ.ಕೆ ಶಿವಕುಮಾರ್ ಹೇಳಿದ್ರೆ ಅವರನ್ನೇ ಕೇಳಿ ಅಂತ ಸಿಎಂ ಗರಂಇನ್ನು ಅಧಿಕಾರ ಹಂಚಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಹೈಕಮಾಂಡ್ ಹೇಳಿದ್ದೇ ಅಂತಿಮ ತೀರ್ಮಾನ. ಡಿ.ಕೆ ಶಿವಕುಮಾರ್ ಏನಾದ್ರೂ ಹೇಳಿದ್ರೆ ಅವರನ್ನೇ ಕೇಳಿ ಅಂತ ಖಾರವಾಗಿ ಉತ್ತರಿಸಿದ್ದಾರೆ.ಸದ್ಯ ಡಿಕೆ ದೆಹಲಿ ಯಾತ್ರೆ ಭಾರೀ ಕುತೂಹಲ ಮೂಡಿಸಿದೆ. ಹೈಕಮಾಂಡ್ ಮುಂದೆ ಹಲವು ವಿಚಾರ ಪ್ರಸ್ತಾಪಕ್ಕೆ ಡಿಕೆಶಿಯಂತೂ ಸಜ್ಜಾಗಿದ್ದಾರೆ. ಈ ವೇಳೆ ನಾಯಕತ್ವ ಗೊಂದಲ ಇತ್ಯರ್ಥಕ್ಕಾಗಿ ಒತ್ತಡ ಹೇರಲಿದ್ದಾರೆ. ಸಿಎಂ ಪಟ್ಟ ಕೊಡಲೇಬೇಕೆಂದು ಬಿಗಿಪಟ್ಟು ಹಿಡಿಯುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.. ಈ ಮೂಲಕ ಬಜೆಟ್ ಬಳಿಕವಾದರೂ ಸ್ಪಷ್ಟ ತೀರ್ಮಾನ ಮಾಡಲಿ ಅನ್ನೋದೇ ಇದರ ಹಿಂದಿರುವ ಲೆಕ್ಕಾಚಾರ..
 
ಶಿವಪ್ರಸಾದ್ , ಪೊಲಿಟಿಕಲ್ ಬ್ಯೂರೋ, ನ್ಯೂಸ್​ ಫಸ್ಟ್​ . ವಿಶೇಷ ಸೂಚನೆ: ಎಲ್ಲಾ DTH &amp; Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. ]]></description>
<enclosure url="https://img-cdn.publive.online/fit-in/1280x960/newsfirstlive-kannada/media/post_attachments/wp-content/uploads/2023/12/DKSHIVAKUMAR-4.jpg" length="49398" type="image/jpeg"/>
<pubDate>Thu, 12 Feb 2026 09:44:07 +0530</pubDate>
<dc:creator>Newsfirst</dc:creator>
<media:keywords>ನಾವಿಬ್ಬರೂ, ಕದ್ದು, ಮುಚ್ಚೇನೂ, ಮಾತಾಡಿಲ್ಲ, ಎಂದ, ಡಿಕೆಶಿ, ಸಂದೇಶವೇನು:, ದೆಹಲಿ, ತಲುಪಿದ, ಡಿಕೆಶಿ</media:keywords>
</item>

<item>
<title>ಪ್ರಾನ್ಸ್ ನಿಂದ 3.25 ಲಕ್ಷ ಕೋಟಿ ರೂಪಾಯಿಯಲ್ಲಿ 114 ರಫೇಲ್ ಯುದ್ಧ ವಿಮಾನ ಖರೀದಿ: ಈ ವಾರ ಅನುಮೋದನೆ ನಿರೀಕ್ಷೆ</title>
<link>https://thinkerr.in/%E0%B2%AA%E0%B3%8D%E0%B2%B0%E0%B2%BE%E0%B2%A8%E0%B3%8D%E0%B2%B8%E0%B3%8D-%E0%B2%A8%E0%B2%BF%E0%B2%82%E0%B2%A6-325-%E0%B2%B2%E0%B2%95%E0%B3%8D%E0%B2%B7-%E0%B2%95%E0%B3%8B%E0%B2%9F%E0%B2%BF-%E0%B2%B0%E0%B3%82%E0%B2%AA%E0%B2%BE%E0%B2%AF%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF-114-%E0%B2%B0%E0%B2%AB%E0%B3%87%E0%B2%B2%E0%B3%8D-%E0%B2%AF%E0%B3%81%E0%B2%A6%E0%B3%8D%E0%B2%A7-%E0%B2%B5%E0%B2%BF%E0%B2%AE%E0%B2%BE%E0%B2%A8-%E0%B2%96%E0%B2%B0%E0%B3%80%E0%B2%A6%E0%B2%BF-%E0%B2%88-%E0%B2%B5%E0%B2%BE%E0%B2%B0-%E0%B2%85%E0%B2%A8%E0%B3%81%E0%B2%AE%E0%B3%8B%E0%B2%A6%E0%B2%A8%E0%B3%86-%E0%B2%A8%E0%B2%BF%E0%B2%B0%E0%B3%80%E0%B2%95%E0%B3%8D%E0%B2%B7%E0%B3%86</link>
<guid>https://thinkerr.in/%E0%B2%AA%E0%B3%8D%E0%B2%B0%E0%B2%BE%E0%B2%A8%E0%B3%8D%E0%B2%B8%E0%B3%8D-%E0%B2%A8%E0%B2%BF%E0%B2%82%E0%B2%A6-325-%E0%B2%B2%E0%B2%95%E0%B3%8D%E0%B2%B7-%E0%B2%95%E0%B3%8B%E0%B2%9F%E0%B2%BF-%E0%B2%B0%E0%B3%82%E0%B2%AA%E0%B2%BE%E0%B2%AF%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF-114-%E0%B2%B0%E0%B2%AB%E0%B3%87%E0%B2%B2%E0%B3%8D-%E0%B2%AF%E0%B3%81%E0%B2%A6%E0%B3%8D%E0%B2%A7-%E0%B2%B5%E0%B2%BF%E0%B2%AE%E0%B2%BE%E0%B2%A8-%E0%B2%96%E0%B2%B0%E0%B3%80%E0%B2%A6%E0%B2%BF-%E0%B2%88-%E0%B2%B5%E0%B2%BE%E0%B2%B0-%E0%B2%85%E0%B2%A8%E0%B3%81%E0%B2%AE%E0%B3%8B%E0%B2%A6%E0%B2%A8%E0%B3%86-%E0%B2%A8%E0%B2%BF%E0%B2%B0%E0%B3%80%E0%B2%95%E0%B3%8D%E0%B2%B7%E0%B3%86</guid>
<description><![CDATA[ ಭಾರತೀಯ ವಾಯುಪಡೆಯ ಮಲ್ಟಿ ರೋಲ್‌ ಯುದ್ಧ ವಿಮಾನ ಕಾರ್ಯಕ್ರಮಕ್ಕಾಗಿ 114 ಫ್ರೆಂಚ್ ನಿರ್ಮಿತ ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ರೂ. 3.25 ಲಕ್ಷ ಕೋಟಿ ಒಪ್ಪಂದವನ್ನು ರಕ್ಷಣಾ ಸಚಿವಾಲಯವು ಈ ವಾರ ಅನುಮೋದನೆ ನೀಡುವ ಸಾಧ್ಯತೆಯಿದೆ . ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ದೆಹಲಿ ಭೇಟಿಗೆ ಕೆಲವು ದಿನಗಳ ಮೊದಲು ರಕ್ಷಣಾ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ. ಒಮ್ಮೆ ಅನುಮೋದನೆ ಪಡೆದ ನಂತರ, ಈ ಒಪ್ಪಂದವು ಭಾರತದ ಅತಿದೊಡ್ಡ ಶಸ್ತ್ರಾಸ್ತ್ರ ಒಪ್ಪಂದವಾಗುವುದಲ್ಲದೆ, ನಿರ್ದಿಷ್ಟ ಸಂಖ್ಯೆಯ, ಸುಮಾರು 100 ಯುದ್ದ ವಿಮಾನಗಳನ್ನು  ಭಾರತದಲ್ಲಿ ತಯಾರಿಸಲು ನಿಬಂಧನೆಗಳನ್ನು ಒಳಗೊಂಡಿರುತ್ತದೆ, ಇದರಲ್ಲಿ ಉನ್ನತ ದರ್ಜೆಯ ಯುದ್ಧ ಜೆಟ್ ತಂತ್ರಜ್ಞಾನದ ವರ್ಗಾವಣೆ ಮತ್ತು &#039;ಮೇಕ್ ಇನ್ ಇಂಡಿಯಾ&#039; ಕಾರ್ಯಕ್ರಮವನ್ನು ಹೆಚ್ಚಿಸಲು ಕಾರ್ಯತಂತ್ರದ ಪಾಲುದಾರಿಕೆ ಇರುತ್ತದೆ.
ಮತ್ತು, ಒಮ್ಮೆ ದೃಢಪಡಿಸಿದ ನಂತರ, ಈ ಒಪ್ಪಂದವು ವಿಶ್ವದ ಅತ್ಯಂತ ಮಾರಕವಾದ ಮತ್ತು ವಾಯು ಶ್ರೇಷ್ಠತೆ ಮತ್ತು ನಿಖರ ದಾಳಿ ಕಾರ್ಯಾಚರಣೆಗಳನ್ನು ಕಾರ್ಯಗತಗೊಳಿಸಲು ಹೆಸರುವಾಸಿಯಾದ ರಫೇಲ್‌ನ ಅತಿದೊಡ್ಡ ಫ್ರೆಂಚ್ ಅಲ್ಲದ ನಿರ್ವಾಹಕರಲ್ಲಿ ಒಂದಾಗಿ ಭಾರತದ ಸ್ಥಾನಮಾನವನ್ನು ಒತ್ತಿಹೇಳುತ್ತದೆ.
ಭಾರತವು ಈಗಾಗಲೇ 36 ರಫೇಲ್‌ಗಳನ್ನು ಹೊಂದಿದೆ .  ವಾಯುಪಡೆಯು ಡಿಸೆಂಬರ್ 2024 ರಲ್ಲಿ ಕೊನೆಯ &#039;ಸಿ&#039; ರೂಪಾಂತರದ ವಿತರಣೆಯನ್ನು ಪಡೆದುಕೊಂಡಿದೆ .  63,000 ಕೋಟಿ ರೂ. ಮೌಲ್ಯದ ಒಪ್ಪಂದದಲ್ಲಿ 26 ನೌಕಾ ರೂಪಾಂತರಗಳನ್ನು, &#039;ಎಂ&#039; ಆವೃತ್ತಿಯನ್ನು ಆರ್ಡರ್ ಮಾಡಿದೆ.
ಹ್ಯಾಟ್ ಒಪ್ಪಂದವು ನಾಲ್ಕು ಅವಳಿ-ಆಸನ ತರಬೇತುದಾರರ ಖರೀದಿ ಮತ್ತು MRO ಅಥವಾ &#039;ನಿರ್ವಹಣೆ, ದುರಸ್ತಿ, ಕೂಲಂಕುಷ&#039; ಒಪ್ಪಂದದ ಅಡಿಯಲ್ಲಿ ಫ್ಲೀಟ್ ನಿರ್ವಹಣೆ, ಲಾಜಿಸ್ಟಿಕ್ಸ್ ಬೆಂಬಲ ಮತ್ತು ಸಿಬ್ಬಂದಿ ತರಬೇತಿಯನ್ನು ಸುಗಮಗೊಳಿಸುವುದನ್ನು ಒಳಗೊಂಡಿತ್ತು.
&#039;M&#039; ಆವೃತ್ತಿಯ ರಫೇಲ್‌ಗಳನ್ನು ವಿಮಾನವಾಹಕ ನೌಕೆಗಳಾದ INS ವಿಕ್ರಾಂತ್ ಮತ್ತು INS ವಿಕ್ರಮಾದಿತ್ಯದಲ್ಲಿ ನಿಯೋಜಿಸಲಾಗುವುದು.
ವಿತರಿಸಲಾದ &#039;C&#039; ಆವೃತ್ತಿಯ ಜೆಟ್‌ಗಳನ್ನು ಅಂಬಾಲಾದ ನಂ 17 ಸ್ಕ್ವಾಡ್ರನ್, ಅಂದರೆ ಗೋಲ್ಡನ್ ಆರೋಸ್ ಮತ್ತು ಬಂಗಾಳದ ಹಸಿಮಾರಾದ ನಂ 101, ಅಂದರೆ ಫಾಲ್ಕನ್ಸ್ ನಡುವೆ ವಿಂಗಡಿಸಲಾಗಿದೆ.IAF ಫೈಟರ್‌ ಜೆಟ್ ಗಳು  ಈಗಾಗಲೇ ಯುದ್ಧದಲ್ಲಿ  ಭಾಗಿಯಾಗಿವೆ.  ಅವರು ಕಳೆದ ವರ್ಷ ಮೇ ತಿಂಗಳಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತದ ಮಿಲಿಟರಿ ಪ್ರತಿಕ್ರಿಯೆಯಾದ ಆಪರೇಷನ್ ಸಿಂದೂರ್‌ನಲ್ಲಿ ಮತ್ತು ಲಡಾಖ್‌ನಲ್ಲಿ ಭಾಗವಹಿಸಿದ್ದರು.
ಅಪರೇಷನ್‌  ಸಿಂದೂರ್ ಸಮಯದಲ್ಲಿ ನಿಯೋಜಿಸಲಾದ ರಫೇಲ್‌ಗಳು SCALP ಅನ್ನು ಉಡಾಯಿಸಿವೆ ಎಂದು ನಂಬಲಾಗಿದೆ, ಇದು ವಾಯು-ಉಡಾವಣಾ ಕ್ರೂಸ್ ಕ್ಷಿಪಣಿಯಾಗಿದ್ದು, ಇದು 250 ಕಿಮೀ ದೂರದಲ್ಲಿರುವ ಗಟ್ಟಿಯಾದ ಗುರಿಗಳನ್ನು ತೀವ್ರ ನಿಖರತೆಯೊಂದಿಗೆ ಹೊಡೆಯಬಲ್ಲದು .  ಇರಾಕ್ ಯುದ್ಧ ಮತ್ತು ಲಿಬಿಯಾ ಸೇರಿದಂತೆ ವಿಶ್ವದಾದ್ಯಂತ ವಿವಿಧ ಸಂಘರ್ಷಗಳಲ್ಲಿ ಬಳಸಲ್ಪಟ್ಟಿದೆ.ಇದು ಮೀಟಿಯರ್ ದೀರ್ಘ ವ್ಯಾಪ್ತಿಯ ಗಾಳಿಯಿಂದ ಗಾಳಿಗೆ ಚಿಮ್ಮುವ ಕ್ಷಿಪಣಿಗಳು ಮತ್ತು ಸ್ಟ್ಯಾಂಡ್-ಆಫ್ ಸ್ಟ್ರೈಕ್ ವೆಪನ್ ಹ್ಯಾಮರ್, ಮತ್ತು ಸುಧಾರಿತ ಇ-ವಾರ್ಫೇರ್ ಸೂಟ್ ಸ್ಪೆಕ್ಟ್ರಾ ಹಾಗೂ ಸುಧಾರಿತ ರಾಡಾರ್ ಮತ್ತು ಗುರಿ ವ್ಯವಸ್ಥೆಗಳನ್ನು ಸಹ ಸಾಗಿಸಬಲ್ಲದು.
ರಫೇಲ್ ತಂತ್ರಜ್ಞಾನ ವರ್ಗಾವಣೆ ಒಪ್ಪಂದ
ಏತನ್ಮಧ್ಯೆ, ಕಳೆದ ವರ್ಷ ಜೂನ್‌ನಲ್ಲಿ ಫ್ರಾನ್ಸ್ ಮತ್ತು ಭಾರತ ತಯಾರಕರಾದ ಡಸಾಲ್ಟ್ ಏವಿಯೇಷನ್ ​​ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ನಡುವೆ ನಾಲ್ಕು ಹೆಗ್ಗುರುತು ಉತ್ಪಾದನಾ ವರ್ಗಾವಣೆ ಒಪ್ಪಂದಗಳನ್ನು ಘೋಷಿಸಿದವು, ಇದು ಭಾರತೀಯ ಮಿಲಿಟರಿಗೆ ಬಾಕಿ ಇರುವ ರಫೇಲ್‌ಗಳ ವಿತರಣೆಯನ್ನು ಗಮನಾರ್ಹವಾಗಿ ವೇಗಗೊಳಿಸುತ್ತದೆ.
ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಹೈದರಾಬಾದ್‌ನಲ್ಲಿ ಫ್ರೆಂಚ್ ಯುದ್ಧವಿಮಾನದ ಪ್ರಮುಖ ರಚನಾತ್ಮಕ ವಿಭಾಗಗಳ ತಯಾರಿಕೆಗಾಗಿ ಅತ್ಯಾಧುನಿಕ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸುವ ನಿರೀಕ್ಷೆಯಿದೆ, ಇದರಲ್ಲಿ ಹಿಂಭಾಗದ ವಿಮಾನದ  ಪಾರ್ಶ್ವ ಶೆಲ್‌ಗಳು, ಸಂಪೂರ್ಣ ಹಿಂಭಾಗದ ವಿಭಾಗ, ಕೇಂದ್ರ ವಿಮಾನದ ವಿಮಾನ ಮತ್ತು ಮುಂಭಾಗದ ವಿಭಾಗ ಸೇರಿವೆ. ಮೊದಲ  ಸಿದ್ದಗೊಂಡ ವಿಮಾನಗಳು 2028 ರಲ್ಲಿ ಉತ್ಪಾದನಾ ಸೆಂಟರ್ ನಿಂದ ಹೊರಬರುತ್ತವೆ.
ತಿಂಗಳಿಗೆ ಎರಡು ಸಂಪೂರ್ಣ  ವಿಮಾನಗಳನ್ನು ಡೆಲಿವರಿ ಮಾಡುವುದು ಗುರಿಯಾಗಿದೆ, ರಫೇಲ್ ಯುದ್ಧವಿಮಾನದ ಅಂತಿಮ ಜೋಡಣೆ ಬೋರ್ಡೆಕ್ಸ್ ಬಳಿಯ ಮೆರಿಗ್ನಾಕ್‌ನಲ್ಲಿರುವ ಡಸಾಲ್ಟ್‌ನ ಉತ್ಪಾದನಾ ಸೌಲಭ್ಯದಲ್ಲಿ ನಡೆಯಲಿದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಭಿವೃದ್ಧಿಪಡಿಸುತ್ತಿರುವ ಸ್ಥಳೀಯ, ಐದನೇ ತಲೆಮಾರಿನ ಯುದ್ಧ ವಿಮಾನಗಳನ್ನು ನೌಕಾಪಡೆಯು ಸೇರ್ಪಡೆಗೊಳಿಸಲು ಯೋಜಿಸುತ್ತಿದೆ.
ಅವಳಿ-ಎಂಜಿನ್, ಡೆಕ್-ಆಧಾರಿತ ಯುದ್ಧ ವಿಮಾನಗಳಾಗಿ ವಿನ್ಯಾಸಗೊಳಿಸಲಾದ ಇವು, ವಾಯುಪಡೆಗಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ಸುಧಾರಿತ ಮಧ್ಯಮ ಯುದ್ಧ ವಿಮಾನ ಅಥವಾ AMCA ಯ ನೌಕಾ ಪ್ರತಿರೂಪವಾಗಿರುತ್ತವೆ.ವಿಶೇಷ ಸೂಚನೆ: ಎಲ್ಲಾ DTH &amp; Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.  ]]></description>
<enclosure url="https://img-cdn.publive.online/fit-in/1280x960/newsfirstlive-kannada/media/post_attachments/wp-content/uploads/2025/04/Sukhoi-30-Rafales.jpg" length="49398" type="image/jpeg"/>
<pubDate>Thu, 12 Feb 2026 09:44:07 +0530</pubDate>
<dc:creator>Newsfirst</dc:creator>
<media:keywords>ಪ್ರಾನ್ಸ್, ನಿಂದ, 3.25, ಲಕ್ಷ, ಕೋಟಿ, ರೂಪಾಯಿಯಲ್ಲಿ, 114, ರಫೇಲ್, ಯುದ್ಧ, ವಿಮಾನ, ಖರೀದಿ:, ಈ, ವಾರ, ಅನುಮೋದನೆ, ನಿರೀಕ್ಷೆ</media:keywords>
</item>

<item>
<title>ಮತ್ತೆ ಡೆಲ್ಲಿಗೆ ಡಿಸಿಎಂ ಡಿಕೆಶಿ; ಹೈಕಮಾಂಡ್ ಮುಂದೆ ಪ್ರಬಲ ಐದು ಅಸ್ತ್ರ ಪ್ರಯೋಗ ಸಾಧ್ಯತೆ</title>
<link>https://thinkerr.in/%E0%B2%AE%E0%B2%A4%E0%B3%8D%E0%B2%A4%E0%B3%86-%E0%B2%A1%E0%B3%86%E0%B2%B2%E0%B3%8D%E0%B2%B2%E0%B2%BF%E0%B2%97%E0%B3%86-%E0%B2%A1%E0%B2%BF%E0%B2%B8%E0%B2%BF%E0%B2%8E%E0%B2%82-%E0%B2%A1%E0%B2%BF%E0%B2%95%E0%B3%86%E0%B2%B6%E0%B2%BF-%E0%B2%B9%E0%B3%88%E0%B2%95%E0%B2%AE%E0%B2%BE%E0%B2%82%E0%B2%A1%E0%B3%8D-%E0%B2%AE%E0%B3%81%E0%B2%82%E0%B2%A6%E0%B3%86-%E0%B2%AA%E0%B3%8D%E0%B2%B0%E0%B2%AC%E0%B2%B2-%E0%B2%90%E0%B2%A6%E0%B3%81-%E0%B2%85%E0%B2%B8%E0%B3%8D%E0%B2%A4%E0%B3%8D%E0%B2%B0-%E0%B2%AA%E0%B3%8D%E0%B2%B0%E0%B2%AF%E0%B3%8B%E0%B2%97-%E0%B2%B8%E0%B2%BE%E0%B2%A7%E0%B3%8D%E0%B2%AF%E0%B2%A4%E0%B3%86</link>
<guid>https://thinkerr.in/%E0%B2%AE%E0%B2%A4%E0%B3%8D%E0%B2%A4%E0%B3%86-%E0%B2%A1%E0%B3%86%E0%B2%B2%E0%B3%8D%E0%B2%B2%E0%B2%BF%E0%B2%97%E0%B3%86-%E0%B2%A1%E0%B2%BF%E0%B2%B8%E0%B2%BF%E0%B2%8E%E0%B2%82-%E0%B2%A1%E0%B2%BF%E0%B2%95%E0%B3%86%E0%B2%B6%E0%B2%BF-%E0%B2%B9%E0%B3%88%E0%B2%95%E0%B2%AE%E0%B2%BE%E0%B2%82%E0%B2%A1%E0%B3%8D-%E0%B2%AE%E0%B3%81%E0%B2%82%E0%B2%A6%E0%B3%86-%E0%B2%AA%E0%B3%8D%E0%B2%B0%E0%B2%AC%E0%B2%B2-%E0%B2%90%E0%B2%A6%E0%B3%81-%E0%B2%85%E0%B2%B8%E0%B3%8D%E0%B2%A4%E0%B3%8D%E0%B2%B0-%E0%B2%AA%E0%B3%8D%E0%B2%B0%E0%B2%AF%E0%B3%8B%E0%B2%97-%E0%B2%B8%E0%B2%BE%E0%B2%A7%E0%B3%8D%E0%B2%AF%E0%B2%A4%E0%B3%86</guid>
<description><![CDATA[ ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಗುಸುಗುಸು ಜೋರಾಗಿದೆ. ಈ ಮಧ್ಯೆ ಇವತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಗೆ ದೌಡಾಯಿಸಿದ್ದಾರೆ. ಶತಾಯಗತಾಯ ಸಿಎಂ ಪಟ್ಟಕ್ಕೇರಲೇಬೇಕೆಂಬ ಹಠಕ್ಕೆ ಬಿದ್ದಿರುವ ಡಿಕೆಶಿ, ಈ ಬಾರಿ ನೇರವಾಗಿ ಸೋನಿಯಾ ಗಾಂಧಿ ಅವರನ್ನೇ ಭೇಟಿಯಾಗಿ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ. 
ರಾಜ್ಯ ಬಜೆಟ್ ಮಂಡನೆಗೂ ಮುನ್ನವೇ ಡಿ.ಕೆ. ಶಿವಕುಮಾರ್ ದೆಹಲಿ ವಿಮಾನ ಏರಿದ್ದಾರೆ. ಇಂದು ದೆಹಲಿಯಲ್ಲೇ ವಾಸ್ತವ್ಯ ಹೂಡಲಿರುವ ಅವರು, ಹೈಕಮಾಂಡ್ ನಾಯಕರ ಮುಂದೆ ಪ್ರಮುಖವಾಗಿ 5 ಅಸ್ತ್ರಗಳನ್ನು ಪ್ರಯೋಗಿಸಲು ತಯಾರಿ ನಡೆಸಿದ್ದಾರೆ.
ಇದನ್ನೂ ಓದಿ: ಟೀಂ ಇಂಡಿಯಾಗೆ ದೊಡ್ಡ ಪಾಠ ಕಲಿಸಿದ ಅಮೆರಿಕ.. ಸೂರ್ಯನ ಸೈನ್ಯಕ್ಕೆ ಸಿಕ್ಕ ಸಂದೇಶ ಏನು?
ಡಿಕೆಶಿ ಪ್ರಮುಖ ವಾದಗಳೇನು?
1) ನಾಯಕತ್ವ ಬದಲಾವಣೆಗೆ ಇದೇ ಸಕಾಲ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಶೀಘ್ರದಲ್ಲೇ ಮೂರು ವರ್ಷಗಳು ಪೂರೈಸಲಿವೆ. ಲೋಕಲ್ ಎಲೆಕ್ಷನ್‌ಗಳು ಹತ್ತಿರ ಬರುತ್ತಿವೆ. ಹೀಗಾಗಿ ನಾಯಕತ್ವ ಬದಲಾವಣೆಗೆ ಮತ್ತು ಸಿಎಂ ಸ್ಥಾನಕ್ಕೆ ತಮ್ಮನ್ನು ಪರಿಗಣಿಸಲು ಇದೇ ಸುಸಮಯ ಎಂಬ ವಾದವನ್ನು ಡಿಕೆಶಿ ಮಂಡಿಸಲಿದ್ದಾರೆ ಎನ್ನಲಾಗಿದೆ.
2) ಶ್ರಮಕ್ಕೆ ತಕ್ಕ ಪ್ರತಿಫಲ ಬೇಕು: ರಾಜ್ಯದಲ್ಲಿ ಪಕ್ಷ ಸೊರಗಿದ್ದಾಗ ಕೆಪಿಸಿಸಿಗೆ ಹೊಸ ವರ್ಚಸ್ಸು ತಂದಿದ್ದೇನೆ. ನನ್ನ ನೇತೃತ್ವದಲ್ಲಿ 136 ಸ್ಥಾನಗಳನ್ನು ಗೆಲ್ಲಿಸಿ, ಪಕ್ಷದ ಬದ್ಧತೆಗಾಗಿ ಹಗಲಿರುಳು ಶ್ರಮಿಸಿದ್ದೇನೆ. ಎಂಪಿ ಚುನಾವಣೆಯಲ್ಲೂ ಪಕ್ಷಕ್ಕೆ ಉತ್ತಮ ಫಲಿತಾಂಶ ತಂದುಕೊಟ್ಟಿದ್ದೇನೆ. ಸ್ವಪಕ್ಷೀಯರ ತಂತ್ರಗಳ ನಡುವೆಯೂ ನನ್ನ ಪಕ್ಷ ನಿಷ್ಠೆ ಬದಲಾಗಿಲ್ಲ ಎಂದು ಸೋನಿಯಾ ಗಾಂಧಿ ಮುಂದೆ ಡಿಕೆಶಿ ಅಹವಾಲು ತೋಡಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
3) ಮೌನ ಮುರಿಯಿರಿ, ಗೊಂದಲ ನಿವಾರಿಸಿ: ಹೈಕಮಾಂಡ್‌ನ ಮೌನದಿಂದಲೇ ರಾಜ್ಯ ನಾಯಕರಲ್ಲಿ ಮತ್ತು ಕಾರ್ಯಕರ್ತರಲ್ಲಿ ಗೊಂದಲಗಳು ಸೃಷ್ಟಿಯಾಗುತ್ತಿವೆ. ನಾಯಕತ್ವ ಬದಲಾವಣೆ ವಿಚಾರದಲ್ಲಿ ಇನ್ನು ಮೌನ ವಹಿಸುವುದು ಪಕ್ಷಕ್ಕೆ ಶೋಭೆ ತರುವುದಿಲ್ಲ. ಈ ಬಗ್ಗೆ ಹೈಕಮಾಂಡ್ ಸ್ಪಷ್ಟ ಸಂದೇಶ ನೀಡಲೇಬೇಕು ಎಂದು ಡಿಕೆಶಿ ಒತ್ತಾಯಿಸಲಿದ್ದಾರೆ ಎಂದು ಹೇಳಲಾಗಿದೆ.
4) ಒಗ್ಗಟ್ಟಾಗುತ್ತಿರುವ ವಿಪಕ್ಷಗಳು: ಸ್ಥಳೀಯ ಚುನಾವಣೆಯ ಹೊತ್ತಿನಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಒಗ್ಗಟ್ಟಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಪ್ರಬಲ ಸಮುದಾಯಗಳು ನನ್ನ (ಡಿಕೆಶಿ) ಪರವಾಗಿವೆ. ಮುಂಬರುವ ಸವಾಲುಗಳನ್ನು ಎದುರಿಸಲು ನಾಯಕತ್ವ ಬದಲಾವಣೆ ಅನಿವಾರ್ಯ ಎಂಬುದನ್ನು ಮನವರಿಕೆ ಮಾಡಿಕೊಡಲಿದ್ದಾರೆ.
5) ತಾಳ್ಮೆಗೂ ಮಿತಿ ಇದೆ: ಹೈಕಮಾಂಡ್ ಸೂಚನೆಯನ್ನು ನಾವೆಲ್ಲರೂ ಪಾಲಿಸುತ್ತೇವೆ. ಆದರೆ, ನನ್ನ ಬೆಂಬಲಿಗರು ನಿರೀಕ್ಷೆಯ ಜೊತೆಗೆ ಸೈಲೆಂಟ್ ಆಗಿದ್ದಾರೆ. ಅವರ ತಾಳ್ಮೆ ಪರೀಕ್ಷಿಸುವುದು ಬೇಡ ಎಂಬ ಎಚ್ಚರಿಕೆಯ ಸಂದೇಶವನ್ನೂ ರವಾನಿಸುವ ಸಾಧ್ಯತೆಯಿದೆ.
ಒಟ್ಟಿನಲ್ಲಿ, ರಾಜ್ಯ ರಾಜಕಾರಣದ ಗಮನ ಈಗ ದೆಹಲಿಯತ್ತ ನೆಟ್ಟಿದೆ. ಡಿ.ಕೆ. ಶಿವಕುಮಾರ್ ಅವರ ಈ ‘ದೆಹಲಿ ಯಾತ್ರೆ’ ಮತ್ತು ಸೋನಿಯಾ ಗಾಂಧಿ ಭೇಟಿ, ಕರ್ನಾಟಕದ ಮುಖ್ಯಮಂತ್ರಿ ಕುರ್ಚಿ ಬದಲಾವಣೆಗೆ ಮುನ್ನುಡಿ ಬರೆಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ನಟೌಂಕಿ ನಾಟಕ ಕೈಬಿಟ್ಟು ತೆಪ್ಪಗಾದ ಪಾಕ್ ಸರ್ಕಾರ - ಭಾರತದ ಮೇಲೆ ಮ್ಯಾಚ್ ಆಡಲು ಒಪ್ಪಿಗೆ..! Highlights
ವಿಶೇಷ ಸೂಚನೆ: ಎಲ್ಲಾ DTH &amp; Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. ]]></description>
<enclosure url="https://img-cdn.publive.online/fit-in/1280x960/newsfirstlive-kannada/media/media_files/2025/12/28/dk-shivakumar-19-2025-12-28-17-42-06.jpg" length="49398" type="image/jpeg"/>
<pubDate>Thu, 12 Feb 2026 09:44:07 +0530</pubDate>
<dc:creator>Newsfirst</dc:creator>
<media:keywords>ಮತ್ತೆ, ಡೆಲ್ಲಿಗೆ, ಡಿಸಿಎಂ, ಡಿಕೆಶಿ, ಹೈಕಮಾಂಡ್, ಮುಂದೆ, ಪ್ರಬಲ, ಐದು, ಅಸ್ತ್ರ, ಪ್ರಯೋಗ, ಸಾಧ್ಯತೆ</media:keywords>
</item>

<item>
<title>ನಾಳೆ ಡಿಸಿಎಂ ಡಿಕೆಶಿ ದೆಹಲಿ ಯಾತ್ರೆ: ನಮ್ಮನ್ನು ಪ್ರಚೋದಿಸಬೇಡಿ ಎಂದ ಶಾಸಕ ಇಕ್ಬಾಲ್ ಹುಸೇನ್‌</title>
<link>https://thinkerr.in/%E0%B2%A8%E0%B2%BE%E0%B2%B3%E0%B3%86-%E0%B2%A1%E0%B2%BF%E0%B2%B8%E0%B2%BF%E0%B2%8E%E0%B2%82-%E0%B2%A1%E0%B2%BF%E0%B2%95%E0%B3%86%E0%B2%B6%E0%B2%BF-%E0%B2%A6%E0%B3%86%E0%B2%B9%E0%B2%B2%E0%B2%BF-%E0%B2%AF%E0%B2%BE%E0%B2%A4%E0%B3%8D%E0%B2%B0%E0%B3%86-%E0%B2%A8%E0%B2%AE%E0%B3%8D%E0%B2%AE%E0%B2%A8%E0%B3%8D%E0%B2%A8%E0%B3%81-%E0%B2%AA%E0%B3%8D%E0%B2%B0%E0%B2%9A%E0%B3%8B%E0%B2%A6%E0%B2%BF%E0%B2%B8%E0%B2%AC%E0%B3%87%E0%B2%A1%E0%B2%BF-%E0%B2%8E%E0%B2%82%E0%B2%A6-%E0%B2%B6%E0%B2%BE%E0%B2%B8%E0%B2%95-%E0%B2%87%E0%B2%95%E0%B3%8D%E0%B2%AC%E0%B2%BE%E0%B2%B2%E0%B3%8D-%E0%B2%B9%E0%B3%81%E0%B2%B8%E0%B3%87%E0%B2%A8%E0%B3%8D</link>
<guid>https://thinkerr.in/%E0%B2%A8%E0%B2%BE%E0%B2%B3%E0%B3%86-%E0%B2%A1%E0%B2%BF%E0%B2%B8%E0%B2%BF%E0%B2%8E%E0%B2%82-%E0%B2%A1%E0%B2%BF%E0%B2%95%E0%B3%86%E0%B2%B6%E0%B2%BF-%E0%B2%A6%E0%B3%86%E0%B2%B9%E0%B2%B2%E0%B2%BF-%E0%B2%AF%E0%B2%BE%E0%B2%A4%E0%B3%8D%E0%B2%B0%E0%B3%86-%E0%B2%A8%E0%B2%AE%E0%B3%8D%E0%B2%AE%E0%B2%A8%E0%B3%8D%E0%B2%A8%E0%B3%81-%E0%B2%AA%E0%B3%8D%E0%B2%B0%E0%B2%9A%E0%B3%8B%E0%B2%A6%E0%B2%BF%E0%B2%B8%E0%B2%AC%E0%B3%87%E0%B2%A1%E0%B2%BF-%E0%B2%8E%E0%B2%82%E0%B2%A6-%E0%B2%B6%E0%B2%BE%E0%B2%B8%E0%B2%95-%E0%B2%87%E0%B2%95%E0%B3%8D%E0%B2%AC%E0%B2%BE%E0%B2%B2%E0%B3%8D-%E0%B2%B9%E0%B3%81%E0%B2%B8%E0%B3%87%E0%B2%A8%E0%B3%8D</guid>
<description><![CDATA[ ಇನ್ನೆಷ್ಟು ದಿನ ಕೇಳಿಸ್ಕೊಂಡು ಸುಮ್ನೆ ಇರೋಕ್ಕಾಗುತ್ತೆ ಹೇಳಿ.. ಹಾದಿ-ಬೀದಿಯಲ್ಲಿ ನಮ್ಮ ತಂದೆನೇ ಉಳಿದ ಅವಧಿಗೂ ಸಿಎಂ, ಶಸ್ತ್ರತ್ಯಾಗನೂ ಇಲ್ಲ, ಪದತ್ಯಾಗನೂ ಇಲ್ಲ ಅಂತ ಡಾ.ಯತೀಂದ್ರ ಹೇಳಿದ್ದೇ ಹೇಳಿದ್ದು.. ಪದೇ ಪದೇ ಕಿಚ್ಚು ಹೊತ್ತಿಸ್ತಿರೋ ಸಿಎಂ ಪುತ್ರನ ಮೇಲೆ ಡಿಸಿಎಂ ಡಿಕೆಶಿ ಬಣ ಕೆರಳಿದೆ.. ಇವತ್ತು ಬಹಿರಂಗವಾಗಿಯೇ ಸಿಎಂ ಪುತ್ರಗೆ ಇಕ್ಬಾಲ್ ಹುಸೇನ್ ಎಚ್ಚರಿಕೆ ನೀಡಿದ್ದಾರೆ.. ಇತ್ತ ಕಾಂಗ್ರೆಸ್​​ನ ಕುರ್ಚಿ ಜಗಳ ಬಿಜೆಪಿಗೆ ರಸದೌತಣ ಬಡಿಸಿದೆಸಂಕ್ರಾತಿನೂ ಕಳೆದಿತ್ತು. ಕ್ರಾಂತಿಯ ಗುಮ್ಮ ತಕ್ಕಮಟ್ಟಿಗೆ ಮಂಜುಗಡ್ಡೆಯಂತೆ ಹೆಪ್ಪುಗಟ್ಟಿತ್ತು..  ಈ ಮಧ್ಯೆ ಸಮಯವೇ ಎಲ್ಲದಕ್ಕೂ ಉತ್ತರ ನೀಡುತ್ತೆ, ಧೈರ್ಯಂ ಸರ್ವತ್ರ ಸಾಧನಂ ಮಂತ್ರ ಪಠಿಸಿತ್ತಾ ಡಿಸಿಎಂ ಡಿಕೆಶಿ ಕೂಡ ಸುಮ್ಮನಾಗಿಬಿಟ್ಟಿದ್ದರು.. ಆದ್ರೆ, ರಥಸಪ್ತಮಿ ಕಳೆದು ಮಾಘಮಾಸ ಆರಂಭ ಆಗ್ತಿದ್ದಂತೆ ಯತೀಂದ್ರ ಹಚ್ಚಿದ ದಳ್ಳುರಿ, ಸಿಎಂ ಕುರ್ಚಿ ಕುರಿತ ಹಸ್ತಕ್ಷೇಪ ಮತ್ತೆ ದಟ್ಟ ಹೊಗೆಯಾಡುವಂತೆ ಮಾಡಿದೆ..ಪದೇ ಪದೇ ತಂದೆ ಪರ ಎಂಎಲ್ಸಿ ಡಾ. ಯತೀಂದ್ರ ಬ್ಯಾಟಿಂಗ್ನಮ್ಮನ್ನು ಪ್ರಚೋದಿಸಬೇಡಿ..ಸಿಎಂ ಪುತ್ರಗೆ ಇಕ್ಬಾಲ್ ಪಂಚ್ಇದೊಂದೇ ಬಾರಿ ಅಲ್ಲ ಬಿಡಿ.. ಸುಮಾರು ಸಾರಿ ಆಗೋಗಿದೆ.. ಸಿಎಂ ಬದಲಾವಣೆ ವಿಚಾರ ತಣ್ಣಗಾಗ್ತಿದ್ದಂತೆ ಸಿಎಂ ಪುತ್ರ ಡಾ.ಯತೀಂದ್ರ ಕಡ್ಡಿಗೀರಿ ಬೆಂಕಿ ಹಚ್ಚಿದ್ದೇ ಹಚ್ಚಿದ್ದು.. ಇದ್ರಿಂದ ಡಿಸಿಎಂ ಡಿಕೆಶಿ ಬಣದ ನಾಯಕರು ಉರಿದೋಗಿದ್ದು ಜಗಜ್ಜಾಹೀರು.. ಮೊನ್ನೆ ಪವರ್ ಶೇರಿಂಗ್ ವಿಚಾರ ಸೆಟ್ಲ್ ಆಗಿದೆ ಅಂತ ಡಾಕ್ಟರ್ ಕೊಟ್ಟ ಡೋಸ್​, ಡಿಕೆಶಿ ಕ್ಯಾಂಪ್​ನ​ ತಲೆಸುತ್ತುವಂತೆ ಮಾಡಿದೆ.. ಪದೇ ಪದೇ ತಂದೆ ಪರ ಬ್ಯಾಟ್ ಮಾಡ್ತಿರುವ ಯತೀಂದ್ರ ವಿರುದ್ಧ ಇವತ್ತು ರಾಮನಗರ ಎಂಎಲ್​ಎ ಇಕ್ಬಾಲ್ ಹುಸೇನ್ ಸಾಹೇಬ್ರು ನಖಶಿಖಾಂತ ಸಿಡಿದಿದ್ದಾರೆ.. ಎಲ್ಲರಿಗೂ ತಂದೆ ಮೇಲೆ ಪ್ರೀತಿ ಇದ್ದೇ ಇರುತ್ತೆ, ಈ ತರ ಹೇಳಿಕೆ ಕೊಟ್ಟು ಬೇರೆಯವರನ್ನ ಪ್ರವೋಕ್ ಮಾಡೋದು ಎಷ್ಟು ಸರಿ, ಸಿದ್ದರಾಮಯ್ಯ ಸಾಮಾಜಿಕ ನ್ಯಾಯ ಮಾತನ್ನು ನೆನಪಿಸಿ ಪಂಚ್ ಕೊಟ್ಟಿದ್ದಾರೆ..ರಾಜ್ಯ ಕಾಂಗ್ರೆಸ್​ ಪಾಳಯದ ಕುರ್ಚಿ ಕಾದಾಟ ಬಿಜೆಪಿ ರಸದೌತಣ ಬಡಿಸ್ತಿದೆ.. ಕಾಂಗ್ರೆಸ್​​​ನಲ್ಲಿ ಎಲ್ಲಾ ಶಾಸಕರೂ ಜ್ಯೋತಿಷಿಗಳಾಗಿದ್ದಾರೆ.. ಇವರ ಜಗಳದಿಂದ ಅಭಿವೃದ್ಧಿ ಆಗ್ತಿಲ್ಲ.. ಗೊಂದಲ ಬಗೆಹರಿಸಬೇಕಾದ ಹೈಕಮಾಂಡ್​ ವೀಕ್ ಆಗಿದೆ. ಕೆಪ್ಯಾಸಿಟಿ ಇಲ್ಲ ಅಂತ ವಿಪಕ್ಷ ನಾಯಕ ಆರ್.ಅಶೋಕ್ ಟೀಕೆಗಳಿಂದ ತಿವಿದಿದ್ದಾರೆ..ಗದ್ದೆಯಲ್ಲೂ ಡಿ.ಕೆ.ಶಿವಕುಮಾರ್ ಮುಂದಿನ ಸಿಎಂ ಕೂಗು!ಇತ್ತ ಸಿಎಂ ಪಟ್ಟಕ್ಕಾಗಿ ಮುಸುಕಿನ ಗುದ್ದಾಟ ನಡೀತಿದ್ರೆ ಅತ್ತ ಗದ್ದೆಯಲ್ಲೂ ಡಿಸಿಎಂ ಡಿಕೆ ಶಿವಕುಮಾರ್​ ಸಿಎಂ ಆಗಲಿ ಅನ್ನೋ ಕೂಗು ಕೇಳಿ ಬಂದಿದೆ.. ಮಂಡ್ಯದ ಮೊತ್ತಹಳ್ಳಿ ಗ್ರಾಮದಲ್ಲಿ ಭತ್ತದ ಪೈರಿನಲ್ಲಿ, ಡಿಕೆಶಿ​ ಸಿಎಂ ಆಗಲಿ ಅಂತ ಅಭಿಮಾನಿಗಳು ವಿಶೇಷ ಬೇಡಿಕೆ ಇಟ್ಟಿದ್ದಾರೆ. ದೇವರ ಆಶೀರ್ವಾದದಿಂದ ಸಿಎಂ ಆಗೇ ಆಗ್ತಾರೆ. ಸಿದ್ದರಾಮಯ್ಯ ಅವರು ಕೂಡ ತಮ್ಮ ಹುದ್ದೆ ಬಿಟ್ಟು ಕೊಡಲಿ ಅಭಿಮಾನಿಗಳು ಮನವಿ ಮಾಡ್ಕೊಂಡಿದ್ದಾರೆ.

ಕುರ್ಚಿ ಫೈಟ್ ನಡುವೆ ನಾಳೆ ಡಿಕೆಶಿ ದೆಹಲಿಯಾತ್ರೆ!ನೀರಾವರಿ ಯೋಜನೆಗಳ ಸಂಬಂಧ ಡಿಕೆಶಿ ಟೂರ್ಈ ಮಧ್ಯೆ ನಾಳೆ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಯಾತ್ರೆ ಕೈಗೊಂಡಿದ್ದಾರೆ.. ರಾಜ್ಯದ ನೀರಾವರಿ ಯೋಜನೆಗಳ ಸಂಬಂಧ ಯಾತ್ರೆ ಅಂತ ಖುದ್ದು ಡಿಸಿಎಂ ಅವರೇ ಮಾಹಿತಿ ನೀಡಿದ್ದಾರೆ.. ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಮಾಡಿ ಕುರ್ಚಿ ವಿಚಾರ ಚರ್ಚೆ ಮಾಡುವ ಸಾಧ್ಯತೆ ಇದೆ..
ಇತ್ತ ಮುಂದೆ  ಪಂಚ ರಾಜ್ಯಗಳ ಚುನಾವಣಾ ಅಗ್ನಿಪರೀಕ್ಷೆ ಎದುರಾಗಿದೆ, ಹೀಗಾಗಿ ಸಿಎಂ ಚೇಂಜ್ ವಿಚಾರ ಹೈಕಮಾಂಡ್​ಗೆ ಧರ್ಮ ಸಂಕಟ ತಂದಿಟ್ಟಿದೆ.. ಅಹಿಂದ ಮತಗಳ ಮಷಿನ್  ಸಿದ್ದರಾಮಯ್ಯರಿಂದ ಬಲವಂತಾಗಿ ಅಧಿಕಾರ ಕಿತ್ತುಕೊಳ್ಳುವ ಧೈರ್ಯ ತೋರಲಾಗ್ತಿಲ್ಲ.. ಇತ್ತ, ಡಿಸಿಎಂ ಡಿಕೆಶಿಗೂ ವಿವೇಕ ಜಾಗೃತ ಆದಂತಿದೆ.. ಡಿಕೆಶಿ ವಿವೇಕ ಹೊಂದಿದ್ದಾರೆಂದರೆ ಅವರೊಳಗೆ ಪಳಗಿದ ರಾಜಕಾರಣಿ ಕೆಲಸ ಮಾಡ್ತಿದ್ದಾನೆ ಅಂತಾನೇ ಅರ್ಥ.. ಪ್ರಯತ್ನ ವಿಫಲ ಆದ್ರೂ ಪ್ರಾರ್ಥನೆಯ ಫಲ ಸಿಗುವ ಅದಮ್ಯ ವಿಶ್ವಾಸ ಇನ್ನೂ ಇದೆ.. ಇದನ್ನೆಲ್ಲಾ ನೋಡಿದ್ರೆ ಸರ್ವಂ ಕಾಲ ಮಯಂ.. ಕಾಲಾಯ ತಸ್ಮೈ ನಮಃ ಎನ್ನಬಹುದು..ಹರೀಶ್ ಕಾಕೋಳ್, ಪೊಲಿಟಿಕಲ್ ಬ್ಯೂರೋ, ನ್ಯೂಸ್​ಫಸ್ಟ್​​​
ವಿಶೇಷ ಸೂಚನೆ: ಎಲ್ಲಾ DTH &amp; Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
  ]]></description>
<enclosure url="https://img-cdn.publive.online/fit-in/1280x960/newsfirstlive-kannada/media/media_files/2025/12/13/iqbal-hussain-2025-12-13-13-57-35.jpg" length="49398" type="image/jpeg"/>
<pubDate>Thu, 12 Feb 2026 09:44:07 +0530</pubDate>
<dc:creator>Newsfirst</dc:creator>
<media:keywords>ನಾಳೆ, ಡಿಸಿಎಂ, ಡಿಕೆಶಿ, ದೆಹಲಿ, ಯಾತ್ರೆ:, ನಮ್ಮನ್ನು, ಪ್ರಚೋದಿಸಬೇಡಿ, ಎಂದ, ಶಾಸಕ, ಇಕ್ಬಾಲ್, ಹುಸೇನ್‌</media:keywords>
</item>

<item>
<title>ತಮಿಳುನಾಡಿನ ದೀಪ ಬೆಳಗುವ ವಿವಾದ :  ಬೆಟ್ಟದ ದರ್ಗಾದಲ್ಲಿ ನಿತ್ಯ ನಮಾಜ್‌ ಆದೇಶ ಎತ್ತಿ ಹಿಡಿದ ಸುಪ್ರೀಂಕೋರ್ಟ್‌</title>
<link>https://thinkerr.in/%E0%B2%A4%E0%B2%AE%E0%B2%BF%E0%B2%B3%E0%B3%81%E0%B2%A8%E0%B2%BE%E0%B2%A1%E0%B2%BF%E0%B2%A8-%E0%B2%A6%E0%B3%80%E0%B2%AA-%E0%B2%AC%E0%B3%86%E0%B2%B3%E0%B2%97%E0%B3%81%E0%B2%B5-%E0%B2%B5%E0%B2%BF%E0%B2%B5%E0%B2%BE%E0%B2%A6-%E0%B2%AC%E0%B3%86%E0%B2%9F%E0%B3%8D%E0%B2%9F%E0%B2%A6-%E0%B2%A6%E0%B2%B0%E0%B3%8D%E0%B2%97%E0%B2%BE%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%A8%E0%B2%BF%E0%B2%A4%E0%B3%8D%E0%B2%AF-%E0%B2%A8%E0%B2%AE%E0%B2%BE%E0%B2%9C%E0%B3%8D-%E0%B2%86%E0%B2%A6%E0%B3%87%E0%B2%B6-%E0%B2%8E%E0%B2%A4%E0%B3%8D%E0%B2%A4%E0%B2%BF-%E0%B2%B9%E0%B2%BF%E0%B2%A1%E0%B2%BF%E0%B2%A6-%E0%B2%B8%E0%B3%81%E0%B2%AA%E0%B3%8D%E0%B2%B0%E0%B3%80%E0%B2%82%E0%B2%95%E0%B3%8B%E0%B2%B0%E0%B3%8D%E0%B2%9F%E0%B3%8D</link>
<guid>https://thinkerr.in/%E0%B2%A4%E0%B2%AE%E0%B2%BF%E0%B2%B3%E0%B3%81%E0%B2%A8%E0%B2%BE%E0%B2%A1%E0%B2%BF%E0%B2%A8-%E0%B2%A6%E0%B3%80%E0%B2%AA-%E0%B2%AC%E0%B3%86%E0%B2%B3%E0%B2%97%E0%B3%81%E0%B2%B5-%E0%B2%B5%E0%B2%BF%E0%B2%B5%E0%B2%BE%E0%B2%A6-%E0%B2%AC%E0%B3%86%E0%B2%9F%E0%B3%8D%E0%B2%9F%E0%B2%A6-%E0%B2%A6%E0%B2%B0%E0%B3%8D%E0%B2%97%E0%B2%BE%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%A8%E0%B2%BF%E0%B2%A4%E0%B3%8D%E0%B2%AF-%E0%B2%A8%E0%B2%AE%E0%B2%BE%E0%B2%9C%E0%B3%8D-%E0%B2%86%E0%B2%A6%E0%B3%87%E0%B2%B6-%E0%B2%8E%E0%B2%A4%E0%B3%8D%E0%B2%A4%E0%B2%BF-%E0%B2%B9%E0%B2%BF%E0%B2%A1%E0%B2%BF%E0%B2%A6-%E0%B2%B8%E0%B3%81%E0%B2%AA%E0%B3%8D%E0%B2%B0%E0%B3%80%E0%B2%82%E0%B2%95%E0%B3%8B%E0%B2%B0%E0%B3%8D%E0%B2%9F%E0%B3%8D</guid>
<description><![CDATA[ ತಮಿಳುನಾಡಿನ ತಿರುಪ್ಪರಂಕುಂದ್ರಂ ಬೆಟ್ಟದಲ್ಲಿರುವ ದರ್ಗಾದಲ್ಲಿ ನಮಾಜ್ ಮಾಡುವುದನ್ನು ನಿರ್ಬಂಧಿಸಿದ ಮದ್ರಾಸ್ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿಹಿಡಿದಿದ್ದು, ಮುಸ್ಲಿಮರು ಆ ಸ್ಥಳದಲ್ಲಿ ಪ್ರತಿದಿನ ಪ್ರಾರ್ಥನೆ ಸಲ್ಲಿಸುವಂತಿಲ್ಲ ಎಂದು ಹೇಳಿದೆ. ಹೈಕೋರ್ಟ್‌ನ ತೀರ್ಪನ್ನು &quot;ಸಮತೋಲಿತ ಆದೇಶ&quot; ಎಂದು ಸುಪ್ರೀಂ ಕೋರ್ಟ್ ಬಣ್ಣಿಸಿದೆ.
ಆವರಣದೊಳಗೆ ಪ್ರಾಣಿಬಲಿ ನಿಷೇಧವನ್ನು ದೃಢಪಡಿಸುವ ಸಂದರ್ಭದಲ್ಲಿ ದರ್ಗಾದಲ್ಲಿ ರಂಜಾನ್ ಮತ್ತು ಬಕ್ರೀದ್‌ನಂದು ಮಾತ್ರ ನಮಾಜ್‌ಗೆ ಅನುಮತಿ ನೀಡುವ ಹೈಕೋರ್ಟ್‌ನ ನಿರ್ದೇಶನವನ್ನು ನ್ಯಾಯಾಲಯ ಎತ್ತಿಹಿಡಿದಿದೆ. ಮದ್ರಾಸ್ ಹೈಕೋರ್ಟಿನ ತೀರ್ಪನ್ನು ಪ್ರಶ್ನಿಸಿ ಮುಸ್ಲಿಂ ಧರ್ಮದ ಇಮಾಮ್ ಹುಸೇನ್ ಸಲ್ಲಿಸಿದ ಮೇಲ್ಮನವಿ  ವಿಚಾರಣೆ ನಡೆಸಿ ಸುಪ್ರೀಂಕೋರ್ಟ್   ಈ ತೀರ್ಪು ನೀಡಿದೆ. ಈ ಪ್ರಕರಣವು ಬಹು ಸಮುದಾಯಗಳಿಂದ ಪವಿತ್ರವೆಂದು ಪರಿಗಣಿಸಲ್ಪಟ್ಟಿರುವ ಬೆಟ್ಟದಲ್ಲಿನ ಧಾರ್ಮಿಕ ಆಚರಣೆಗಳ ವಿವಾದಗಳನ್ನು ಕಂಡಿರುವ ದೀರ್ಘಾವಧಿಯ ತಿರುಪ್ಪರಕುಂದ್ರಂ ದೀಪಂ ಸಾಲಿಗೆ ಸಂಬಂಧಿಸಿದೆ. ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಲು ನಿರಾಕರಿಸಿದ ನಂತರ, ಮದ್ರಾಸ್ ಹೈಕೋರ್ಟ್ ವಿಧಿಸಿರುವ ನಿರ್ಬಂಧಗಳು ಜಾರಿಯಲ್ಲಿರುತ್ತವೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಮತ್ತು ಪೊಲೀಸರ ಅನುಮತಿಗೆ ಒಳಪಟ್ಟು ತಮಿಳುನಾಡಿನ ತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ದೀಪ ಬೆಳಗಿಸಲು ಅನುಮತಿ ನೀಡಿದ ಮದ್ರಾಸ್ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಮೂಲ ಅರ್ಜಿದಾರರಾದ ರಾಮ ರವಿಕುಮಾರ್ ಅವರು ತಮ್ಮ ಮನವಿಯಲ್ಲಿ, ಅರುಲ್ಮಿಗು ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಮಾಲೀಕತ್ವ ಮತ್ತು ಬೆಟ್ಟದ ನಿಯಂತ್ರಣವನ್ನು ಗುರುತಿಸುವ ಸಿವಿಲ್ ನ್ಯಾಯಾಲಯದ ತೀರ್ಪುಗಳನ್ನು ಬಂಧಿಸುವ &quot;ಕಾನೂನುಬಾಹಿರ&quot; ತೆರವು ಮತ್ತು ಅತ್ಯಗತ್ಯ ಧಾರ್ಮಿಕ ಆಚರಣೆಗೆ &quot;ಅನುಮತಿಯಿಲ್ಲದ ನ್ಯಾಯಾಂಗ ಹೇರಿಕೆ&quot; ಎಂದು ಉಚ್ಚ ನ್ಯಾಯಾಲಯದ ನಿರ್ದೇಶನಗಳನ್ನು ಉಲ್ಲೇಖಿಸಿದ್ದಾರೆ.
&#039;ದೀಪಥೂನ್&#039; (ಕಲ್ಲಿನ ಸ್ತಂಭ) ನಲ್ಲಿ ದೀಪವನ್ನು ಬೆಳಗಿಸುವ ದೇವಾಲಯದ ಹಕ್ಕನ್ನು ಹೈಕೋರ್ಟ್ ಅಂಗೀಕರಿಸಿದ್ದರೂ, ಅದನ್ನು ಆಡಳಿತಾತ್ಮಕ ವಿವೇಚನೆಗೆ ಒಳಪಡಿಸುವ ಮೂಲಕ ಆ ಹಕ್ಕನ್ನು ಪರಿಣಾಮಕಾರಿಯಾಗಿ ಷರತ್ತುಬದ್ಧಗೊಳಿಸಿದೆ ಎಂದು ರವಿಕುಮಾರ್ ಪ್ರತಿಪಾದಿಸಿದರು.
ಬೆಟ್ಟದ ಮೇಲಿನ ದೇವಾಲಯದ ಮಾಲೀಕತ್ವದ ಹಕ್ಕುಗಳನ್ನು ಅಂತಿಮ ತೀರ್ಪು ನೀಡಿದ್ದರೂ ಸಹ, ಹೈಕೋರ್ಟ್ ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿದೆ ಎಂದು ಅವರು ರವಿಕುಮಾರ್ ತಮ್ಮ ಅರ್ಜಿಯಲ್ಲಿ ಪ್ರತಿಪಾದಿಸಿದ್ದರು.  
ದೀಪವನ್ನು ಬೆಳಗಿಸುವ ಅಭ್ಯಾಸವು ದೇವಾಲಯದ ಆಂತರಿಕ ಧಾರ್ಮಿಕ ವಿಷಯವಾಗಿದೆ ಮತ್ತು ಸ್ಪಷ್ಟವಾದ ಶಾಸನಬದ್ಧ ಆದೇಶದ ಅನುಪಸ್ಥಿತಿಯಲ್ಲಿ ಶಾಸನಬದ್ಧ ಅಧಿಕಾರಿಗಳಿಗೆ ಒಳಪಟ್ಟು ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಅರ್ಜಿದಾರರು ಪ್ರತಿಕೂಲ ತಾರತಮ್ಯವನ್ನು ಆರೋಪಿಸಿದ್ದಾರೆ ಮತ್ತು ನೆಲ್ಲಿತೋಪ್ ಪ್ರದೇಶದವರೆಗೆ ಮತ್ತೊಂದು ನಂಬಿಕೆಯ ಭಕ್ತರಿಗೆ ಪ್ರವೇಶ ಮತ್ತು ಬಳಕೆಯ ಹಕ್ಕುಗಳನ್ನು ಅನುಮತಿಸಲಾಗಿದೆ, ಆದರೆ ಬೆಟ್ಟದ ತುದಿಯಲ್ಲಿ ಹಿಂದೂ ಪೂಜೆಯನ್ನು ಕಾನೂನಿನ ಅಧಿಕಾರವಿಲ್ಲದೆ ಲೇಯರ್ಡ್ ಆಡಳಿತಾತ್ಮಕ ನಿಯಂತ್ರಣಗಳಿಗೆ ಒಳಪಡಿಸಲಾಗಿದೆ ಎಂದು ಹೇಳಿದರು.ಜನವರಿ 23 ರಂದು, ತಿರುಪ್ಪರನ್‌ಕುಂದ್ರಂ ದೇವಸ್ಥಾನವನ್ನು ಎಎಸ್‌ಐ ಸ್ವಾಧೀನಪಡಿಸಿಕೊಳ್ಳಲು ಮತ್ತು &#039;ದೀಪಥೂನ್&#039; ಮೇಲೆ ಪ್ರತಿದಿನ ದೀಪ ಬೆಳಗಿಸುವುದರ ಕುರಿತು ನಿರ್ದೇಶನಗಳನ್ನು ಕೋರಿ ಪ್ರತ್ಯೇಕ ಮನವಿಯ ಮೇಲೆ ಕೇಂದ್ರ, ತಮಿಳುನಾಡು ಸರ್ಕಾರ ಮತ್ತು ಇತರರಿಂದ ಪ್ರತಿಕ್ರಿಯೆಯನ್ನು ಸುಪ್ರೀಂ ಕೋರ್ಟ್ ಕೇಳಿದೆ.ಹಿಂದೂ ಧರ್ಮ ಪರಿಷತ್ ಎಂಬ ಸಂಘಟನೆ ಸಲ್ಲಿಸಿದ್ದ ಮನವಿಯ ಮೇರೆಗೆ ನೋಟಿಸ್ ಜಾರಿ ಮಾಡಿದೆ.ಜನವರಿ 6 ರಂದು ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠವು ಕಲ್ಲಿನ ಕಂಬ ಇರುವ ಸ್ಥಳವು ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಸೇರಿದ್ದು ಎಂದು ಸ್ಪಷ್ಟಪಡಿಸಿತು.ವಿಶೇಷ ಸೂಚನೆ: ಎಲ್ಲಾ DTH &amp; Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. ]]></description>
<enclosure url="https://img-cdn.publive.online/fit-in/1280x960/newsfirstlive-kannada/media/media_files/2026/01/06/madurai-karthikeya-deepam-2026-01-06-12-33-06.jpg" length="49398" type="image/jpeg"/>
<pubDate>Thu, 12 Feb 2026 09:44:07 +0530</pubDate>
<dc:creator>Newsfirst</dc:creator>
<media:keywords>ತಮಿಳುನಾಡಿನ, ದೀಪ, ಬೆಳಗುವ, ವಿವಾದ, ಬೆಟ್ಟದ, ದರ್ಗಾದಲ್ಲಿ, ನಿತ್ಯ, ನಮಾಜ್‌, ಆದೇಶ, ಎತ್ತಿ, ಹಿಡಿದ, ಸುಪ್ರೀಂಕೋರ್ಟ್‌</media:keywords>
</item>

<item>
<title>ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡಗೆ ಜೆಡಿಎಸ್ ಬಾಗಿಲು ಬಂದ್‌! ಜಿಟಿಡಿ ಹೆಸರು ಅನ್ನು ಎತ್ತಬೇಡಿ ಎಂದ ಕುಮಾರಸ್ವಾಮಿ</title>
<link>https://thinkerr.in/%E0%B2%9A%E0%B2%BE%E0%B2%AE%E0%B3%81%E0%B2%82%E0%B2%A1%E0%B3%87%E0%B2%B6%E0%B3%8D%E0%B2%B5%E0%B2%B0%E0%B2%BF-%E0%B2%95%E0%B3%8D%E0%B2%B7%E0%B3%87%E0%B2%A4%E0%B3%8D%E0%B2%B0%E0%B2%A6-%E0%B2%B6%E0%B2%BE%E0%B2%B8%E0%B2%95-%E0%B2%9C%E0%B2%BF%E0%B2%9F%E0%B2%BF%E0%B2%A6%E0%B3%87%E0%B2%B5%E0%B3%87%E0%B2%97%E0%B3%8C%E0%B2%A1%E0%B2%97%E0%B3%86-%E0%B2%9C%E0%B3%86%E0%B2%A1%E0%B2%BF%E0%B2%8E%E0%B2%B8%E0%B3%8D-%E0%B2%AC%E0%B2%BE%E0%B2%97%E0%B2%BF%E0%B2%B2%E0%B3%81-%E0%B2%AC%E0%B2%82%E0%B2%A6%E0%B3%8D-%E0%B2%9C%E0%B2%BF%E0%B2%9F%E0%B2%BF%E0%B2%A1%E0%B2%BF-%E0%B2%B9%E0%B3%86%E0%B2%B8%E0%B2%B0%E0%B3%81-%E0%B2%85%E0%B2%A8%E0%B3%8D%E0%B2%A8%E0%B3%81-%E0%B2%8E%E0%B2%A4%E0%B3%8D%E0%B2%A4%E0%B2%AC%E0%B3%87%E0%B2%A1%E0%B2%BF-%E0%B2%8E%E0%B2%82%E0%B2%A6-%E0%B2%95%E0%B3%81%E0%B2%AE%E0%B2%BE%E0%B2%B0%E0%B2%B8%E0%B3%8D%E0%B2%B5%E0%B2%BE%E0%B2%AE%E0%B2%BF</link>
<guid>https://thinkerr.in/%E0%B2%9A%E0%B2%BE%E0%B2%AE%E0%B3%81%E0%B2%82%E0%B2%A1%E0%B3%87%E0%B2%B6%E0%B3%8D%E0%B2%B5%E0%B2%B0%E0%B2%BF-%E0%B2%95%E0%B3%8D%E0%B2%B7%E0%B3%87%E0%B2%A4%E0%B3%8D%E0%B2%B0%E0%B2%A6-%E0%B2%B6%E0%B2%BE%E0%B2%B8%E0%B2%95-%E0%B2%9C%E0%B2%BF%E0%B2%9F%E0%B2%BF%E0%B2%A6%E0%B3%87%E0%B2%B5%E0%B3%87%E0%B2%97%E0%B3%8C%E0%B2%A1%E0%B2%97%E0%B3%86-%E0%B2%9C%E0%B3%86%E0%B2%A1%E0%B2%BF%E0%B2%8E%E0%B2%B8%E0%B3%8D-%E0%B2%AC%E0%B2%BE%E0%B2%97%E0%B2%BF%E0%B2%B2%E0%B3%81-%E0%B2%AC%E0%B2%82%E0%B2%A6%E0%B3%8D-%E0%B2%9C%E0%B2%BF%E0%B2%9F%E0%B2%BF%E0%B2%A1%E0%B2%BF-%E0%B2%B9%E0%B3%86%E0%B2%B8%E0%B2%B0%E0%B3%81-%E0%B2%85%E0%B2%A8%E0%B3%8D%E0%B2%A8%E0%B3%81-%E0%B2%8E%E0%B2%A4%E0%B3%8D%E0%B2%A4%E0%B2%AC%E0%B3%87%E0%B2%A1%E0%B2%BF-%E0%B2%8E%E0%B2%82%E0%B2%A6-%E0%B2%95%E0%B3%81%E0%B2%AE%E0%B2%BE%E0%B2%B0%E0%B2%B8%E0%B3%8D%E0%B2%B5%E0%B2%BE%E0%B2%AE%E0%B2%BF</guid>
<description><![CDATA[ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಜೆಡಿಎಸ್ ಪಕ್ಷದೊಂದಿಗೆ ಇಲ್ಲ. ಪಕ್ಷದಿಂದ ದೂರ ಉಳಿದಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ನಮ್ಮೊಂದಿಗೆ ಇದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಹಲವಾರು ನಾಯಕರು ಇದ್ದಾರೆ. ದೊಡ್ಡ ಮಟ್ಟದಲ್ಲಿ ತಯಾರಿ ಮಾಡಿಕೊಂಡಿರುವವರು ಇದ್ದಾರೆ. ದೊಡ್ಡ ಮಟ್ಟದ ಅಭ್ಯರ್ಥಿಯನ್ನೇ ಮುಂದಿನ ಚುನಾವಣೆಗೆ ಕಣಕ್ಕಿಳಿಸುತ್ತೇವೆ ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ಚಾಮುಂಡೇಶ್ವರಿ ಕ್ಷೇತ್ರದ ಹಾಲಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡಗೆ ಜೆಡಿಎಸ್ ಪಕ್ಷದ ಬಾಗಿಲು  ಬಂದ್ ಆಗಿದೆ ಎಂಬ ಖಡಕ್ ಸಂದೇಶ ರವಾನಿಸಿದ್ದಾರೆ. ಜೊತೆಗೆ ಜಿ.ಟಿ.ದೇವೇಗೌಡ ಹೆಸರು ಅನ್ನು ಕೂಡ ನಮ್ಮ ಎದುರು ಪ್ರಸ್ತಾಪ ಮಾಡಬೇಡಿ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಸಿದ್ದರಾಮಯ್ಯ ಎದುರುಗಡೆ ಸಿದ್ದರಾಮಯ್ಯರನ್ನು ಈ ಹಿಂದೆ ಜಿ.ಟಿ.ದೇವೇಗೌಡ ಹೊಗಳಿದ್ದರು. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೇ, ಎಲ್ಲರೂ ರಾಜೀನಾಮೆ ನೀಡಬೇಕಾಗುತ್ತೆ. ಎಲ್ಲರೂ ರಾಜೀನಾಮೆ ಕೊಡ್ತಾರಾ ಎಂದು ಜಿ.ಟಿ.ದೇವೇಗೌಡ ಪ್ರಶ್ನಿಸಿದ್ದರು. ಇದು ಎಚ್‌.ಡಿ.ಕುಮಾರಸ್ವಾಮಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಆದರೇ, ಜಿಟಿಡಿ ಅವರ ಪುತ್ರ ಜಿ.ಡಿ.ಹರೀಶ್ ಗೌಡ ಮಾತ್ರ ಜೆಡಿಎಸ್ ಪಕ್ಷ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಅವರ ಜೊತೆಗೆ ಇದ್ದಾರೆ. ಇತ್ತೀಚೆಗೆ ಹರೀಶ್ ಗೌಡರ ಹುಟ್ಟುಹಬ್ಬದ ಪ್ಲೆಕ್ಸ್ ಮತ್ತು ಬ್ಯಾನರ್ ಗಳಲ್ಲೂ ಜಿಟಿ ದೇವೇಗೌಡರ ಪೋಟೋ ಇರಲಿಲ್ಲ. 

ವಿಶೇಷ ಸೂಚನೆ: ಎಲ್ಲಾ DTH &amp; Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. ]]></description>
<enclosure url="https://img-cdn.publive.online/fit-in/1280x960/newsfirstlive-kannada/media/post_attachments/wp-content/uploads/2024/10/MYS_GTD.jpg" length="49398" type="image/jpeg"/>
<pubDate>Thu, 12 Feb 2026 09:44:07 +0530</pubDate>
<dc:creator>Newsfirst</dc:creator>
<media:keywords>ಚಾಮುಂಡೇಶ್ವರಿ, ಕ್ಷೇತ್ರದ, ಶಾಸಕ, ಜಿ.ಟಿ.ದೇವೇಗೌಡಗೆ, ಜೆಡಿಎಸ್, ಬಾಗಿಲು, ಬಂದ್‌, ಜಿಟಿಡಿ, ಹೆಸರು, ಅನ್ನು, ಎತ್ತಬೇಡಿ, ಎಂದ, ಕುಮಾರಸ್ವಾಮಿ</media:keywords>
</item>

<item>
<title>ಐದು ಚೀತಾ ಮರಿಗಳಿಗೆ ಜನ್ಮ ನೀಡಿದ ಆಶಾ ಚೀತಾ: ದೇಶದಲ್ಲಿ 35 ಕ್ಕೇರಿಕೆಯಾದ ಚೀತಾ ಸಂಖ್ಯೆ!</title>
<link>https://thinkerr.in/%E0%B2%90%E0%B2%A6%E0%B3%81-%E0%B2%9A%E0%B3%80%E0%B2%A4%E0%B2%BE-%E0%B2%AE%E0%B2%B0%E0%B2%BF%E0%B2%97%E0%B2%B3%E0%B2%BF%E0%B2%97%E0%B3%86-%E0%B2%9C%E0%B2%A8%E0%B3%8D%E0%B2%AE-%E0%B2%A8%E0%B3%80%E0%B2%A1%E0%B2%BF%E0%B2%A6-%E0%B2%86%E0%B2%B6%E0%B2%BE-%E0%B2%9A%E0%B3%80%E0%B2%A4%E0%B2%BE-%E0%B2%A6%E0%B3%87%E0%B2%B6%E0%B2%A6%E0%B2%B2%E0%B3%8D%E0%B2%B2%E0%B2%BF-35-%E0%B2%95%E0%B3%8D%E0%B2%95%E0%B3%87%E0%B2%B0%E0%B2%BF%E0%B2%95%E0%B3%86%E0%B2%AF%E0%B2%BE%E0%B2%A6-%E0%B2%9A%E0%B3%80%E0%B2%A4%E0%B2%BE-%E0%B2%B8%E0%B2%82%E0%B2%96%E0%B3%8D%E0%B2%AF%E0%B3%86</link>
<guid>https://thinkerr.in/%E0%B2%90%E0%B2%A6%E0%B3%81-%E0%B2%9A%E0%B3%80%E0%B2%A4%E0%B2%BE-%E0%B2%AE%E0%B2%B0%E0%B2%BF%E0%B2%97%E0%B2%B3%E0%B2%BF%E0%B2%97%E0%B3%86-%E0%B2%9C%E0%B2%A8%E0%B3%8D%E0%B2%AE-%E0%B2%A8%E0%B3%80%E0%B2%A1%E0%B2%BF%E0%B2%A6-%E0%B2%86%E0%B2%B6%E0%B2%BE-%E0%B2%9A%E0%B3%80%E0%B2%A4%E0%B2%BE-%E0%B2%A6%E0%B3%87%E0%B2%B6%E0%B2%A6%E0%B2%B2%E0%B3%8D%E0%B2%B2%E0%B2%BF-35-%E0%B2%95%E0%B3%8D%E0%B2%95%E0%B3%87%E0%B2%B0%E0%B2%BF%E0%B2%95%E0%B3%86%E0%B2%AF%E0%B2%BE%E0%B2%A6-%E0%B2%9A%E0%B3%80%E0%B2%A4%E0%B2%BE-%E0%B2%B8%E0%B2%82%E0%B2%96%E0%B3%8D%E0%B2%AF%E0%B3%86</guid>
<description><![CDATA[ ಆಶಾ ಎಂಬ ಚೀತಾ ಮಧ್ಯಪ್ರದೇಶದ  ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಐದು ಮರಿಗಳಿಗೆ ಜನ್ಮ ನೀಡಿದೆ.  ಇದು ಭಾರತದ ಪ್ರಾಜೆಕ್ಟ್ ಚೀತಾ ಕಾರ್ಯಕ್ರಮದಲ್ಲಿ ಮತ್ತೊಂದು ಮೈಲಿಗಲ್ಲು. ಹೊಸ ಸೇರ್ಪಡೆಗಳೊಂದಿಗೆ, ದೇಶದ ಚೀತಾ ಜನಸಂಖ್ಯೆಯು 35 ಕ್ಕೆ ಏರಿದೆ.ಟ್ವೀಟರ್ ನಲ್ಲಿ  ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಇದನ್ನು &quot;ಅಗಾಧ ಹೆಮ್ಮೆ ಮತ್ತು ಸಂತೋಷ&quot;ದ ಕ್ಷಣ ಎಂದು ಕರೆದರು.
ನಮೀಬಿಯಾದ ಚಿರತೆ ಮತ್ತು ಹೆಮ್ಮೆಯ ಎರಡನೇ ಬಾರಿಗೆ ತಾಯಿಯಾದ ಆಶಾ, ಫೆಬ್ರವರಿ 7, 2026 ರಂದು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಐದು ಮರಿಗಳಿಗೆ ಜನ್ಮ ನೀಡಿದಾಗ ಪ್ರಾಜೆಕ್ಟ್ ಚೀತಾಗೆ ಅಪಾರ ಹೆಮ್ಮೆ ಮತ್ತು ಸಂತೋಷದ ಕ್ಷಣ. ಇದರೊಂದಿಗೆ, ಭಾರತೀಯ ಮೂಲದ ಬದುಕುಳಿದ ಮರಿಗಳ ಸಂಖ್ಯೆ 24 ಕ್ಕೆ ಏರಿದೆ, ಇದು ಭಾರತೀಯ ನೆಲದಲ್ಲಿ ಎಂಟನೇ ಯಶಸ್ವಿ ಚಿರತೆ ಮರಿಯನ್ನು  ಗುರುತಿಸುತ್ತದೆ - ಇದು ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಪರಿಸರ ಪ್ರಜ್ಞೆಯ ನಾಯಕತ್ವದಲ್ಲಿ ಕೈಗೊಂಡು ಪೋಷಿಸಲ್ಪಟ್ಟ ಭಾರತದ ಚಿರತೆ ಸಂರಕ್ಷಣಾ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲು,&quot; ಎಂದು ಅವರು X ನಲ್ಲಿ ಬರೆದಿದ್ದಾರೆ.
&quot;ಈ ಸಂತೋಷದಾಯಕ ಸಾಧನೆಯು ಕ್ಷೇತ್ರ ಸಿಬ್ಬಂದಿ ಮತ್ತು ಪಶುವೈದ್ಯರು ನೆಲದ ಮೇಲೆ ಅವಿಶ್ರಾಂತವಾಗಿ ಕೆಲಸ ಮಾಡುತ್ತಿರುವ ಅಚಲ ಸಮರ್ಪಣೆ, ಕೌಶಲ್ಯ ಮತ್ತು ಬದ್ಧತೆಗೆ ಒಂದು ಹೊಳೆಯುವ ಸಾಕ್ಷಿಯಾಗಿದೆ. &quot;ಆಶಾ ಮತ್ತು ಅವಳ ಮರಿಗಳು ಅಭಿವೃದ್ಧಿ ಹೊಂದಲಿ.ಭಾರತದ ಚಿರತೆಯ ಕಥೆಯನ್ನು ಇನ್ನೂ ಹೆಚ್ಚಿನ ಯಶಸ್ಸಿಗೆ ಕೊಂಡೊಯ್ಯಲಿ&quot; ಎಂದು ಅವರು ಹೇಳಿದರು.

Five new cubs at Kuno 🐆🌿Cheetah Aasha gives birth to five cubs at @KunoNationalPrk, marking another milestone under Project Cheetah.India’s cheetah population rises to 35, reflecting the vision of PM Shri @narendramodi ji and efforts of field staff &amp; veterinarians. pic.twitter.com/tSXZqDHJIq
— MoEF&amp;CC (@moefcc) February 7, 2026



ಚಿರತೆಗಳು ಒಂದು ಕಾಲದಲ್ಲಿ ಭಾರತದಾದ್ಯಂತ ಮುಕ್ತವಾಗಿ ಸುತ್ತಾಡುತ್ತಿದ್ದವು, ಆದರೆ ನಿರಂತರ ಮತ್ತು ಅನಿಯಂತ್ರಿತ ಬೇಟೆ ಅವುಗಳನ್ನು ನಾಶಮಾಡಿತು, ಮತ್ತು ಈ ಪ್ರಭೇದವು 1952 ರಲ್ಲಿ ದೇಶದಲ್ಲಿ ಅಧಿಕೃತವಾಗಿ ನಿರ್ನಾಮವಾಗಿದೆ ಎಂದು ಘೋಷಿಸಲಾಯಿತು. 2022 ರಲ್ಲಿ, ಭಾರತವು ಅವುಗಳನ್ನು ತಮ್ಮ ಹಿಂದಿನ ಆವಾಸಸ್ಥಾನಕ್ಕೆ ಮರಳಿ ತರಲು ಪ್ರಾಜೆಕ್ಟ್ ಚೀತಾದ ಮೊದಲ ಹಂತವನ್ನು ಪ್ರಾರಂಭಿಸಿತು.ಈ ಪ್ರಯತ್ನದಡಿಯಲ್ಲಿ, ಚಿರತೆಗಳನ್ನು ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಎಚ್ಚರಿಕೆಯಿಂದ ಸ್ಥಳಾಂತರಿಸಲಾಯಿತು. ಈ ಯೋಜನೆಯನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಮಧ್ಯಪ್ರದೇಶ ಅರಣ್ಯ ಇಲಾಖೆ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆ (WII) ಸಹಭಾಗಿತ್ವದಲ್ಲಿ ನಡೆಸುತ್ತಿದೆ.
 
ವಿಶೇಷ ಸೂಚನೆ: ಎಲ್ಲಾ DTH &amp; Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. ]]></description>
<enclosure url="https://img-cdn.publive.online/fit-in/1280x960/newsfirstlive-kannada/media/media_files/2026/02/09/aasha-cheetha-2026-02-09-12-56-58.jpg" length="49398" type="image/jpeg"/>
<pubDate>Thu, 12 Feb 2026 09:44:07 +0530</pubDate>
<dc:creator>Newsfirst</dc:creator>
<media:keywords>ಐದು, ಚೀತಾ, ಮರಿಗಳಿಗೆ, ಜನ್ಮ, ನೀಡಿದ, ಆಶಾ, ಚೀತಾ:, ದೇಶದಲ್ಲಿ, ಕ್ಕೇರಿಕೆಯಾದ, ಚೀತಾ, ಸಂಖ್ಯೆ</media:keywords>
</item>

<item>
<title>ಬಾಲಿವುಡ್ ನಟ ರಾಜ್ ಪಾಲ್ ಯಾದವ್ ಜೈಲು ಪಾಲಾಗಿದ್ದೇಕೆ? ಎಷ್ಟು ಹಣ ಸಾಲ ಪಡೆದಿದ್ದರು?</title>
<link>https://thinkerr.in/%E0%B2%AC%E0%B2%BE%E0%B2%B2%E0%B2%BF%E0%B2%B5%E0%B3%81%E0%B2%A1%E0%B3%8D-%E0%B2%A8%E0%B2%9F-%E0%B2%B0%E0%B2%BE%E0%B2%9C%E0%B3%8D-%E0%B2%AA%E0%B2%BE%E0%B2%B2%E0%B3%8D-%E0%B2%AF%E0%B2%BE%E0%B2%A6%E0%B2%B5%E0%B3%8D-%E0%B2%9C%E0%B3%88%E0%B2%B2%E0%B3%81-%E0%B2%AA%E0%B2%BE%E0%B2%B2%E0%B2%BE%E0%B2%97%E0%B2%BF%E0%B2%A6%E0%B3%8D%E0%B2%A6%E0%B3%87%E0%B2%95%E0%B3%86-%E0%B2%8E%E0%B2%B7%E0%B3%8D%E0%B2%9F%E0%B3%81-%E0%B2%B9%E0%B2%A3-%E0%B2%B8%E0%B2%BE%E0%B2%B2-%E0%B2%AA%E0%B2%A1%E0%B3%86%E0%B2%A6%E0%B2%BF%E0%B2%A6%E0%B3%8D%E0%B2%A6%E0%B2%B0%E0%B3%81</link>
<guid>https://thinkerr.in/%E0%B2%AC%E0%B2%BE%E0%B2%B2%E0%B2%BF%E0%B2%B5%E0%B3%81%E0%B2%A1%E0%B3%8D-%E0%B2%A8%E0%B2%9F-%E0%B2%B0%E0%B2%BE%E0%B2%9C%E0%B3%8D-%E0%B2%AA%E0%B2%BE%E0%B2%B2%E0%B3%8D-%E0%B2%AF%E0%B2%BE%E0%B2%A6%E0%B2%B5%E0%B3%8D-%E0%B2%9C%E0%B3%88%E0%B2%B2%E0%B3%81-%E0%B2%AA%E0%B2%BE%E0%B2%B2%E0%B2%BE%E0%B2%97%E0%B2%BF%E0%B2%A6%E0%B3%8D%E0%B2%A6%E0%B3%87%E0%B2%95%E0%B3%86-%E0%B2%8E%E0%B2%B7%E0%B3%8D%E0%B2%9F%E0%B3%81-%E0%B2%B9%E0%B2%A3-%E0%B2%B8%E0%B2%BE%E0%B2%B2-%E0%B2%AA%E0%B2%A1%E0%B3%86%E0%B2%A6%E0%B2%BF%E0%B2%A6%E0%B3%8D%E0%B2%A6%E0%B2%B0%E0%B3%81</guid>
<description><![CDATA[ 2010 ರಲ್ಲಿ ರಾಜ್‌ಪಾಲ್ ತಮ್ಮ ನಿರ್ದೇಶನದ ಚೊಚ್ಚಲ ಚಿತ್ರ &#039;ಅಟ ಪಟ ಲಾಪಟ&#039; (2012) ಗೆ ಹಣಕಾಸು ಒದಗಿಸಲು ದೆಹಲಿ ಮೂಲದ ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್‌ನಿಂದ ₹5 ಕೋಟಿ ಸಾಲ ಪಡೆದಾಗ ಸಮಸ್ಯೆ ಆರಂಭವಾಯಿತು. ಬಾಕ್ಸ್ ಆಫೀಸ್‌ನಲ್ಲಿ ಚಿತ್ರದ ವೈಫಲ್ಯವು ಮರುಪಾವತಿ ಬಿಕ್ಕಟ್ಟನ್ನು ಹುಟ್ಟುಹಾಕಿತು, ಇದು ಕಾನೂನು ಹೋರಾಟಕ್ಕೆ ಕಾರಣವಾಯಿತು, ಇದರ ಪರಿಣಾಮವಾಗಿ ಏಪ್ರಿಲ್ 2018 ರಲ್ಲಿ ಮ್ಯಾಜಿಸ್ಟೀರಿಯಲ್ ನ್ಯಾಯಾಲಯವು ಅವರನ್ನು ಮತ್ತು ಅವರ ಪತ್ನಿ ರಾಧಾ ಅವರನ್ನು ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್‌ನ ಸೆಕ್ಷನ್ 138 ರ ಅಡಿಯಲ್ಲಿ ದೋಷಿಗಳೆಂದು ಘೋಷಿಸಿತು. ದೂರುದಾರರಿಗೆ ನೀಡಲಾದ ಏಳು ಚೆಕ್‌ಗಳು ಬೌನ್ಸ್ ಆದ ನಂತರ, ನಟನಿಗೆ ಆರು ತಿಂಗಳ ಸರಳ ಜೈಲು ಶಿಕ್ಷೆ ವಿಧಿಸಲಾಯಿತು, ನಂತರ 2019 ರ ಆರಂಭದಲ್ಲಿ ಸೆಷನ್ಸ್ ನ್ಯಾಯಾಲಯವು ಈ ಶಿಕ್ಷೆಯನ್ನು ಎತ್ತಿಹಿಡಿಯಿತು.
ಪರಿಷ್ಕರಣಾ ಅರ್ಜಿಯೊಂದಿಗೆ ದೆಹಲಿ ಹೈಕೋರ್ಟ್ ಅನ್ನು ಸಂಪರ್ಕಿಸಿದರೂ, ನಟನ ಕಾನೂನು ತೊಂದರೆಗಳು ಕಾಲಾನಂತರದಲ್ಲಿ ತೀವ್ರಗೊಂಡವು. ಜೂನ್ 2024 ರಲ್ಲಿ, ನ್ಯಾಯಾಲಯವು ಅವರ ಶಿಕ್ಷೆಯನ್ನು ಅಮಾನತುಗೊಳಿಸುವ ಮೂಲಕ ಮತ್ತು ಬಾಕಿ ಮೊತ್ತವನ್ನು ಪಾವತಿಸಲು &quot;ಪ್ರಾಮಾಣಿಕ ಮತ್ತು ನಿಜವಾದ ಕ್ರಮಗಳನ್ನು&quot; ಪ್ರದರ್ಶಿಸಲು ನಿರ್ದೇಶಿಸುವ ಮೂಲಕ ತಾತ್ಕಾಲಿಕ ಪರಿಹಾರವನ್ನು ನೀಡಿತು, ಅದು ಸುಮಾರು ₹9 ಕೋಟಿಗೆ ಏರಿತು. ಆದಾಗ್ಯೂ, ಶೀಘ್ರದಲ್ಲೇ ತಪ್ಪಿದ ಗಡುವುಗಳು ಮತ್ತು ಪಾಲಿಸದ ಬದ್ಧತೆಗಳು ಪುನರಾವರ್ತಿತ ಮಾದರಿಯನ್ನು ಅನುಸರಿಸಿದವು. ಅಕ್ಟೋಬರ್ 2025 ರ ಹೊತ್ತಿಗೆ, ಯಾದವ್ ಎರಡು ಡಿಮ್ಯಾಂಡ್ ಡ್ರಾಫ್ಟ್‌ಗಳ ಮೂಲಕ ₹75 ಲಕ್ಷವನ್ನು ಠೇವಣಿ ಇಟ್ಟಿದ್ದರೂ, ಹೆಚ್ಚಿನ ಹೊಣೆಗಾರಿಕೆ ಪಾವತಿಸದೆ ಉಳಿದಿದೆ ಎಂದು ನ್ಯಾಯಾಲಯ ಗಮನಿಸಿತು.
ಈ ತಿಂಗಳು ನ್ಯಾಯಮೂರ್ತಿ ಸ್ವರಣ ಕಾಂತ ಶರ್ಮಾ ನಟನನ್ನು ಶರಣಾಗುವಂತೆ ಆದೇಶಿಸಿದರು, ಅವರ ಸೆಲೆಬ್ರಿಟಿ ಸ್ಥಾನಮಾನವನ್ನು ಲೆಕ್ಕಿಸದೆ ಯಾರಿಗೂ ಕ್ಷಮಾದಾನವನ್ನು ಅನಂತವಾಗಿ ವಿಸ್ತರಿಸಲಾಗುವುದಿಲ್ಲ ಎಂದು ಗಮನಿಸಿದರು. ಫೆಬ್ರವರಿ 4, 2026 ರಂದು, ನ್ಯಾಯಾಲಯವು ಹಣವನ್ನು ವ್ಯವಸ್ಥೆ ಮಾಡಲು ಒಂದು ವಾರದ ವಿಸ್ತರಣೆಗಾಗಿ ಕೊನೆಯ ನಿಮಿಷದ &quot;ಕರುಣೆಯ ಅರ್ಜಿಯನ್ನು&quot; ತಿರಸ್ಕರಿಸಿತು, ರಾಜ್‌ಪಾಲ್ ಹಿಂದೆ ಸುಮಾರು 20 ವಿಭಿನ್ನ ಒಪ್ಪಂದಗಳನ್ನು ಪೂರೈಸಲು ವಿಫಲರಾಗಿದ್ದಾರೆ ಎಂದು ನ್ಯಾಯಾಧೀಶರು ಗಮನಿಸಿದರು.ಫೆಬ್ರವರಿ 5, 2026 ರಂದು, ಅವರ ವಕೀಲರು ಹೊಸ ₹25 ಲಕ್ಷ ಚೆಕ್ ಮತ್ತು ಹೊಸ ಪಾವತಿ ವೇಳಾಪಟ್ಟಿಯನ್ನು ನೀಡಿದಾಗ, ನ್ಯಾಯಾಧೀಶರು ಶರಣಾಗತಿ ಆದೇಶವನ್ನು ಹಿಂಪಡೆಯಲು ನಿರಾಕರಿಸಿದರು. ರಾಜ್‌ಪಾಲ್ ತಮ್ಮ ಆರು ತಿಂಗಳ ಶಿಕ್ಷೆಯನ್ನು ಅನುಭವಿಸಲು ಆ ದಿನ ಸಂಜೆ 4 ಗಂಟೆಗೆ ತಿಹಾರ್ ಜೈಲು ಅಧಿಕಾರಿಗಳಿಗೆ ಶರಣಾದರು.ವಿಶೇಷ ಸೂಚನೆ: ಎಲ್ಲಾ DTH &amp; Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.  ]]></description>
<enclosure url="https://img-cdn.publive.online/fit-in/1280x960/newsfirstlive-kannada/media/media_files/2026/02/10/rajpal-yadav-surrenders-in-tihar-jail-1-2026-02-10-13-49-51.jpg" length="49398" type="image/jpeg"/>
<pubDate>Thu, 12 Feb 2026 09:44:04 +0530</pubDate>
<dc:creator>Newsfirst</dc:creator>
<media:keywords>ಬಾಲಿವುಡ್, ನಟ, ರಾಜ್, ಪಾಲ್, ಯಾದವ್, ಜೈಲು, ಪಾಲಾಗಿದ್ದೇಕೆ, ಎಷ್ಟು, ಹಣ, ಸಾಲ, ಪಡೆದಿದ್ದರು</media:keywords>
</item>

<item>
<title>ಚೆಕ್ ಬೌನ್ಸ್ ಕೇಸ್ ನಲ್ಲಿ ತಿಹಾರ್ ಜೈಲು ಸೇರಿದ ಬಾಲಿವುಡ್ ನಟ ರಾಜ್ ಪಾಲ್ ಯಾದವ್‌: ನೆರವಿಗೆ ಬಾರದ ಬಾಲಿವುಡ್‌!</title>
<link>https://thinkerr.in/%E0%B2%9A%E0%B3%86%E0%B2%95%E0%B3%8D-%E0%B2%AC%E0%B3%8C%E0%B2%A8%E0%B3%8D%E0%B2%B8%E0%B3%8D-%E0%B2%95%E0%B3%87%E0%B2%B8%E0%B3%8D-%E0%B2%A8%E0%B2%B2%E0%B3%8D%E0%B2%B2%E0%B2%BF-%E0%B2%A4%E0%B2%BF%E0%B2%B9%E0%B2%BE%E0%B2%B0%E0%B3%8D-%E0%B2%9C%E0%B3%88%E0%B2%B2%E0%B3%81-%E0%B2%B8%E0%B3%87%E0%B2%B0%E0%B2%BF%E0%B2%A6-%E0%B2%AC%E0%B2%BE%E0%B2%B2%E0%B2%BF%E0%B2%B5%E0%B3%81%E0%B2%A1%E0%B3%8D-%E0%B2%A8%E0%B2%9F-%E0%B2%B0%E0%B2%BE%E0%B2%9C%E0%B3%8D-%E0%B2%AA%E0%B2%BE%E0%B2%B2%E0%B3%8D-%E0%B2%AF%E0%B2%BE%E0%B2%A6%E0%B2%B5%E0%B3%8D-%E0%B2%A8%E0%B3%86%E0%B2%B0%E0%B2%B5%E0%B2%BF%E0%B2%97%E0%B3%86-%E0%B2%AC%E0%B2%BE%E0%B2%B0%E0%B2%A6-%E0%B2%AC%E0%B2%BE%E0%B2%B2%E0%B2%BF%E0%B2%B5%E0%B3%81%E0%B2%A1%E0%B3%8D</link>
<guid>https://thinkerr.in/%E0%B2%9A%E0%B3%86%E0%B2%95%E0%B3%8D-%E0%B2%AC%E0%B3%8C%E0%B2%A8%E0%B3%8D%E0%B2%B8%E0%B3%8D-%E0%B2%95%E0%B3%87%E0%B2%B8%E0%B3%8D-%E0%B2%A8%E0%B2%B2%E0%B3%8D%E0%B2%B2%E0%B2%BF-%E0%B2%A4%E0%B2%BF%E0%B2%B9%E0%B2%BE%E0%B2%B0%E0%B3%8D-%E0%B2%9C%E0%B3%88%E0%B2%B2%E0%B3%81-%E0%B2%B8%E0%B3%87%E0%B2%B0%E0%B2%BF%E0%B2%A6-%E0%B2%AC%E0%B2%BE%E0%B2%B2%E0%B2%BF%E0%B2%B5%E0%B3%81%E0%B2%A1%E0%B3%8D-%E0%B2%A8%E0%B2%9F-%E0%B2%B0%E0%B2%BE%E0%B2%9C%E0%B3%8D-%E0%B2%AA%E0%B2%BE%E0%B2%B2%E0%B3%8D-%E0%B2%AF%E0%B2%BE%E0%B2%A6%E0%B2%B5%E0%B3%8D-%E0%B2%A8%E0%B3%86%E0%B2%B0%E0%B2%B5%E0%B2%BF%E0%B2%97%E0%B3%86-%E0%B2%AC%E0%B2%BE%E0%B2%B0%E0%B2%A6-%E0%B2%AC%E0%B2%BE%E0%B2%B2%E0%B2%BF%E0%B2%B5%E0%B3%81%E0%B2%A1%E0%B3%8D</guid>
<description><![CDATA[ ಚೆಕ್ ಬೌನ್ಸ್ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿ ಶರಣಾಗುವ ಮುನ್ನ  ಬಾಲಿವುಡ್ ನಟ ರಾಜ್‌ಪಾಲ್ ಯಾದವ್ ತಮ್ಮ ಆರ್ಥಿಕ ಸಂಕಷ್ಟದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಬಳಿ ಹಣವನ್ನು ಮರುಪಾವತಿಸಲು ಹಣವಿಲ್ಲ ಮತ್ತು ಬೇರೆ ದಾರಿ ಕಾಣುತ್ತಿಲ್ಲ ಎಂದು ಹೇಳಿದರು. ಈ ಬಿಕ್ಕಟ್ಟನ್ನು ತಾವು ಒಬ್ಬಂಟಿಯಾಗಿ ಎದುರಿಸಬೇಕು ಎಂದು ಒಪ್ಪಿಕೊಂಡರು, ಸಹಾಯ ಕೇಳಲು ಯಾವುದೇ ಸ್ನೇಹಿತರಿಲ್ಲ ಎಂದು ಹೇಳಿದರು.
ದೆಹಲಿ ಹೈಕೋರ್ಟ್  ಸರೆಂಡರ್ ಆಗಲು  ಹೆಚ್ಚಿನ ಸಮಯ ಕೋರಿ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದ ನಂತರ ರಾಜ್ ಪಾಲ್  ಯಾದವ್ ಗುರುವಾರ ದೆಹಲಿಯ ತಿಹಾರ್ ಜೈಲಿನಲ್ಲಿ ಶರಣಾದರು. ಫೆಬ್ರವರಿ 4 ರೊಳಗೆ ಶರಣಾಗುವಂತೆ ನಟನಿಗೆ ಸೂಚಿಸಲಾಗಿತ್ತು.  ಆದರೆ ಆದೇಶವನ್ನು ಪಾಲಿಸಲು ವಿಫಲವಾದ ಕಾರಣ ನ್ಯಾಯಾಲಯವು ಯಾವುದೇ ರೀಲೀಫ್ ನೀಡಲು ನಿರಾಕರಿಸಿತು. ಅವರ ವೃತ್ತಿಯನ್ನು ಲೆಕ್ಕಿಸದೆ ಎಲ್ಲರೂ ಕಾನೂನಿನ ಮುಂದೆ ಸಮಾನರು ಎಂದು ಪೀಠ ಸ್ಪಷ್ಟಪಡಿಸಿತು.
ಬಾಲಿವುಡ್ ಹಂಗಮಾ ಜೊತೆ ತಮ್ಮ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಯಾದವ್, ತಮ್ಮ ಆರ್ಥಿಕ ತೊಂದರೆಗಳನ್ನು ವಿವರಿಸುತ್ತಾ, &quot;ಸರ್, ಕ್ಯಾ ಕರೂನ್? ಮೇರೆ ಪಾಸ್ ಪೈಸೆ ನಹೀ ಹೈ (ಸರ್, ಏನು ಮಾಡಬೇಕು? ಮರುಪಾವತಿಸಲು ನನ್ನ ಬಳಿ ಹಣವಿಲ್ಲ). ಔರ್ ಕೋಯಿ ಉಪಾಯ್ ನಹೀ ದಿಖ್ತಾ (ಬೇರೆ ದಾರಿ ಕಾಣುತ್ತಿಲ್ಲ).&quot;
ಸಹೋದ್ಯೋಗಿಗಳಿಂದ ಅಥವಾ ಪ್ರಿಯದರ್ಶನ್ ಅವರಂತಹ ಉದ್ಯಮ ಸ್ನೇಹಿತರಿಂದ ಸಹಾಯ ಪಡೆಯಲು ಯೋಚಿಸಿದ್ದೀರಾ ಎಂದು ಕೇಳಿದಾಗ, ಯಾದವ್, &quot;ಸರ್, ಯಹಾಂ ಹಮ್ ಸಬ್ ಅಕೇಲೆ ಹೈ (ಸರ್, ನಾವೆಲ್ಲರೂ ಇಲ್ಲಿ ಒಬ್ಬಂಟಿಯಾಗಿದ್ದೇವೆ). ಸ್ನೇಹಿತರಿಲ್ಲ. ನಾನು ಈ ಬಿಕ್ಕಟ್ಟನ್ನು ನಾನೇ ನಿಭಾಯಿಸಬೇಕು&quot; ಎಂದು ಉತ್ತರಿಸಿದರು.

ಚೆಕ್-ಬೌನ್ಸ್ ಪ್ರಕರಣದ ಬಗ್ಗೆ ಏನು?
ದೆಹಲಿ ಹೈಕೋರ್ಟ್  ಸರೆಂಡರ್ ಸಮಯ  ವಿಸ್ತರಣೆಗಾಗಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ನಂತರ ಗುರುವಾರ ರಾಜ್‌ಪಾಲ್ ಯಾದವ್ ಶರಣಾದರು. ಚೆಕ್-ಬೌನ್ಸ್ ಪ್ರಕರಣದಲ್ಲಿ ನ್ಯಾಯಾಲಯದ ಆದೇಶವನ್ನು ಪಾಲಿಸಲು ಅವರಿಗೆ ಈ ಹಿಂದೆ ಸಮಯ ನೀಡಲಾಗಿತ್ತು ಆದರೆ ಮರುಪಾವತಿ ವ್ಯವಸ್ಥೆ ಮಾಡಲು ಸಾಧ್ಯವಾಗದ ಕಾರಣ ಗಡುವನ್ನು ಪೂರೈಸಲು ವಿಫಲರಾದರು.

ಇದರ ನಂತರ, ನ್ಯಾಯಾಲಯವು ತಕ್ಷಣವೇ ಶರಣಾಗುವಂತೆ ಸೂಚಿಸಿತು. ಆದೇಶ ಹೊರಡಿಸಿದ ಸ್ವಲ್ಪ ಸಮಯದ ನಂತರ ನಟ ಜೈಲು ಸೂಪರಿಂಟೆಂಡೆಂಟ್ ಮುಂದೆ ಸಂಜೆ 4 ಗಂಟೆ ಸುಮಾರಿಗೆ ಹಾಜರಾದರು ಎಂದು ತಿಹಾರ್ ಜೈಲು ಅಧಿಕಾರಿಗಳು ನಂತರ ದೃಢಪಡಿಸಿದರು.
&quot;ಈ ಸನ್ನಿವೇಶದಲ್ಲಿ, ಅರ್ಜಿದಾರರ (ರಾಜ್‌ಪಾಲ್ ಯಾದವ್) ಅವರನ್ನು ತಿಹಾರ್ ಜೈಲು ಸೂಪರಿಂಟೆಂಡೆಂಟ್ ಮುಂದೆ ಶರಣಾಗುವಂತೆ ನಿರ್ದೇಶಿಸಿದ ಆದೇಶವನ್ನು ಹಿಂಪಡೆಯುವಂತೆ ಅರ್ಜಿದಾರರ ಪರ ವಕೀಲರು ಸಲ್ಲಿಸಿದ ಮನವಿಯಲ್ಲಿ ಯಾವುದೇ ಅರ್ಹತೆ ಇಲ್ಲ ಎಂದು ನ್ಯಾಯಾಲಯ ಹೇಳಿದೆ. ಇಂದು ತಕ್ಷಣವೇ ತಿಹಾರ್ ಜೈಲು ಸೂಪರಿಂಟೆಂಡೆಂಟ್ ಅವರ ಮುಂದೆ ಶರಣಾಗುವಂತೆ ಅವರಿಗೆ ಸೂಚಿಸಲಾಗಿದೆ&quot;
ವಿಳಂಬವನ್ನು ಹೈಕೋರ್ಟ್ ಟೀಕಿಸಿತು ಮತ್ತು ವ್ಯಕ್ತಿಯ ವೃತ್ತಿಪರ ಹಿನ್ನೆಲೆಯು ವಿಶೇಷ  ಟ್ರೀಟ್‌ ಮೆಂಟ್‌ಗೆ ಕಾರಣವಾಗಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.
&quot;ಈ ನ್ಯಾಯಾಲಯವು ಯಾವುದೇ ವ್ಯಕ್ತಿಗೆ ಅಂತಹ ವ್ಯಕ್ತಿಯು ನಿರ್ದಿಷ್ಟ ಹಿನ್ನೆಲೆ ಅಥವಾ ಉದ್ಯಮಕ್ಕೆ ಸೇರಿದವನು ಎಂಬ ಕಾರಣಕ್ಕಾಗಿ ವಿಶೇಷ ಸಂದರ್ಭಗಳನ್ನು ತೋರಿಸುತ್ತದೆ ಅಥವಾ ಸೃಷ್ಟಿಸುತ್ತದೆ ಎಂದು ನಿರೀಕ್ಷಿಸಲಾಗುವುದಿಲ್ಲ&quot; ಎಂದು ಪೀಠ ಹೇಳಿದೆ.
ತನ್ನ ಹಿಂದಿನ ಆದೇಶವು ಶರಣಾಗತಿ ದಿನಾಂಕದ ಬಗ್ಗೆ &quot;ಗೊಂದಲಕ್ಕೆ ಅವಕಾಶವಿಲ್ಲ&quot; ಎಂದು ನ್ಯಾಯಾಲಯ ಗಮನಿಸಿದೆ. ನಟ ಮರುಪಾವತಿ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿರುವುದರಿಂದ ವಿಳಂಬ ಸಂಭವಿಸಿದೆ ಎಂದು ಯಾದವ್ ಅವರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರೂ, ಪುನರಾವರ್ತಿತ ಮೃದುತ್ವವು ನ್ಯಾಯಾಂಗ ಆದೇಶಗಳ ಅಧಿಕಾರವನ್ನು ದುರ್ಬಲಗೊಳಿಸುತ್ತದೆ ಎಂದು ಪೀಠವು ಸಮರ್ಥಿಸಿತು.
ಕಾನೂನಿನ ಮುಂದೆ ಸಮಾನತೆಯ ತತ್ವವನ್ನು ಪುನರುಚ್ಚರಿಸಿದ ಹೈಕೋರ್ಟ್, ಅವರ ಹಿನ್ನೆಲೆ ಅಥವಾ ಉದ್ಯಮದ ಕಾರಣದಿಂದಾಗಿ &quot;ವಿಶೇಷ ಸಂದರ್ಭಗಳನ್ನು ಸೃಷ್ಟಿಸುತ್ತದೆ&quot; ಎಂದು ನಿರೀಕ್ಷಿಸಲಾಗುವುದಿಲ್ಲ ಎಂದು ಒತ್ತಿ ಹೇಳಿದೆ.
ರಾಜ್‌ಪಾಲ್ ಯಾದವ್ ಜನಪ್ರಿಯ ನಟ ಮತ್ತು ಹಾಸ್ಯನಟ.  ಅವರ ಬಾಲಿವುಡ್ ಪ್ರಯಾಣವು ಎರಡು ದಶಕಗಳಿಗೂ ಹೆಚ್ಚು ಕಾಲ ವ್ಯಾಪಿಸಿದೆ. ಅವರು 1990 ರ ದಶಕದ ಉತ್ತರಾರ್ಧದಲ್ಲಿ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ಮತ್ತು ಥ್ರಿಲ್ಲರ್ ಚಿತ್ರ ಜಂಗಲ್ (2000) ನಲ್ಲಿ ಮುಖ್ಯ ಪ್ರತಿಸ್ಪರ್ಧಿಯ ಪಾತ್ರದಲ್ಲಿ ನಟಿಸುವ ಮೂಲಕ ಆರಂಭಿಕ ಮನ್ನಣೆಯನ್ನು ಪಡೆದರು. ಅಂದಿನಿಂದ, ಅವರು ಮರಾಠಿ, ಇಂಗ್ಲಿಷ್, ತೆಲುಗು, ಕನ್ನಡ, ಅವಧಿ ಮತ್ತು ಬಂಗಾಳಿ ಸಿನಿಮಾಗಳಲ್ಲಿ ಸೇರಿದಂತೆ ಸುಮಾರು 150 ಚಿತ್ರಗಳಲ್ಲಿ ವ್ಯಾಪಕ ಶ್ರೇಣಿಯ ಪಾತ್ರಗಳನ್ನು ನಿರ್ವಹಿಸಿದ್ದಾರೆ.
 ರಾಜ್‌ಪಾಲ್ ಯಾದವ್ ಕೊನೆಯದಾಗಿ ಬೇಬಿ ಜಾನ್ ಮತ್ತು ಇಂಟರಗೇಶನ್‌ನಂತಹ ಚಿತ್ರಗಳಲ್ಲಿ ಕಾಣಿಸಿಕೊಂಡರು. ಅವರು ಮುಂದಿನ ಏಪ್ರಿಲ್ 10 ರಂದು ಬಿಡುಗಡೆಯಾಗಲಿರುವ ಅಕ್ಷಯ್ ಕುಮಾರ್ ಅವರ ಹಾರರ್-ಹಾಸ್ಯಮಯ ಭೂತ್ ಬಾಂಗ್ಲಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ವಿಶೇಷ ಸೂಚನೆ: ಎಲ್ಲಾ DTH &amp; Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ ]]></description>
<enclosure url="https://img-cdn.publive.online/fit-in/1280x960/newsfirstlive-kannada/media/media_files/2026/02/10/rajpal-yadav-surrenders-in-tihar-jail-2026-02-10-13-40-54.jpg" length="49398" type="image/jpeg"/>
<pubDate>Thu, 12 Feb 2026 09:44:04 +0530</pubDate>
<dc:creator>Newsfirst</dc:creator>
<media:keywords>ಚೆಕ್, ಬೌನ್ಸ್, ಕೇಸ್, ನಲ್ಲಿ, ತಿಹಾರ್, ಜೈಲು, ಸೇರಿದ, ಬಾಲಿವುಡ್, ನಟ, ರಾಜ್, ಪಾಲ್, ಯಾದವ್‌:, ನೆರವಿಗೆ, ಬಾರದ, ಬಾಲಿವುಡ್‌</media:keywords>
</item>

<item>
<title>ಹೈಕೋರ್ಟ್ ನಲ್ಲಿ ಅರ್ಜಿ ಹಿಂಪಡೆದ ಕೆವಿಎನ್ ಪ್ರೊಡಕ್ಷನ್ : ಜನ ನಾಯಗನ್ ಸಿನಿಮಾವನ್ನು ಪರಿಶೀಲನಾ ಸಮಿತಿಗೆ ಕಳಿಸಲು ನಿರ್ಧಾರ</title>
<link>https://thinkerr.in/%E0%B2%B9%E0%B3%88%E0%B2%95%E0%B3%8B%E0%B2%B0%E0%B3%8D%E0%B2%9F%E0%B3%8D-%E0%B2%A8%E0%B2%B2%E0%B3%8D%E0%B2%B2%E0%B2%BF-%E0%B2%85%E0%B2%B0%E0%B3%8D%E0%B2%9C%E0%B2%BF-%E0%B2%B9%E0%B2%BF%E0%B2%82%E0%B2%AA%E0%B2%A1%E0%B3%86%E0%B2%A6-%E0%B2%95%E0%B3%86%E0%B2%B5%E0%B2%BF%E0%B2%8E%E0%B2%A8%E0%B3%8D-%E0%B2%AA%E0%B3%8D%E0%B2%B0%E0%B3%8A%E0%B2%A1%E0%B2%95%E0%B3%8D%E0%B2%B7%E0%B2%A8%E0%B3%8D-%E0%B2%9C%E0%B2%A8-%E0%B2%A8%E0%B2%BE%E0%B2%AF%E0%B2%97%E0%B2%A8%E0%B3%8D-%E0%B2%B8%E0%B2%BF%E0%B2%A8%E0%B2%BF%E0%B2%AE%E0%B2%BE%E0%B2%B5%E0%B2%A8%E0%B3%8D%E0%B2%A8%E0%B3%81-%E0%B2%AA%E0%B2%B0%E0%B2%BF%E0%B2%B6%E0%B3%80%E0%B2%B2%E0%B2%A8%E0%B2%BE-%E0%B2%B8%E0%B2%AE%E0%B2%BF%E0%B2%A4%E0%B2%BF%E0%B2%97%E0%B3%86-%E0%B2%95%E0%B2%B3%E0%B2%BF%E0%B2%B8%E0%B2%B2%E0%B3%81-%E0%B2%A8%E0%B2%BF%E0%B2%B0%E0%B3%8D%E0%B2%A7%E0%B2%BE%E0%B2%B0</link>
<guid>https://thinkerr.in/%E0%B2%B9%E0%B3%88%E0%B2%95%E0%B3%8B%E0%B2%B0%E0%B3%8D%E0%B2%9F%E0%B3%8D-%E0%B2%A8%E0%B2%B2%E0%B3%8D%E0%B2%B2%E0%B2%BF-%E0%B2%85%E0%B2%B0%E0%B3%8D%E0%B2%9C%E0%B2%BF-%E0%B2%B9%E0%B2%BF%E0%B2%82%E0%B2%AA%E0%B2%A1%E0%B3%86%E0%B2%A6-%E0%B2%95%E0%B3%86%E0%B2%B5%E0%B2%BF%E0%B2%8E%E0%B2%A8%E0%B3%8D-%E0%B2%AA%E0%B3%8D%E0%B2%B0%E0%B3%8A%E0%B2%A1%E0%B2%95%E0%B3%8D%E0%B2%B7%E0%B2%A8%E0%B3%8D-%E0%B2%9C%E0%B2%A8-%E0%B2%A8%E0%B2%BE%E0%B2%AF%E0%B2%97%E0%B2%A8%E0%B3%8D-%E0%B2%B8%E0%B2%BF%E0%B2%A8%E0%B2%BF%E0%B2%AE%E0%B2%BE%E0%B2%B5%E0%B2%A8%E0%B3%8D%E0%B2%A8%E0%B3%81-%E0%B2%AA%E0%B2%B0%E0%B2%BF%E0%B2%B6%E0%B3%80%E0%B2%B2%E0%B2%A8%E0%B2%BE-%E0%B2%B8%E0%B2%AE%E0%B2%BF%E0%B2%A4%E0%B2%BF%E0%B2%97%E0%B3%86-%E0%B2%95%E0%B2%B3%E0%B2%BF%E0%B2%B8%E0%B2%B2%E0%B3%81-%E0%B2%A8%E0%B2%BF%E0%B2%B0%E0%B3%8D%E0%B2%A7%E0%B2%BE%E0%B2%B0</guid>
<description><![CDATA[ ವಿಜಯ್ ಅವರ ಬಹುನಿರೀಕ್ಷಿತ ಚಿತ್ರ ಜನ ನಾಯಗನ್ ಸುತ್ತಲಿನ ಕಾನೂನು ಹೋರಾಟವು ಹೊಸ ತಿರುವು ಪಡೆದುಕೊಂಡಿದೆ. ಮಂಗಳವಾರ (ಫೆಬ್ರವರಿ 10) ಮದ್ರಾಸ್ ಹೈಕೋರ್ಟ್, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (CBFC) ಪ್ರಮಾಣೀಕರಣ ಪ್ರಕ್ರಿಯೆಯನ್ನು ಪ್ರಶ್ನಿಸಿ ಕೆವಿಎನ್ ಪ್ರೊಡಕ್ಷನ್ಸ್ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಲು ಅನುಮತಿ ನೀಡಿತು. ರಾಜಕೀಯಕ್ಕೆ ಔಪಚಾರಿಕವಾಗಿ ಕಾಲಿಡುವ ಮೊದಲು ವಿಜಯ್ ಅವರ ಕೊನೆಯ ಚಿತ್ರವಾಗುವ ನಿರೀಕ್ಷೆಯಿರುವ ಈ ಚಿತ್ರವು  ಸರ್ಟಿಫಿಕೇಟ್‌ ವಿಳಂಬದ ವಿವಾದದಲ್ಲಿ ಸಿಲುಕಿತ್ತು.
ವಕೀಲ ವಿಜಯನ್ ಸುಬ್ರಮಣಿಯಂ ಅವರು  ನಿರ್ಮಾಣ ಕಂಪನಿಯು ಪ್ರಕರಣವನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ನ್ಯಾಯಾಲಯಕ್ಕೆ ತಿಳಿಸಿದ ನಂತರ ನ್ಯಾಯಮೂರ್ತಿ ಪಿ.ಟಿ ಆಶಾ ಈ ವಿನಂತಿಗೆ ಒಪ್ಪಿಗೆ ನೀಡಿದ್ದರು. ನಿರ್ಮಾಪಕರು ಮೊಕದ್ದಮೆಯನ್ನು ಮುಂದುವರಿಸುವ ಬದಲು ಪರಿಶೀಲನಾ ಪ್ರಕ್ರಿಯೆಯೊಂದಿಗೆ ಮುಂದುವರಿಯಲು ಬಯಸುತ್ತಾರೆ ಎಂದು ಹೇಳುವ ಪತ್ರವನ್ನು ಈಗಾಗಲೇ ಹೈಕೋರ್ಟ್ ರಿಜಿಸ್ಟ್ರಿಗೆ ಕಳುಹಿಸಲಾಗಿತ್ತು. ಇಂದು ಕೇಸ್ ಅನ್ನು ವಿತ್ ಡ್ರಾ ಮಾಡುವ ಶೀರ್ಷಿಕೆಯಡಿ ಪಟ್ಟಿ ಮಾಡಲಾಗಿತ್ತು. ಹೈಕೋರ್ಟ್ ನಲ್ಲಿ ಅರ್ಜಿಯನ್ನು ಕೆವಿಎನ್ ಪ್ರೊಡಕ್ಷನ್ ಇಂದು ಅಧಿಕೃತವಾಗಿ ಹಿಂಪಡೆದುಕೊಂಡಿದೆ. ಈಗ ಸಿನಿಮಾವನ್ನು ಸೆನ್ಸಾರ್ ಸರ್ಟಿಫಿಕೇಟ್ ಪಡೆಯಲು ಪರಿಶೀಲನಾ ಸಮಿತಿಗೆ ಕಳಿಸಲು ಕೆವಿಎನ್ ಪ್ರೊಡಕ್ಷನ್ ನಿರ್ಧರಿಸಿದೆ. ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕ ಬಳಿಕ ಬಿಡುಗಡೆಯ ದಿನಾಂಕವನ್ನು ಕೆವಿಎನ್ ಪ್ರೊಡಕ್ಷನ್ ಘೋಷಿಸಲಿದೆ. ಹೈಕೋರ್ಟ್ ನಲ್ಲಿ ಕಾನೂನು ಹೋರಾಟದ ಮಾರ್ಗವನ್ನು ಕೈ ಬಿಟ್ಟು ಸಿಬಿಎಫ್‌ಸಿ ಸೂಚಿಸಿದ ಮಾರ್ಗದ ಮೂಲಕವೇ ಈಗ ಸೆನ್ಸಾರ್ ಸರ್ಟಿಫಿಕೇಟ್ ಪಡೆಯಲು ಕೆವಿಎನ್ ಪ್ರೊಡಕ್ಷನ್ ನಿರ್ಧರಿಸಿರುವುದು ಇದರಿಂದ ಸ್ಪಷ್ಟವಾಗುತ್ತೆ. ಕಾನೂನು ಹೋರಾಟಕ್ಕೆ ಸುದೀರ್ಘ ಸಮಯ ತೆಗೆದುಕೊಳ್ಳುತ್ತೆ. ಅದರ ಬದಲು ಬೇಗನೇ ಸೆನ್ಸಾರ್ ಸರ್ಟಿಫಿಕೇಟ್ ಪಡೆದು ಸಿನಿಮಾ ಬಿಡುಗಡೆಗೆ ಕೆವಿಎನ್ ಪ್ರೊಡಕ್ಷನ್ ಮುಂದಾಗಿದೆ. ಪರಿಶೀಲನಾ ಸಮಿತಿ ಸೂಚಿಸಿದರೇ, ಕೆಲವೊಂದು ಸೀನ್ ಕಟ್ ಮಾಡಿ, ಸಿನಿಮಾ ಬಿಡುಗಡೆ ಮಾಡಬಹುದು ಎಂಬ ಲೆಕ್ಕಾಚಾರ ಕೆವಿಎನ್ ಪ್ರೊಡಕ್ಷನ್‌ಗೆ ಇದ್ದಂತೆ ಇದೆ. ಇದು ಸಿನಿಮಾ ಬೇಗನೇ ಬಿಡುಗಡೆಯ ದೃಷ್ಟಿಯಿಂದ ಒಳ್ಳೆಯ ತೀರ್ಮಾನ. 
ಪ್ರಕರಣ ಏಕೆ ಪ್ರಾರಂಭವಾಯಿತು
ಜನ ನಾಯಗನ್‌ಗೆ ಸಿಬಿಎಫ್‌ಸಿ ಪ್ರಮಾಣಪತ್ರವನ್ನು ನೀಡುವುದನ್ನು ವಿಳಂಬ ಮಾಡಿದೆ ಎಂದು ಆರೋಪಿಸಿ ಕೆವಿಎನ್ ಪ್ರೊಡಕ್ಷನ್ಸ್ ಈ ಹಿಂದೆ ನ್ಯಾಯಾಲಯವನ್ನು ಸಂಪರ್ಕಿಸಿತ್ತು. ನಿರ್ಮಾಪಕರ ಪ್ರಕಾರ, ಕೆಲವು ಕಡಿತ ಮತ್ತು ಮಾರ್ಪಾಡುಗಳಿಗೆ ಒಳಪಟ್ಟು ಚಿತ್ರವು &quot;ಯುಎ&quot; ಪ್ರಮಾಣಪತ್ರವನ್ನು ಪಡೆಯುತ್ತದೆ ಎಂದು ಅವರಿಗೆ ತಿಳಿಸಲಾಯಿತು. ಸೂಚಿಸಲಾದ ಬದಲಾವಣೆಗಳನ್ನು ಮಾಡಿದ ನಂತರವೂ ಪ್ರಮಾಣಪತ್ರವನ್ನು ನೀಡಲಾಗಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ಆರಂಭದಲ್ಲಿ &quot;UA&quot; ಪ್ರಮಾಣಪತ್ರವನ್ನು ನೀಡಲಾಗುವುದು ಎಂದು ಸೂಚಿಸಿದ ನಂತರ ಚಿತ್ರವನ್ನು ಪರಿಷ್ಕರಣಾ ಸಮಿತಿಗೆ ಕಳುಹಿಸಲು CBFC ಅಧ್ಯಕ್ಷರು ತೆಗೆದುಕೊಂಡ ಕ್ರಮವನ್ನು ನಿರ್ಮಾಣ ಸಂಸ್ಥೆ ಪ್ರಶ್ನಿಸಿತ್ತು. ಆದರೇ, ಈಗ ಸಿನಿಮಾದ ಸೆನ್ಸಾರ್ ಸರ್ಟಿಫಿಕೇಟ್ ಪಡೆಯಲು ಸಿನಿಮಾವನ್ನು ಪರಿಷ್ಕರಣಾ ಸಮಿತಿಗೆ ಕಳಿಸಲು ಕೆವಿಎನ್ ಪ್ರೊಡಕ್ಷನ್ ನಿರ್ಧರಿಸಿದೆ. ವಿಶೇಷ ಸೂಚನೆ: ಎಲ್ಲಾ DTH &amp; Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 
  ]]></description>
<enclosure url="https://img-cdn.publive.online/fit-in/1280x960/newsfirstlive-kannada/media/media_files/2026/01/09/jana-nayagan-2026-01-09-11-39-21.jpg" length="49398" type="image/jpeg"/>
<pubDate>Thu, 12 Feb 2026 09:44:04 +0530</pubDate>
<dc:creator>Newsfirst</dc:creator>
<media:keywords>ಹೈಕೋರ್ಟ್, ನಲ್ಲಿ, ಅರ್ಜಿ, ಹಿಂಪಡೆದ, ಕೆವಿಎನ್, ಪ್ರೊಡಕ್ಷನ್, ಜನ, ನಾಯಗನ್, ಸಿನಿಮಾವನ್ನು, ಪರಿಶೀಲನಾ, ಸಮಿತಿಗೆ, ಕಳಿಸಲು, ನಿರ್ಧಾರ</media:keywords>
</item>

<item>
<title>ಹಾಫ್ ಸೆಂಚುರಿ ಭಾರಿಸಿದ ನಟಿ ಅಭಿಷೇಕ್ ಬಚ್ಚನ್‌:  ಪತ್ನಿ ಐಶ್ಚರ್ಯಾ ರೈ ಹಾರೈಸಿದ್ದು ಹೇಗೆ?</title>
<link>https://thinkerr.in/%E0%B2%B9%E0%B2%BE%E0%B2%AB%E0%B3%8D-%E0%B2%B8%E0%B3%86%E0%B2%82%E0%B2%9A%E0%B3%81%E0%B2%B0%E0%B2%BF-%E0%B2%AD%E0%B2%BE%E0%B2%B0%E0%B2%BF%E0%B2%B8%E0%B2%BF%E0%B2%A6-%E0%B2%A8%E0%B2%9F%E0%B2%BF-%E0%B2%85%E0%B2%AD%E0%B2%BF%E0%B2%B7%E0%B3%87%E0%B2%95%E0%B3%8D-%E0%B2%AC%E0%B2%9A%E0%B3%8D%E0%B2%9A%E0%B2%A8%E0%B3%8D-%E0%B2%AA%E0%B2%A4%E0%B3%8D%E0%B2%A8%E0%B2%BF-%E0%B2%90%E0%B2%B6%E0%B3%8D%E0%B2%9A%E0%B2%B0%E0%B3%8D%E0%B2%AF%E0%B2%BE-%E0%B2%B0%E0%B3%88-%E0%B2%B9%E0%B2%BE%E0%B2%B0%E0%B3%88%E0%B2%B8%E0%B2%BF%E0%B2%A6%E0%B3%8D%E0%B2%A6%E0%B3%81-%E0%B2%B9%E0%B3%87%E0%B2%97%E0%B3%86</link>
<guid>https://thinkerr.in/%E0%B2%B9%E0%B2%BE%E0%B2%AB%E0%B3%8D-%E0%B2%B8%E0%B3%86%E0%B2%82%E0%B2%9A%E0%B3%81%E0%B2%B0%E0%B2%BF-%E0%B2%AD%E0%B2%BE%E0%B2%B0%E0%B2%BF%E0%B2%B8%E0%B2%BF%E0%B2%A6-%E0%B2%A8%E0%B2%9F%E0%B2%BF-%E0%B2%85%E0%B2%AD%E0%B2%BF%E0%B2%B7%E0%B3%87%E0%B2%95%E0%B3%8D-%E0%B2%AC%E0%B2%9A%E0%B3%8D%E0%B2%9A%E0%B2%A8%E0%B3%8D-%E0%B2%AA%E0%B2%A4%E0%B3%8D%E0%B2%A8%E0%B2%BF-%E0%B2%90%E0%B2%B6%E0%B3%8D%E0%B2%9A%E0%B2%B0%E0%B3%8D%E0%B2%AF%E0%B2%BE-%E0%B2%B0%E0%B3%88-%E0%B2%B9%E0%B2%BE%E0%B2%B0%E0%B3%88%E0%B2%B8%E0%B2%BF%E0%B2%A6%E0%B3%8D%E0%B2%A6%E0%B3%81-%E0%B2%B9%E0%B3%87%E0%B2%97%E0%B3%86</guid>
<description><![CDATA[ ದೇಶಾದ್ಯಂತ ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳ ಪ್ರೀತಿಯ ಮಹಾಪೂರದ ನಡುವೆ ಬಾಲಿವುಡ್  ನಟ ಅಭಿಷೇಕ್ ಬಚ್ಚನ್ ಇಂದು ತಮ್ಮ 50 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅವರ ಪತ್ನಿ, ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಶುಭಾಶಯಗಳನ್ನು ಕೋರಿದರು, ಅವರ ಹೃದಯಪೂರ್ವಕ ಇನ್‌ಸ್ಟಾಗ್ರಾಮ್ ಪೋಸ್ಟ್ ತಕ್ಷಣವೇ ಎಲ್ಲರ ಗಮನ ಸೆಳೆಯಿತು.
ಅಭಿಷೇಕ್ ಅವರ ಬಾಲ್ಯದ ಚಿತ್ರವನ್ನು  ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ ನಲ್ಲಿ ಹಂಚಿಕೊಂಡಿದಿದ್ದಾರೆ.  ಅಲ್ಲಿ ಅಭಿಷೇಕ್ ಬಚ್ಚನ್  ಕಣ್ಣುಗಳು ಮಾತ್ರ ಗೋಚರಿಸುತ್ತಿದ್ದವು.
ಫೋಟೋ ಜೊತೆಗೆ, ಐಶ್ವರ್ಯಾ ಬರೆದಿದ್ದಾರೆ, &quot;ಪ್ರೀತಿಯ ಬೇಬಿ-ಪಾಪಾ ಅವರಿಗೆ 50 ನೇ ಹುಟ್ಟುಹಬ್ಬದ ಶುಭಾಶಯಗಳು, ದೇವರು ಬಹಳಷ್ಟು ಪ್ರೀತಿ, ಶಾಂತಿ, ಸಂತೋಷ, ಸಂತೃಪ್ತಿ ಮತ್ತು ಉತ್ತಮ ಆರೋಗ್ಯವನ್ನು ನೀಡಲಿ. ಚಿನ್ನದಂತೆ ಇರಿ... ಪ್ರೀತಿಯಲ್ಲಿ ಮಿನುಗು.&quot; ಎಂದು ಇನ್ ಸ್ಟಾಗ್ರಾಮ್ ನಲ್ಲಿ ಪತಿ ಅಭಿಷೇಕ್ ಬಚ್ಚನ್ ಬಗ್ಗೆ ನಟಿ ಐಶ್ಚರ್ಯಾ ರೈ ಬರೆದಿದ್ದಾರೆ. 












View this post on Instagram



























ಹಿರಿಯ ನಟ ಅಮಿತಾಭ್ ಬಚ್ಚನ್ ಕೂಡ ಈ ಸಂದರ್ಭದಲ್ಲಿ ತಮ್ಮ ಮಗನಿಗೆ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ. ಬ್ಲಾಗ್ ಪೋಸ್ಟ್‌ನಲ್ಲಿ, ಅಭಿಮಾನಿಗಳ ಪ್ರೀತಿ ಮತ್ತು ಆಶೀರ್ವಾದಕ್ಕಾಗಿ ಅವರು ಧನ್ಯವಾದಗಳನ್ನು ಅರ್ಪಿಸಿದರು.ಅವರು ಬರೆದಿದ್ದಾರೆ, &quot;ಅಭಿಷೇಕ್ ಅವರ 50 ನೇ ಹುಟ್ಟುಹಬ್ಬದಂದು ಅವರಿಗೆ ಶುಭಾಶಯಗಳನ್ನು ಕಳುಹಿಸುವ ಎಲ್ಲರಿಗೂ, ನನ್ನ ಕೃತಜ್ಞತೆ ಮತ್ತು ಪ್ರೀತಿಯನ್ನು ವ್ಯಕ್ತಪಡಿಸುತ್ತೇನೆ... ನಿಮ್ಮ ಆಶೀರ್ವಾದಗಳು ಅವರಿಗೆ ಮುಂದುವರಿಯಲು ಧೈರ್ಯ ಮತ್ತು ಶಕ್ತಿಯನ್ನು ನೀಡುತ್ತವೆ... ವಾತ್ಸಲ್ಯ ಮತ್ತು ಪ್ರೀತಿ.&quot; ಎಂದು ಅಮಿತಾಬ್ ಬಚ್ಚನ್ ಬರೆದಿದ್ದಾರೆ. ವಿಶೇಷ ಸೂಚನೆ: ಎಲ್ಲಾ DTH &amp; Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.  ]]></description>
<enclosure url="https://img-cdn.publive.online/fit-in/1280x960/newsfirstlive-kannada/media/media_files/2026/02/07/abhishek-bacchan-birthday-2026-02-07-16-40-14.jpg" length="49398" type="image/jpeg"/>
<pubDate>Thu, 12 Feb 2026 09:44:04 +0530</pubDate>
<dc:creator>Newsfirst</dc:creator>
<media:keywords>ಹಾಫ್, ಸೆಂಚುರಿ, ಭಾರಿಸಿದ, ನಟಿ, ಅಭಿಷೇಕ್, ಬಚ್ಚನ್‌:, ಪತ್ನಿ, ಐಶ್ಚರ್ಯಾ, ರೈ, ಹಾರೈಸಿದ್ದು, ಹೇಗೆ</media:keywords>
</item>

<item>
<title>17ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ‘ವನ್ಯಾ’ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಗರಿ!</title>
<link>https://thinkerr.in/17%E0%B2%A8%E0%B3%87-%E0%B2%85%E0%B2%82%E0%B2%A4%E0%B2%BE%E0%B2%B0%E0%B2%BE%E0%B2%B7%E0%B3%8D%E0%B2%9F%E0%B3%8D%E0%B2%B0%E0%B3%80%E0%B2%AF-%E0%B2%9A%E0%B2%B2%E0%B2%A8%E0%B2%9A%E0%B2%BF%E0%B2%A4%E0%B3%8D%E0%B2%B0%E0%B3%8B%E0%B2%A4%E0%B3%8D%E0%B2%B8%E0%B2%B5-%E0%B2%B5%E0%B2%A8%E0%B3%8D%E0%B2%AF%E0%B2%BE-%E0%B2%9A%E0%B2%BF%E0%B2%A4%E0%B3%8D%E0%B2%B0%E0%B2%95%E0%B3%8D%E0%B2%95%E0%B3%86-%E0%B2%85%E0%B2%A4%E0%B3%8D%E0%B2%AF%E0%B3%81%E0%B2%A4%E0%B3%8D%E0%B2%A4%E0%B2%AE-%E0%B2%95%E0%B2%A8%E0%B3%8D%E0%B2%A8%E0%B2%A1-%E0%B2%B8%E0%B2%BF%E0%B2%A8%E0%B2%BF%E0%B2%AE%E0%B2%BE-%E0%B2%AA%E0%B3%8D%E0%B2%B0%E0%B2%B6%E0%B2%B8%E0%B3%8D%E0%B2%A4%E0%B2%BF-%E0%B2%97%E0%B2%B0%E0%B2%BF</link>
<guid>https://thinkerr.in/17%E0%B2%A8%E0%B3%87-%E0%B2%85%E0%B2%82%E0%B2%A4%E0%B2%BE%E0%B2%B0%E0%B2%BE%E0%B2%B7%E0%B3%8D%E0%B2%9F%E0%B3%8D%E0%B2%B0%E0%B3%80%E0%B2%AF-%E0%B2%9A%E0%B2%B2%E0%B2%A8%E0%B2%9A%E0%B2%BF%E0%B2%A4%E0%B3%8D%E0%B2%B0%E0%B3%8B%E0%B2%A4%E0%B3%8D%E0%B2%B8%E0%B2%B5-%E0%B2%B5%E0%B2%A8%E0%B3%8D%E0%B2%AF%E0%B2%BE-%E0%B2%9A%E0%B2%BF%E0%B2%A4%E0%B3%8D%E0%B2%B0%E0%B2%95%E0%B3%8D%E0%B2%95%E0%B3%86-%E0%B2%85%E0%B2%A4%E0%B3%8D%E0%B2%AF%E0%B3%81%E0%B2%A4%E0%B3%8D%E0%B2%A4%E0%B2%AE-%E0%B2%95%E0%B2%A8%E0%B3%8D%E0%B2%A8%E0%B2%A1-%E0%B2%B8%E0%B2%BF%E0%B2%A8%E0%B2%BF%E0%B2%AE%E0%B2%BE-%E0%B2%AA%E0%B3%8D%E0%B2%B0%E0%B2%B6%E0%B2%B8%E0%B3%8D%E0%B2%A4%E0%B2%BF-%E0%B2%97%E0%B2%B0%E0%B2%BF</guid>
<description><![CDATA[ ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅದ್ಧೂರಿಯಾಗಿ ನಡೆದ 17ನೇ ಆವೃತ್ತಿಯ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (BIFFES-2026) ಕನ್ನಡದ ‘ವನ್ಯಾ’ (Vanya) ಚಲನಚಿತ್ರವು ಪ್ರತಿಷ್ಠಿತ ‘ಅತ್ಯುತ್ತಮ ಕನ್ನಡ ಚಿತ್ರ’ ಪ್ರಶಸ್ತಿಗೆ ಭಾಜನವಾಗಿದೆ.
ಈ ಕುರಿತು ಚಿತ್ರತಂಡವು ಅಧಿಕೃತ ಪ್ರಕಟಣೆಯಲ್ಲಿ ತಮ್ಮ ಸಂತಸವನ್ನು ಹಂಚಿಕೊಂಡಿದೆ. ‘ನಮ್ಮ ವನ್ಯಾ ಚಿತ್ರಕ್ಕೆ ಇಂತಹದೊಂದು ಗೌರವ ಸಿಕ್ಕಿರುವುದು ಅತೀವ ಸಂತೋಷ ಮತ್ತು ಹೆಮ್ಮೆಯನ್ನು ತಂದಿದೆ. ಈ ಕ್ಷಣದಲ್ಲಿ ನಮಗೆ ಮಾತುಗಳೇ ಬರುತ್ತಿಲ್ಲ ಎಂದು ತಂಡ ಭಾವುಕವಾಗಿ ನುಡಿದಿದೆ.
ಇದನ್ನೂ ಓದಿ: T20 world cup: ಅಭಿಷೇಕ್ ಶರ್ಮಾಗೆ ಜೋಡಿ ಯಾರು..? ಇಬ್ಬರು ಸ್ಟಾರ್​ಗಳ ಮಧ್ಯೆ ಫೈಟ್​..!

ತೀರ್ಪುಗಾರರಿಗೆ ಮತ್ತು ಸರ್ಕಾರಕ್ಕೆ ಧನ್ಯವಾದ
ತಮ್ಮ ಚಿತ್ರವನ್ನು ಗುರುತಿಸಿ ಪ್ರಶಸ್ತಿ ನೀಡಿದ್ದಕ್ಕಾಗಿ BIFFES ಆಯೋಜಕರಿಗೆ, ಪೂರ್ವವೀಕ್ಷಣೆ ಸಮಿತಿ (Preview Committee) ಹಾಗೂ ಅಂತಿಮ ತೀರ್ಪುಗಾರರಿಗೆ (Jury) ಚಿತ್ರತಂಡ ಧನ್ಯವಾದ ಅರ್ಪಿಸಿದೆ. ವೇದಿಕೆಯನ್ನು ಕಲ್ಪಿಸಿಕೊಟ್ಟ ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಕೃತಜ್ಞತೆ ಸಲ್ಲಿಸಿದೆ.
ಇದನ್ನೂ ಓದಿ: ವೈಭವ್ ಸೂರ್ಯವಂಶಿ ಇದುವರೆಗೂ ಮಾಡಿದ ದಾಖಲೆಗಳು ಏನೇನು ಗೊತ್ತಾ? ಇಲ್ಲಿದೆ ಫುಲ್ ಡೀಟೈಲ್ಸ್

ತಂಡದ ಶ್ರಮಕ್ಕೆ ಸಿಕ್ಕ ಫಲ
‘ಇದು ಕೇವಲ ಒಂದು ಪ್ರಶಸ್ತಿಯಲ್ಲ, ಬದಲಾಗಿ ಇಡೀ ವನ್ಯಾ ತಂಡದ ಹಗಲಿರುಳಿನ ಶ್ರಮಕ್ಕೆ ಸಿಕ್ಕ ಪ್ರತಿಫಲ. ತಂಡದ ಪ್ರತಿಯೊಬ್ಬ ಸದಸ್ಯರ ನಿಷ್ಠೆ ಮತ್ತು ಕಠಿಣ ಪರಿಶ್ರಮದಿಂದಲೇ ಈ ಸಾಧನೆ ಸಾಧ್ಯವಾಯಿತು ಎಂದು ಚಿತ್ರತಂಡದ ಪ್ರಮುಖರು ತಿಳಿಸಿದ್ದಾರೆ. ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಹಲವು ಗುಣಮಟ್ಟದ ಸಿನಿಮಾಗಳ ನಡುವೆ ‘ವನ್ಯಾ’ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿರುವುದು ಕನ್ನಡ ಚಿತ್ರರಂಗದ ಮಟ್ಟಿಗೆ ಹೆಮ್ಮೆಯ ವಿಷಯವಾಗಿದೆ.
ಇದನ್ನೂ ಓದಿ: ಲೀಗ್ ಪಂದ್ಯಗಳು ನೀರು ಕುಡಿದಷ್ಟೇ ಸರಾಗ.. ಟೀಂ ಇಂಡಿಯಾಗೆ ಚಾಲೇಂಜ್ ಎಲ್ಲಿ..?
ವಿಶೇಷ ಸೂಚನೆ: ಎಲ್ಲಾ DTH &amp; Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.  ]]></description>
<enclosure url="https://img-cdn.publive.online/fit-in/1280x960/newsfirstlive-kannada/media/media_files/2026/02/07/vanya-kannada-movie-4-2026-02-07-15-18-01.jpg" length="49398" type="image/jpeg"/>
<pubDate>Thu, 12 Feb 2026 09:44:04 +0530</pubDate>
<dc:creator>Newsfirst</dc:creator>
<media:keywords>17ನೇ, ಅಂತಾರಾಷ್ಟ್ರೀಯ, ಚಲನಚಿತ್ರೋತ್ಸವ, ‘ವನ್ಯಾ’, ಚಿತ್ರಕ್ಕೆ, ಅತ್ಯುತ್ತಮ, ಕನ್ನಡ, ಸಿನಿಮಾ, ಪ್ರಶಸ್ತಿ, ಗರಿ</media:keywords>
</item>

<item>
<title>ಸಿನಿಮಾಗಳು ಕನ್ನಡ ಸಾಹಿತ್ಯ&#45;ಸಂಸ್ಕೃತಿಯ ಬೇರುಗಳಿಂದ ದೂರ ಆಗಿವೆ: ಹೀಗಾಗಿ ಜನರೂ ಕನ್ನಡ ಸಿನಿಮಾಗಳಿಂದ ದೂರವಾಗಿದ್ದಾರೆ: ಕೆ.ವಿ.ಪ್ರಭಾಕರ್</title>
<link>https://thinkerr.in/%E0%B2%B8%E0%B2%BF%E0%B2%A8%E0%B2%BF%E0%B2%AE%E0%B2%BE%E0%B2%97%E0%B2%B3%E0%B3%81-%E0%B2%95%E0%B2%A8%E0%B3%8D%E0%B2%A8%E0%B2%A1-%E0%B2%B8%E0%B2%BE%E0%B2%B9%E0%B2%BF%E0%B2%A4%E0%B3%8D%E0%B2%AF-%E0%B2%B8%E0%B2%82%E0%B2%B8%E0%B3%8D%E0%B2%95%E0%B3%83%E0%B2%A4%E0%B2%BF%E0%B2%AF-%E0%B2%AC%E0%B3%87%E0%B2%B0%E0%B3%81%E0%B2%97%E0%B2%B3%E0%B2%BF%E0%B2%82%E0%B2%A6-%E0%B2%A6%E0%B3%82%E0%B2%B0-%E0%B2%86%E0%B2%97%E0%B2%BF%E0%B2%B5%E0%B3%86-%E0%B2%B9%E0%B3%80%E0%B2%97%E0%B2%BE%E0%B2%97%E0%B2%BF-%E0%B2%9C%E0%B2%A8%E0%B2%B0%E0%B3%82-%E0%B2%95%E0%B2%A8%E0%B3%8D%E0%B2%A8%E0%B2%A1-%E0%B2%B8%E0%B2%BF%E0%B2%A8%E0%B2%BF%E0%B2%AE%E0%B2%BE%E0%B2%97%E0%B2%B3%E0%B2%BF%E0%B2%82%E0%B2%A6-%E0%B2%A6%E0%B3%82%E0%B2%B0%E0%B2%B5%E0%B2%BE%E0%B2%97%E0%B2%BF%E0%B2%A6%E0%B3%8D%E0%B2%A6%E0%B2%BE%E0%B2%B0%E0%B3%86-%E0%B2%95%E0%B3%86%E0%B2%B5%E0%B2%BF%E0%B2%AA%E0%B3%8D%E0%B2%B0%E0%B2%AD%E0%B2%BE%E0%B2%95%E0%B2%B0%E0%B3%8D</link>
<guid>https://thinkerr.in/%E0%B2%B8%E0%B2%BF%E0%B2%A8%E0%B2%BF%E0%B2%AE%E0%B2%BE%E0%B2%97%E0%B2%B3%E0%B3%81-%E0%B2%95%E0%B2%A8%E0%B3%8D%E0%B2%A8%E0%B2%A1-%E0%B2%B8%E0%B2%BE%E0%B2%B9%E0%B2%BF%E0%B2%A4%E0%B3%8D%E0%B2%AF-%E0%B2%B8%E0%B2%82%E0%B2%B8%E0%B3%8D%E0%B2%95%E0%B3%83%E0%B2%A4%E0%B2%BF%E0%B2%AF-%E0%B2%AC%E0%B3%87%E0%B2%B0%E0%B3%81%E0%B2%97%E0%B2%B3%E0%B2%BF%E0%B2%82%E0%B2%A6-%E0%B2%A6%E0%B3%82%E0%B2%B0-%E0%B2%86%E0%B2%97%E0%B2%BF%E0%B2%B5%E0%B3%86-%E0%B2%B9%E0%B3%80%E0%B2%97%E0%B2%BE%E0%B2%97%E0%B2%BF-%E0%B2%9C%E0%B2%A8%E0%B2%B0%E0%B3%82-%E0%B2%95%E0%B2%A8%E0%B3%8D%E0%B2%A8%E0%B2%A1-%E0%B2%B8%E0%B2%BF%E0%B2%A8%E0%B2%BF%E0%B2%AE%E0%B2%BE%E0%B2%97%E0%B2%B3%E0%B2%BF%E0%B2%82%E0%B2%A6-%E0%B2%A6%E0%B3%82%E0%B2%B0%E0%B2%B5%E0%B2%BE%E0%B2%97%E0%B2%BF%E0%B2%A6%E0%B3%8D%E0%B2%A6%E0%B2%BE%E0%B2%B0%E0%B3%86-%E0%B2%95%E0%B3%86%E0%B2%B5%E0%B2%BF%E0%B2%AA%E0%B3%8D%E0%B2%B0%E0%B2%AD%E0%B2%BE%E0%B2%95%E0%B2%B0%E0%B3%8D</guid>
<description><![CDATA[ ಬೆಂಗಳೂರು: ನಮ್ಮ ಸಿನಿಮಾಗಳು ಕನ್ನಡ ಸಾಹಿತ್ಯ-ಸಂಸ್ಕೃತಿಯ ಬೇರುಗಳಿಂದ ದೂರ ಆಗಿರುವುದರಿಂದಲೇ ಜನರೂ ಕನ್ನಡ ಸಿನಿಮಾಗಳಿಂದ ದೂರವಾಗಿದ್ದಾರೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು. 
17ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ &quot;ಕನ್ನಡ ಸಿನಿ‌ ಪಯಣದ 50 ವರ್ಷಗಳ ಸುವರ್ಣ ಸಂಭ್ರಮ&quot; ದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಹಿಂದೆಲ್ಲಾ ಸಿನಿಮಾಗಳು, ಸಿನಿಮಾದ ಪಾತ್ರಗಳು ನಮ್ಮ ಬದುಕಿನ‌ ಭಾಗ ಆಗಿರುತ್ತಿದ್ದವು. ಹೀಗಾಗಿ ಜನರು ಕನ್ನಡ ಸಿನಿಮಾಗಳಿಗೆ ಮುಗಿ ಬೀಳುತ್ತಿದ್ದರು. ಆಗ ಯಾವ ಹೀರೋಗಳೂ ಇವತ್ತಿನ ಹೀರೋಗಳಂತೆ ನಮ್ಮ ಸಿನಿಮಾ ನೋಡಿ ಎಂದು ಗೋಗರೆಯುತ್ತಿರಲಿಲ್ಲ. ಹಿಂದಣ ಹೆಜ್ಜೆಯನ್ನರಿಯದವನು ಮುಂದನ ಹೆಜ್ಜೆಯನ್ನಿಡಲಾರನು ಎಂದರು. 
ಇದನ್ನೂ ಓದಿ: ಎಂಎಸ್‌ಎಂಇ ಗಳಿಗೆ 20 ಲಕ್ಷದವರೆಗೂ ಅಡಮಾನ ರಹಿತ ಸಾಲ: ಸೈಬರ್ ವಂಚನೆಗಳಿಗೆ 25 ಸಾವಿರ ಪರಿಹಾರಕ್ಕೆ ಆರ್‌ಬಿಐ ಪ್ರಸ್ತಾಪ

ಈಗ ಒಂದು ಸಿನಿಮಾ ತೆರೆ ಕಾಣುತ್ತಿದ್ದಂತೆ ನಾಯಕ ನಟರು ಅವರವರೇ ಸ್ವಘೋಷಿತ ಸ್ಟಾರ್ ಗಳಾಗಿ ಬಿಡುತ್ತಾರೆ. ಇವೆಲ್ಲವೂ ನಮ್ಮ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಬೇರುಗಳಿಂದ ಬೇರ್ಪಟ್ಟಿದ್ದರ ದುಷ್ಪರಿಣಾಮ ಎಂದು ಬೇಸರ ವ್ಯಕ್ತಪಡಿಸಿದರು.
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ &quot;ಸಿನಿ ಪಯಣದ ಸುವರ್ಣ ಸಂಭ್ರಮ‌&quot;ಕ್ಕಾಗಿ ವೇದಿಕೆ ಕಲ್ಪಿಸಿರುವುದು ನಿಜಕ್ಕೂ ಅರ್ಥಪೂರ್ಣ ಸಂಗತಿ. 50 ವರ್ಷಗಳ ಕನ್ನಡ ಸಿನಿಮಾ ಪಯಣವನ್ನು ಮೆಲುಕು ಹಾಕುತ್ತಲೇ, ಈ 50 ವರ್ಷಗಳಲ್ಲಿ ಕನ್ನಡ ಸಿನಿಮಾ ಪರಂಪರೆಯನ್ನು ಗಟ್ಟಿಗೊಳಿಸಿದ ಐದು ಮಂದಿ ಹಿರಿಯರನ್ನು ಗುರುತಿಸಿದ್ದೇವೆ.
ಪಾರ್ವತಮ್ಮ ರಾಜ್ ಕುಮಾರ್ , ಎಸ್. ರಾಮಚಂದ್ರ, ಗಿರೀಶ್ ಕಾಸರವಳ್ಳಿ, ಎಸ್.ವಿ.ರಾಜೇಂದ್ರಸಿಂಗ್ ಬಾಬು, ಡಾ.ಜಯಮಾಲ ಅವರ ಕೊಡುಗೆಗಳನ್ನು ನಾವು ಗುರುತಿಸುತ್ತಿದ್ದೇವೆ ಎಂದರು.  ಈ ಐದು ಮಂದಿಯ ಸಾಧನೆಗಳನ್ನು ಮೆಲುಕು ಹಾಕುವುದೆಂದರೆ ಇಡೀ ಕನ್ನಡ ಸಿನಿಮಾ ಪರಂಪರೆಯ ಅರ್ಧ ಶತಮಾನವನ್ನು ಹಿಂದಿರುಗಿ ನೋಡಿದಂತೆ ಎಂದರು. 
ಇದನ್ನೂ ಓದಿ: ಜಾರಕಿಹೊಳಿಯನ್ನು ‘ಕ್ಲೀನ್ ಬೋಲ್ಡ್’ ಮಾಡಿದ ಹೆಬ್ಬಾಳಕರ್..!

ಗಿರೀಶ್ ಕಾಸರವಳ್ಳಿ ಅವರು ಕನ್ನಡಕ್ಕೆ ನಾಲ್ಕು ಸ್ವರ್ಣಕಮಲ ರಾಷ್ಟ್ರೀಯ ಪ್ರಶಸ್ತಿ ತಂದು ಕೊಟ್ಟಿದ್ದು ಮಾತ್ರವಲ್ಲದೆ, ಕನ್ನಡ ಸಿನಿಮಾಗಳ ಘನತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ್ದಾರೆ. ಖ್ಯಾತ ಛಾಯಾಗ್ರಾಹಕರಾದ ಎಸ್.ರಾಮಚಂದ್ರ ಅವರು ಕನ್ನಡದ ಪರ್ಯಾಯ ಚಿತ್ರಗ ಳ ಪರಂಪರೆಯ ನೆರಳು- ಬೆಳಕು ಇದ್ದ ಹಾಗೆ. ಅರ್ಧ ಶತಮಾನದ ಪರ್ಯಾಯ ಸಿನಿಮಾಗಳಿಗಾಗಿ ಕನ್ನಡಕ್ಕೆ ಸಿಕ್ಕಿರುವ ಮಾನ್ಯತೆಗಳ ಹಿಂದೆ  ಎಸ್.ರಾಮಚಂದ್ರ ಅವರ ಕ್ಯಾಮರಾ ಕಣ್ಣುಗಳು ಇವೆ ಎಂದರು.
ಪಾರ್ವತಮ್ಮ ರಾಜ್ ಕುಮಾರ್ ಅವರು ಪೂರ್ಣಿಮಾ ಎಂಟರ್ ಪ್ರೈಸಸ್ ಮೂಲಕ 80 ಕ್ಕೂ ಹೆಚ್ಚು ಸದಭಿರುಚಿಯ ಜೊತೆಗೆ ಜನಪ್ರಿಯ ಸಿನಿಮಾಗಳನ್ನು ಕನ್ನಡ ಜಗತ್ತಿಗೆ ಮತ್ತು ಸಿನಿಮಾ ಜಗತ್ತಿಗೆ ನೀಡಿದವರು. ಏಕ ಕಾಲಕ್ಕೆ ಯಶಸ್ವಿ ಮತ್ತು ಸಮಾಜಮುಖಿಯಾದ ಸದಭಿರುಚಿಯ ಸಿನಿಮಾಗಳನ್ನು ನೀಡಿ ಗೆಲ್ಲುವುದು ಸುಲಭದ ಮಾತಲ್ಲ. ಈ ಸಾಹಸದಲ್ಲಿ ಪಾರ್ವತಮ್ಮ ಅವರು ಎಲ್ಲಾ ಸವಾಲುಗಳನ್ನು ಎದುರಿಸಿ ಗೆದ್ದಿದ್ದಾರೆ. ಕನ್ನಡ ಬೆಳ್ಳಿ ಪರದೆಯನ್ನು ಗೆಲ್ಲಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು. 
ಜಯಮಾಲ ಅವರು ತುಳು ಸಿನಿಮಾಗಳ ಮೂಲಕ ಸಿನಿಮಾ ಪ್ರಪಂಚಕ್ಕೆ ಬಂದರು. ಭೂತಯ್ಯನ ಮಗ ಅಯ್ಯು ಸಿನಿಮಾದ ಹಾಡೊಂದರ ಮೂಲಕ ಕನ್ನಡಕ್ಕೆ ಬಂದು ಕನ್ನಡ ಸಿನಿಮಾ ಜಗತ್ತನ್ನು ಬೆಳಗಿಸಿದರು. ತಾವೂ ಬೆಳಗಿದರು. ಜಯಮಾಲ ಅವರು ಕೇವಲ ನಟಿ ಮಾತ್ರವಲ್ಲ. ನಿರ್ಮಾಪಕಿ ಆಗಿಯೂ ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿ ಒದಗಿಸಿದ್ದಾರೆ.  &quot;ತಾಯಿ ಸಾಹೇಬ&quot; ಸಿನಿಮಾದ ನಿರ್ಮಾಪಕಿಯೂ ಆಗಿ, ನಟಿಯೂ ಆಗಿ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ತಂದು ಕೊಟ್ಟಿದ್ದಾರೆ.‌ ಜೊತೆಗೆ ಮಹಿಳಾ ಸಂವೇದನೆ ವಿಷಯದಲ್ಲಿ PHd ಮಾಡಿ ಡಾ.ಜಯಮಾಲ ಆಗಿದ್ದಾರೆ ಎಂದರು.
ಇದನ್ನೂ ಓದಿ: 15 ಸಿಕ್ಸರ್, 15 ಬೌಂಡರಿ! U-19 ವಿಶ್ವಕಪ್ ಫೈನಲ್​ನಲ್ಲಿ ಸೂರ್ಯವಂಶಿ ದಾಖಲೆಯ ಶತಕ..!

ಶಂಕರ್ ಸಿಂಗ್ ಅವರ ಪುತ್ರ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅವರ ಇಡೀ ಕುಟುಂಬ ಸಿನಿಮಾ ಕುಟುಂಬ. ಹಿಂದಿ, ತೆಲುಗು, ಕನ್ನಡ ಮತ್ತು ತುಳು ಭಾಷೆಯ ಸಿನಿಮಾಗಳನ್ನು ನಿರ್ದೇಶಿಸಿ ಉತ್ತರ-ದಕ್ಷಿಣ ಎರಡರಲ್ಲೂ ಸೈ ಎನ್ನಿಸಿಕೊಂಡಿದ್ದಾರೆ. ಹೀಗಾಗಿ ಈ ಐದೂ ಮಂದಿಯ ಅರ್ಧ ಶತಮಾನದ ಕೊಡುಗೆಗಳು ಕನ್ನಡ ಸಿನಿಮಾದ ಮುಂದಿನ ಒಂದು ಶತಮಾನಕ್ಕೆ ಮಾರ್ಗದರ್ಶಿ ಆಗಲಿ ಎಂದು ಆಶಿಸುತ್ತೇನೆ ಎಂದರು.
ಸಿದ್ದರಾಮಯ್ಯ ಅವರು ಸಿಎಂ ಆಗಿರುವವರೆಗೆ ಸಬ್ಸಿಡಿಗೆ ನಿಲ್ಲಲ್ಲ 
ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಡಾ.ಜಯಮಲಾ ಅವರು ಮುಂದಿಟ್ಟ ಬೇಡಿಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ಇರುವವರೆಗೆ ಸಬ್ಸಿಡಿ ನಿಲ್ಲುವುದಿಲ್ಲ ಎಂದು ಖಚಿತವಾಗಿ ನುಡಿದರು. ವಾಣಿಜ್ಯ ಮಂಡಳಿ ಮುಂದಿಟ್ಟಿರುವ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಇದೇ ಸಂದರ್ಭದಲ್ಲಿ‌ ಭರವಸೆ ನೀಡಿದರು. ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಸಿಂಗ್ ಬಾಬು, ಪೂರ್ಣಿಮಾ ವಿನಯ್ ರಾಜ್ ಕುಮಾರ್, ಜಯಮಾಲಾ, ಚಲನಚಿತ್ರ ಅಕಾಡೆಮಿ‌ ಅಧ್ಯಕ್ಷರಾದ ಸಾಧು ಕೋಕಿಲಾ, ಹಿರಿಯ ಪತ್ರಕರ್ತರಾದ ಗಂಗಾಧರ ಮೊದಲಿಯಾರ್ ಅವರುಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಕೋಟಿ ಬೆಲೆ ಬಾಳುವ ಚಿನ್ನ, ವಜ್ರ ಮಾಯ..! ಆಗಿದ್ದೇನು..?
ವಿಶೇಷ ಸೂಚನೆ: ಎಲ್ಲಾ DTH &amp; Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ ]]></description>
<enclosure url="https://img-cdn.publive.online/fit-in/1280x960/newsfirstlive-kannada/media/media_files/2026/02/06/film-festival-bengaluru-1-2026-02-06-17-01-37.jpg" length="49398" type="image/jpeg"/>
<pubDate>Thu, 12 Feb 2026 09:44:04 +0530</pubDate>
<dc:creator>Newsfirst</dc:creator>
<media:keywords>ಸಿನಿಮಾಗಳು, ಕನ್ನಡ, ಸಾಹಿತ್ಯ-ಸಂಸ್ಕೃತಿಯ, ಬೇರುಗಳಿಂದ, ದೂರ, ಆಗಿವೆ:, ಹೀಗಾಗಿ, ಜನರೂ, ಕನ್ನಡ, ಸಿನಿಮಾಗಳಿಂದ, ದೂರವಾಗಿದ್ದಾರೆ:, ಕೆ.ವಿ.ಪ್ರಭಾಕರ್</media:keywords>
</item>

<item>
<title>ಕೇಶ ಕೊಟ್ಟು ಸ್ಫೂರ್ತಿಯಾದ ನಟಿಯರು ಯಾರಾರು? ವಿಗ್‌ ಮಾಡುವ ಎನ್‌ಜಿಓ ಗಳಿಗೆ ಮಾತ್ರ ಕೂದಲು ದಾನ ಮಾಡಿ</title>
<link>https://thinkerr.in/%E0%B2%95%E0%B3%87%E0%B2%B6-%E0%B2%95%E0%B3%8A%E0%B2%9F%E0%B3%8D%E0%B2%9F%E0%B3%81-%E0%B2%B8%E0%B3%8D%E0%B2%AB%E0%B3%82%E0%B2%B0%E0%B3%8D%E0%B2%A4%E0%B2%BF%E0%B2%AF%E0%B2%BE%E0%B2%A6-%E0%B2%A8%E0%B2%9F%E0%B2%BF%E0%B2%AF%E0%B2%B0%E0%B3%81-%E0%B2%AF%E0%B2%BE%E0%B2%B0%E0%B2%BE%E0%B2%B0%E0%B3%81-%E0%B2%B5%E0%B2%BF%E0%B2%97%E0%B3%8D-%E0%B2%AE%E0%B2%BE%E0%B2%A1%E0%B3%81%E0%B2%B5-%E0%B2%8E%E0%B2%A8%E0%B3%8D%E0%B2%9C%E0%B2%BF%E0%B2%93-%E0%B2%97%E0%B2%B3%E0%B2%BF%E0%B2%97%E0%B3%86-%E0%B2%AE%E0%B2%BE%E0%B2%A4%E0%B3%8D%E0%B2%B0-%E0%B2%95%E0%B3%82%E0%B2%A6%E0%B2%B2%E0%B3%81-%E0%B2%A6%E0%B2%BE%E0%B2%A8-%E0%B2%AE%E0%B2%BE%E0%B2%A1%E0%B2%BF</link>
<guid>https://thinkerr.in/%E0%B2%95%E0%B3%87%E0%B2%B6-%E0%B2%95%E0%B3%8A%E0%B2%9F%E0%B3%8D%E0%B2%9F%E0%B3%81-%E0%B2%B8%E0%B3%8D%E0%B2%AB%E0%B3%82%E0%B2%B0%E0%B3%8D%E0%B2%A4%E0%B2%BF%E0%B2%AF%E0%B2%BE%E0%B2%A6-%E0%B2%A8%E0%B2%9F%E0%B2%BF%E0%B2%AF%E0%B2%B0%E0%B3%81-%E0%B2%AF%E0%B2%BE%E0%B2%B0%E0%B2%BE%E0%B2%B0%E0%B3%81-%E0%B2%B5%E0%B2%BF%E0%B2%97%E0%B3%8D-%E0%B2%AE%E0%B2%BE%E0%B2%A1%E0%B3%81%E0%B2%B5-%E0%B2%8E%E0%B2%A8%E0%B3%8D%E0%B2%9C%E0%B2%BF%E0%B2%93-%E0%B2%97%E0%B2%B3%E0%B2%BF%E0%B2%97%E0%B3%86-%E0%B2%AE%E0%B2%BE%E0%B2%A4%E0%B3%8D%E0%B2%B0-%E0%B2%95%E0%B3%82%E0%B2%A6%E0%B2%B2%E0%B3%81-%E0%B2%A6%E0%B2%BE%E0%B2%A8-%E0%B2%AE%E0%B2%BE%E0%B2%A1%E0%B2%BF</guid>
<description><![CDATA[ ಕ್ಯಾನ್ಸರ್ ಚಿಕಿತ್ಸೆಯ ಹಂತಗಳಲ್ಲಿ ಕಂಡುಬರುವ ಕೂದಲು ಉದುರುವಿಕೆಗೆ ಎಷ್ಟೋ ಬಾಧಿತರ ಆತ್ಮಸ್ಥೆರ್ಯ ಕುಗ್ಗುತ್ತದೆ. ಈ ನಿಟ್ಟಿನಲ್ಲಿ ಅವರಿಗೆ ಚಂದದ ವಿಗ್ ಮಾಡಿ ಕೊಡಲು ಸಾಕಷ್ಟು ಜನರು ಕೂದಲು ದಾನ ಮಾಡುತ್ತಾರೆ. ಹೀಗೆ ಕೂದಲು ದಾನ ಮಾಡಿದವರಲ್ಲಿ ಕನ್ನಡದ ನಟಿಯರೂ ಇದ್ದಾರೆ ಗೊತ್ತಾ? ಹೌದು,  ನಟಿಯರು ತಮ್ಮ ಕೂದಲು, ಮುಖ, ತ್ವಚೆ, ದೇಹವನ್ನು ನಾಜೂಕಾಗಿ ಜೋಪಾನ ಮಾಡುತ್ತಾರೆ. ಅವು ಅವರ ಸಿನಿಮಾ ಕರಿಯರ್‌ಗೆ ತುಂಬಾ ಮುಖ್ಯ. ಆದರೆ ಅದರಷ್ಟೇ ಮುಖ್ಯ ಸಾಮಾಜಿಕ ಜವಾಬ್ದಾರಿ. ಅದ್ರಂತೆ ಕೂದಲಿನಿಂದ ಹೊಸ ಆತ್ಮವಿಶ್ವಾಸ ಹಾಗೂ ಮನುಷ್ಯತ್ವ, ಕ್ಯಾನ್ಸರ್ ಬಾಧಿತರಿಗೆ ನಟಿಯರು ಕೂದಲು ದಾನ ಮಾಡುವುದರಿಂದ ಅವರಿಂದ ಇನ್ನಷ್ಟು ಜನರು ಸ್ಫೂರ್ತಿಗೊಳ್ಳುತ್ತಾರೆ. ಇಂಥ ಒಳ್ಳೆಯ ಉದ್ದೇಶದೊಂದಿಗೆ ಕೇಶ ದಾನ ಮಾಡಿ ದಿಟ್ಟ ಹೆಜ್ಜೆಯನ್ನಿಟ್ಟಿರುವ ಕೆಲವು ನಟಿಯರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸುಕೃತಾ ವಾಗ್ಲೆ , ಶ್ವೇತಾ ಪ್ರಸಾದ್, ಅಮೃತಾ ಪ್ರೇಮ್, ಕಾರುಣ್ಯಾ ರಾಮ್​ ಅವರು ಕ್ಯಾನ್ಸರ್​ ರೋಗಿಗಳಿಗಾಗಿ ತಮ್ಮ ಕೇಳದಾನ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ನಟಿ ಸುಕೃತಾ ವಾಗ್ಲೆ, ನಾಲ್ಕು ಬಾರಿ ಕೇಶ ದಾನ ಮಾಡಿದ್ದಾರೆ. ಮೊದಲ ಬಾರಿಗೆ ಸಂಪೂರ್ಣ ಹೆಡ್ ಶೇವ್ ಮಾಡಿ ಪರಿಚಯದವರಿಗೆ ಕೂದಲು ನೀಡಿದ್ರಂತೆ. ನಂತರ ಮೂರು ಬಾರಿ ಕೂದಲು ದಾನ ಮಾಡಿದ್ದಾರಂತೆ. ಅಷ್ಟೇ ಅಲ್ಲ ಕೇಶ ದಾನ ಮಾಡಲು 12 ಇಂಚು ಕೂದಲು ಇದ್ದರೆ ಸಾಕು. ಕ್ಯಾನ್ಸರ್‌ನಿಂದಾಗಿ ಕೂದಲು ಕಳೆದುಕೊಂಡ ಮಕ್ಕಳ ಪರಿಸ್ಥಿತಿ, ಮನಸ್ಥಿತಿ ಯೋಚನೆ ಮಾಡಿ. ಅವರೊಂದು ವಿಗ್ ಖರೀದಿಸಲು 20ರಿಂದ 40 ಸಾವಿರ ರೂ.ವೆಚ್ಚವಾಗುತ್ತದೆ. ಇದನ್ನು ಎನ್‌ ಜಿಒಗಳು ಉಚಿತವಾಗಿ ನೀಡುತ್ತವೆ. ಇದೇ ರೀತಿ ಕ್ಯಾನ್ಸರ್ ಮತ್ತು ಅದರ ಚಿಕಿತ್ಸೆ ಕುರಿತಾದ ಜಾಗೃತಿ ಕಾರ್ಯಕ್ರಮಗಳು ಕೂಡ ನಡೆಯಬೇಕಿದೆ ಅಂತ ಸುಕೃತಾ ಹೇಳಿಕೊಂಡಿದ್ದಾರೆ. ಇನ್ನು ನಟಿ ಶ್ವೇತಾ ಪ್ರಸಾದ್​ ಕ್ಯಾನ್ಸರ್ ಬಾಧಿತರಿಗೆ ಕೂದಲು ದಾನ ಮಾಡಲೆಂದೇ ಉದ್ದ ಕೂದಲು ಬಿಟ್ಟಿದ್ದೆ ಅಂತ ಹೇಳಿಕೊಂಡಿದ್ದಾರೆ. ನಾನು ಕೇಶ ದಾನ ಮಾಡಿದ ಮೇಲೆ ತುಂಬಾ ಜನರು ನನ್ನ ಬಳಿ ವಿಚಾರಿಸಿ ಕೂದಲು ದಾನ ಮಾಡಿದ್ದಾರೆ. ಕೂದಲಿನಿಂದ ವಿಗ್ ಮಾಡುವ ಎನ್‌ಜಿಒಗಳಿಗೆ ದಾನ ಮಾಡಿದರೆ ಮಾತ್ರ ಉಪಯೋಗವಾಗುತ್ತದೆ. ವಿಗ್ ಮಾಡಲು ಅವರಿಗೂ ಒಂದಷ್ಟು ವೆಚ್ಚವಾಗುತ್ತದೆ. ಇದಕ್ಕೂ ಮುನ್ನ ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗೆ ಕ್ಯಾನ್ಸರ್ ಕುರಿತು ಪರೀಕ್ಷೆ ಮಾಡಿಸಿಕೊಳ್ಳುವ, ಕ್ಯಾನ್ಸರ್ ತಡೆಗಟ್ಟುವ ಲಸಿಕೆಗಳ ಕುರಿತು ಮಾಹಿತಿ ಅವಶ್ಯವಿದೆ ಅಂತ ನಟಿ ಶ್ವೇತಾ ಪ್ರಸಾದ್ ಹೇಳಿದ್ದಾರೆ.
ಇನ್ನು ಈಗಷ್ಟೇ ಸ್ಯಾಂಡಲ್​ವುಡ್​ನಲ್ಲಿ ಅರಳುತ್ತಿರುವ ಹೂವು ಅಂದ್ರೆ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್​. ಅವರೂ ಕೂಡಾ ಕ್ಯಾನ್ಸರ್​ ಬಾಧಿತರಿಗೆ ಕೂದಲು ದಾನ ಮಾಡಿದ್ದಾರೆ. ಅದು ಯಾವಾಗ್ಲೋ ಅಲ್ಲ.. ಟಗರು ಪಲ್ಯ ಸಿನಿಮಾ ಆದ ಮೇಲೆ. ತಾಯಿ ಹೇಳಿದಂತೆ ನನ್ನ ಕೂದಲನ್ನು ಕ್ಯಾನ್ಸರ್ ಬಾಧಿತರಿಗೆ ದಾನ ಮಾಡಿದ್ದೇನೆ ಅಂತ ಅಮೃತಾ ಹೇಳಿಕೊಂಡಿದ್ದಾರೆ. ನಾವು ಹೇರ್ ಕಟ್ ಮಾಡಿಸುವಾಗ ಸಾಕಷ್ಟು ಕೂದಲು ನಷ್ಟವಾಗುತ್ತದೆ. ಇದೇ ಕೂದಲೆಳೆಗಳು ಕ್ಯಾನ್ಸರ್ ಪೀಡಿತರ ಮುಖದಲ್ಲಿ ಒಂದು ಸಣ್ಣ ನಗು ತಂದರೆ ಅದಕ್ಕಿಂತ ಖುಷಿ ಇನ್ನೇನಿದೆ? ಅಂತ ಅಮೃತಾ ಪ್ರೇಮ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾರುಣ್ಯಾ ರಾಮ್​ ಈವರೆಗೆ ಎರಡು ಬಾರಿ ಕ್ಯಾನ್ಸರ್ ಬಾಧಿತರಿಗೆ ಕೂದಲು ದಾನ ಮಾಡಿದ್ದಾರಂತೆ. ಒಮ್ಮೆ ಕೋವಿಡ್ ಸಮಯದಲ್ಲಿ ಹಾಗೂ ಇತ್ತೀಚೆಗಷ್ಟೇ ಮತ್ತೆ ಕೇಶ ದಾನ ಮಾಡಿರೋದಾಗಿ ಹೇಳಿಕೊಂಡಿದ್ದಾರೆ. ಒಮ್ಮೆ 13 ಇಂಚು ಕೂದಲು ನೀಡಿದ ಮೇಲೆ ಮತ್ತೆ ಅಷ್ಟೇ ಕೂದಲು ಬೆಳೆಯಲು ಒಂದೆರಡು ವರ್ಷಗಳೇ ಬೇಕಾಗುತ್ತವೆ. ನಟಿಯರು ತಮ್ಮ ಎಂದಿನ ಶೂಟಿಂಗ್ ಹಾಗೂ ಅದರ ಲುಕ್‌ಗಳಿಗಾಗಿ ಹೇರ್ ಸ್ಟೈಲ್ ಮೆಂಟೇನ್ ಮಾಡಲೇಬೇಕಾಗುತ್ತದೆ. ಆದರೆ ಅವಕಾಶ ಸಿಕ್ಕಾಗ ಹೀಗೆ ಒಳ್ಳೆಯ ಉದ್ದೇಶಕ್ಕೆ ಕೂದಲು ದಾನ ಮಾಡಿದರೆ ಇನ್ನಷ್ಟು ಜನರು ಪ್ರೇರಿತರಾಗುತ್ತಾರೆ ಅನ್ನೋದು ನಟಿ ಕಾರುಣ್ಯಾ ರಾಮ್ ಅಭಿಪ್ರಾಯ. 
ವಿಶೇಷ ಸೂಚನೆ: ಎಲ್ಲಾ DTH &amp; Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ ]]></description>
<enclosure url="https://img-cdn.publive.online/fit-in/1280x960/newsfirstlive-kannada/media/media_files/2026/02/05/hair-donation-to-cancer-patients-2-2026-02-05-15-49-14.jpg" length="49398" type="image/jpeg"/>
<pubDate>Thu, 12 Feb 2026 09:44:04 +0530</pubDate>
<dc:creator>Newsfirst</dc:creator>
<media:keywords>ಕೇಶ, ಕೊಟ್ಟು, ಸ್ಫೂರ್ತಿಯಾದ, ನಟಿಯರು, ಯಾರಾರು, ವಿಗ್‌, ಮಾಡುವ, ಎನ್‌ಜಿಓ, ಗಳಿಗೆ, ಮಾತ್ರ, ಕೂದಲು, ದಾನ, ಮಾಡಿ</media:keywords>
</item>

<item>
<title>ಕನಕೋತ್ಸವ, ಗಂಗೋತ್ಸವದಲ್ಲಿ ಬಿಗ್ ಬಾಸ್ ವಿನ್ನರ್‌ ಗಿಲ್ಲಿ ಹವಾ ಜೋರು:  ಗಿಲ್ಲಿ ಮುಂದೇನು ಮಾಡ್ತಾರೆ?</title>
<link>https://thinkerr.in/%E0%B2%95%E0%B2%A8%E0%B2%95%E0%B3%8B%E0%B2%A4%E0%B3%8D%E0%B2%B8%E0%B2%B5-%E0%B2%97%E0%B2%82%E0%B2%97%E0%B3%8B%E0%B2%A4%E0%B3%8D%E0%B2%B8%E0%B2%B5%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%AC%E0%B2%BF%E0%B2%97%E0%B3%8D-%E0%B2%AC%E0%B2%BE%E0%B2%B8%E0%B3%8D-%E0%B2%B5%E0%B2%BF%E0%B2%A8%E0%B3%8D%E0%B2%A8%E0%B2%B0%E0%B3%8D-%E0%B2%97%E0%B2%BF%E0%B2%B2%E0%B3%8D%E0%B2%B2%E0%B2%BF-%E0%B2%B9%E0%B2%B5%E0%B2%BE-%E0%B2%9C%E0%B3%8B%E0%B2%B0%E0%B3%81-%E0%B2%97%E0%B2%BF%E0%B2%B2%E0%B3%8D%E0%B2%B2%E0%B2%BF-%E0%B2%AE%E0%B3%81%E0%B2%82%E0%B2%A6%E0%B3%87%E0%B2%A8%E0%B3%81-%E0%B2%AE%E0%B2%BE%E0%B2%A1%E0%B3%8D%E0%B2%A4%E0%B2%BE%E0%B2%B0%E0%B3%86</link>
<guid>https://thinkerr.in/%E0%B2%95%E0%B2%A8%E0%B2%95%E0%B3%8B%E0%B2%A4%E0%B3%8D%E0%B2%B8%E0%B2%B5-%E0%B2%97%E0%B2%82%E0%B2%97%E0%B3%8B%E0%B2%A4%E0%B3%8D%E0%B2%B8%E0%B2%B5%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%AC%E0%B2%BF%E0%B2%97%E0%B3%8D-%E0%B2%AC%E0%B2%BE%E0%B2%B8%E0%B3%8D-%E0%B2%B5%E0%B2%BF%E0%B2%A8%E0%B3%8D%E0%B2%A8%E0%B2%B0%E0%B3%8D-%E0%B2%97%E0%B2%BF%E0%B2%B2%E0%B3%8D%E0%B2%B2%E0%B2%BF-%E0%B2%B9%E0%B2%B5%E0%B2%BE-%E0%B2%9C%E0%B3%8B%E0%B2%B0%E0%B3%81-%E0%B2%97%E0%B2%BF%E0%B2%B2%E0%B3%8D%E0%B2%B2%E0%B2%BF-%E0%B2%AE%E0%B3%81%E0%B2%82%E0%B2%A6%E0%B3%87%E0%B2%A8%E0%B3%81-%E0%B2%AE%E0%B2%BE%E0%B2%A1%E0%B3%8D%E0%B2%A4%E0%B2%BE%E0%B2%B0%E0%B3%86</guid>
<description><![CDATA[ ಪಳಾರ್​ ಗಿಲ್ಲಿಗೆ ಪ್ಯಾನ್​ ಇಂಡಿಯಾ ಲೆವೆಲ್​ ಕ್ರೇಜ್​!.. ಗಿಲ್ಲಿ ಸ್ವ್ಯಾಗ್​.. ಫ್ಯಾನ್ಸ್​ ಸ್ವಿಂಗ್.. ​​ನೂಕಾಟ ತಳ್ಳಾಟ!..ಕನಕೋತ್ಸವದಲ್ಲಿ ಗಿಲ್ಲಿ ದಂಡು ಕಂಡು ಗಣ್ಯರೇ ದಂಗು​!
ಕೆಲವರು ಇತಿಹಾಸ ಸೃಷ್ಟಿ ಮಾಡಿ ಗೆಲ್ತಾರೆ. ಕೆಲವ್ರು ಅತಿಹಾಸ್ಯ ಸೃಷ್ಟಿ ಮಾಡಿ ಗೆಲ್ತಾರೆ. ಗಿಲ್ಲಿ ಅನ್ನೋ ನೇಮು, ಈ ದಿನ ಈ ಎರಡನ್ನೂ ಸೃಷ್ಟಿ ಮಾಡಿಬಿಟ್ಟಿದೆ. ನಮ್​ ಕನ್ನಡದ ಜನ ಅಭಿಮಾನ ಅಂತ ಒಂದ್ಸರಿ ಫಿಕ್ಸ್​​ ಆಗ್ಬಿಟ್ರೆ.. ಆ ಪ್ರೀತಿಗಾಗಿ ಪೂಜೆಗಳನ್ನೂ ಮಾಡ್ತಾರೆ. ಆರತಿಗಳನ್ನೂ ಹಿಡಿತಾರೆ.ಗಿಲ್ಲಿ ಕೆಲ ಶೋಗಳಲ್ಲಿದ್ದಾಗಲೇ ಫ್ಯಾನ್​ಬೇಸ್​ ಶುರುವಾಗಿತ್ತು. ಬಿಗ್​ಬಾಸ್​ಗೆ ಹೋದ್ಮೇಲೆ ಆ ಕ್ರೇಜ್​ ಡಬಲ್​ ಆಯ್ತು.. ಬಿಗ್​ ಬಾಸ್‌ ಮನೆಯಿಂದ ಆಚೆ ಬಂದ್ಮೇಲಂತೂ ಪ್ಯಾನ್​ ಇಂಡಿಯಾ ಲೆವೆಲ್​ಗೆ ಹೋಯ್ತು. ಇತ್ತೀಚೆಗೆ ಕನಕೋತ್ಸವ, ಗಂಗೋತ್ಸವದಲ್ಲಿ ಕಂಡ ಗಿಲ್ಲಿದಂಡಿಗೆ, ಇಡೀ ಉತ್ಸವವೇ ಗಿಲ್ಲಿ ಗಿಲ್ಲಿ ಗಿಲ್ಲಕ್ಕೂ ಅನಿಸಿದೆ.ದಂಡು.. ಇದು ಗಿಲ್ಲಿ ದಾಂಡಿನ ಸೌಂಡು.. ಇದು ಕನಸಾ ನನಸಾ ಅಂತ ಗಿಲ್ಲಿ ನಟ,  ನೋಡ್ಕೊಂಡ್ರೂ, ಇನ್ನೂ ಭ್ರಮೆ ಅನ್ಸೋ ಫ್ಯಾನ್ಸ್​​ ಬ್ಯಾಂಡು.  ಫೇಸ್​ಬುಕ್​ ಲೈವ್​ನಲ್ಲಿ ಪಂಚಿಂಗ್​ ಪಂಟರ್​.. ಡಿಕೆಡಿಯಲ್ಲಿ ಪಕ್ಕಾ ಎಂಟರ್​​ಟೈನರ್​​.. ಭರ್ಜರಿ ಬ್ಯಾಚ್ಯುಲರ್​ನಲ್ಲಿ ಫನ್​ ಕ್ರೀಯೇಟರ್​. ಬಿಗ್​ಬಾಸ್​ ಹೌಸ್​​ನಲ್ಲಿ ಕಲಾ ಪಂಟರ್​ಗಳ ಹಂಟರ್​. ಗಿಲ್ಲಿ ಎಲ್ಲಿದ್ರೆ ಅಲ್ಲಿ ಫನ್​​ ಗಾಳಿ ಬೀಸ್ತಲೇ ಇತ್ತು. ಇತ್ತೀಚೆಗೆ ಬಿಗ್ ಬಾಸ್‌ ​​ಮನೆಯಲ್ಲಿ ಗಿಲ್ಲಿ ಹವಾ ಬೇರೆ ಲೆವೆಲ್​ಗೆ ಹೋಗಿತ್ತು. ಮಂಡ್ಯದ ಹುಡ್ಗ ಈಗ ಇಂಡಿಯಾದ ಹುಡ್ಗ ಆಗಿದ್ದಾನೆ. ಪಂಚ್​​ ಮ್ಯಾನ್​ ಯಾವಾಗ ಹೇಗೆ​ ಪಂಚ್​ ಕೊಡ್ತಾನೆ.. ಅದೇಗೆ ಜನ್ರ ಮನಸ್ಸನ್ನ ಕೊಳ್ಳೆ ಹೊಡಿತಾನೆ ಅಂತ ಊಹಿಸೋದೆ ಕಷ್ಟ. ಪಳಾರ್​ ಗಿಲ್ಲಿ, ಗೂಗ್ಲೀ ಗಿಲ್ಲಿಯ ಅಬ್ಬರಕ್ಕೆ ಇದು ಅಭಿಮಾನಿಗಳು ಹಾಕಿರೋ ಹಬ್ಬದ ಚಪ್ಪರ.
ಗಿಲ್ಲಿ ಹಾವಳಿಗೆ ಮಳವಳ್ಳಿಗಷ್ಟೇಯಲ್ಲ. ಇಡೀ ಕಲಾಭಿಮಾನಿಗಳೇ ಫಿದಾ ಆಗಿದಾರೆ. ಬಿಗ್​ಬಾಸ್​​ ಗೆದ್ದು ಆಚೆ ಬಂದ್ಮೇಲೆ ಗಿಲ್ಲಿ ಕ್ರೇಜ್​ ಮಾಮೂಲಿಯಲ್ಲಿಲ್ಲ. ಯಾವ ಪ್ಯಾನ್​ ಇಂಡಿಯಾ ಸ್ಟಾರ್​ಗೂ ಕಮ್ಮಿಯಿಲ್ಲ. ಗಿಲ್ಲಿ ಯಾವ ಸ್ಟೇಜ್​ ಹತ್ತಿದ್ರೂ.. ಮೈಕ್​ ಹಿಡಿದು ನಿಂತ್ರೂ.. ಗಿಲ್ಲಿ ಗಿಲ್ಲಿ ಜಸ್ಟ್ ಗಿಲ್ಲಿ ಹೆಸ್ರಷ್ಟೇ. ಗಿಲ್ಲಿಯ ಪಂಚ್​ಗಳೇ ಬುಲೆಟ್ಸು ಗನ್​..  ದಿ ನೇಮ್​ ಈಸಿ ಗಿಲ್ಲಿ.. ಫ್ರಮ್​ ಮಳ್ಳವಳ್ಳೀ ಇದೇ ಈಗಿನ ಗಿಲ್ಲಿ ಸ್ಲೋಗನ್​.ಪಳಾರ್​ ಗಿಲ್ಲಿಗೆ ಪ್ಯಾನ್​ ಇಂಡಿಯಾ ಲೆವೆಲ್​ ಕ್ರೇಜ್​!ಗಿಲ್ಲಿ ಅಬ್ಬರ..​. ಫ್ಯಾನ್ಸ್​ ಪ್ರವಾಹ.. ​​ನೂಕಾಟ ತಳ್ಳಾಟ!ಕನಕೋತ್ಸವದಲ್ಲಿ ಗಿಲ್ಲಿ ದಂಡು ಕಂಡು ಗಣ್ಯರೇ ದಂಗು​!ಇತ್ತೀಚೆಗೆ ಗಿಲ್ಲಿಗೆ ಎಲ್ಲಾ ದೊಡ್ಡ ದೊಡ್ಡ ಈವೆಂಟ್​ಗಳಿಗೆ, ಶೋಗಳಿಗೆ ಇನ್ವಿಟೇಷನ್​ ಬರ್ತಿದೆ. ಹಾಗೆ ಕನಕಪುರದಲ್ಲಿ ನಡೆದಿದ್ದ ಕನಕೋತ್ಸವಕ್ಕೆ ಎಷ್ಟೋ ಸ್ಟಾರ್ ​​ ಜೊತೆಗೆ ಗಿಲ್ಲಿಗೂ ಆಹ್ವಾನ ಹೋಗಿತ್ತು. ಬಟ್​ ಆ ಈವೆಂಟ್​ನಲ್ಲಿ ಹುಚ್ಚೆಬ್ಬಿಸಿದ್ದು.. ದೊಡ್ಡ ಮಟ್ಟದ ಸದ್ದು ಮಾಡಿದ್ದು ಗಿಲ್ಲಿ.ಅಷ್ಟಕ್ಕೂ ಈ ಈವೆಂಟ್​ ಯಾಕೆ ನಡೆದಿದ್ದು. ಅಲ್ಲಿಗೆ ಗಿಲ್ಲಿ ಯಾಕೆ ಬಂದಿದ್ದು ಅನ್ನೋದನ್ನ ಹೇಳ್ಬಿಡ್ತೀವಿ ಕೇಳಿ. ಕನಕೋತ್ಸವ ಅನ್ನೋದು ರಾಮನಗರ ಜಿಲ್ಲೆಯ ಕನಕಪುರದಲ್ಲಿ ಡಿಕೆಶಿ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ, ಡಿಕೆ ಶಿವಕುಮಾರ್ ಅವ್ರ ಸಹೋದರ ಡಿಕೆ ಸುರೇಶ್ ಅವ್ರಿಂದ ಆಯೋಜಿತವಾಗಿದ್ದ, ಐದು ದಿನಗಳ ಕ್ರೀಡೆ ಮತ್ತು ಸಂಸ್ಕೃತಿಯ ಬೃಹತ್ ಉತ್ಸವ ಇದು. ಇದು ಕಲೆ, ಕ್ರೀಡೆ, ಯೋಗಾಸನ, ಮ್ಯಾರಥಾನ್ ಓಟ, ರಸಮಂಜರಿ ಕಾರ್ಯಕ್ರಮಗಳಿದ್ದ ರಂಗಸಜ್ಜಿಕೆ.ಇದು ಕೇವಲ ಎಂಟರ್​ಟೈನ್ಮೆಂಟ್​ ಈವೆಂಟ್​ ಆಗಿರಲಿಲ್ಲ. ಈ ಮೂಲಕ ಸ್ಥಳೀಯ ಪ್ರತಿಭೆಗಳನ್ನ ಎಂಕರೇಜ್​ ಮಾಡೋದು.. ಹಲವಾರು ಪ್ರತಿಭೆಗಳನ್ನ ಗುರುತಿಸಿ, ಸನ್ಮಾನಿಸೋದು ಈ ಉತ್ಸವದ ಉದ್ದೇಶವಾಗಿತ್ತು. ಎಲ್ಲದಕ್ಕಿಂಥ ಮುಖ್ಯವಾಗಿ ಸಾಂಸ್ಕೃತಿಕ ಹಬ್ಬವಾಗಿತ್ತು.ಜನವರಿ 28 ರಿಂದ ಫೆಬ್ರವರಿ 1ರ ವರೆಗೆ ಐದು ದಿನಗಳ ಕಾಲ ನಡೆದಿದ್ದ ಈ ಆಚರಣೆ.. ಎಷ್ಟೋ ಕಲಾವಿದರ ಸಂಗಮವಾಗಿತ್ತು. ಎಷ್ಟೋ ಉದ್ದೇಶಗಳ ಸಂಯಮವಾಗಿತ್ತು. ಈ ಟೈಮ್​ನಲ್ಲಿ ಈ ಉತ್ಸವಕ್ಕೆ ಗಿಲ್ಲಿ ಬರ್ತಿದ್ದಾನೆ ಅಂದ ತಕ್ಷಣ ಅಲ್ಲಿ ದೊಡ್ಡ ದಂಡೇ ಸೇರಿಬಿಟ್ಟಿತ್ತು. ಆಗ ಅಲ್ಲಾಗಿದ್ದೇ ಈ ಕ್ರೇಜು.

ಹೆಣ್ಮಕ್ಕಳು ಹುಟ್ಟಿದ್ರೆ ಟೆನ್ಷನ್​ ಬೇಡ.. ಅವ್ರು ಟೆನ್​ ಸನ್​ಗೆ ಸಮ!ಗಿಲ್ಲಿ ಪಂಚಸ್​ಗೆ ಗಂಟಲು ಕಿತ್ತುಬರುಂತೆ ಕೂಗಾಡಿದ ಫ್ಯಾನ್ಸ್​!ಗಿಲ್ಲಿ ಹವಾ ಎಲ್ಲೋದ್ರೂ ಕಮ್ಮಿಯಂತೂ ಇರಲ್ಲ. ಈ ಬಾರಿಯ ಬಿಗ್​ಬಾಸ್ ಶೋ​​.. ಪ್ಯಾನ್​ ಇಂಡಿಯಾ ಶೋ ಆಗಿಬಿಟ್ಟಿತ್ತು. ಗಿಲ್ಲಿ ಟೈಮಿಂಗ್ ಡೈಲಾಗ್ಸ್​ಗೆ.. ಪಂಚಿಂಗ್​ ಟಾಕ್​ ಬುಲ್ಲೆಟ್ಸ್​ಗೆ​ ಜನ ಫಿದಾ ಆಗಿದ್ರು. ಆತ ಬಿಗ್​ ಮನೆಯಲ್ಲಿ ಹೇಳಿದ್ದ ಒಂದು ಮಕ್ಕಳು ಹೇಳುವ ಪದ್ಯ ಈಗ್ಲೂ ಫೇಮಸ್​.. ಅದಕ್ಕಾಗಿನೇ ಈ ಅಭಿಮಾನದ ಅಬ್ಬರ.
ಗಿಲ್ಲಿಯ ಟ್ಯಾಟೂಗಳು ಆದವು. ಬ್ಯಾನರ್ಸ್​ ಆದವು.. ಗಾಡಿಗಳ ಮೇಲೆ ಸ್ಟಿಕ್ಕರ್ಸ್​ ಆದ್ವು.. ಱಲಿಗಳಾದ್ವು.. ಮಂದಿರಗಳಲ್ಲಿ ಪೂಜೆ ಪುನಸ್ಕಾರಗಳು ಆದ್ವು. ಈಗ ವೇದಿಕೆಗಳಲ್ಲಿ ಕ್ರೇಜ್​ ಶುರುವಾಗಿದೆ. ಗಿಲ್ಲಿಗೆ ಇದು ನಿಜವಾ ಸುಳ್ಳಾ ಅನ್ನೋ ಭ್ರಮೆ ಶುರುವಾಗಿಬಿಟ್ಟಿದೆ.ಡಿಕೆ ಶಿವಕುಮಾರ್​ ಅವ್ರ ಕರೆಗೆ ಬೆಚ್ಚಿಬಿದ್ದಿನಂತೆ ಗಿಲ್ಲಿ!ಕನಕಪುರ ಜನರಿಗಾಗಿ ಗಿಲ್ಲಿ ಹಾಡಿದ್ದ ಹಾಡು ಹೇಗಿತ್ತು? ಈ ಕನಕೋತ್ಸವವನ್ನ ಡಿಕೆ ಬ್ರದರ್ಸ್​ ಆಯೋಜಿಸಿದ್ದು.. ಈ ಈವೆಂಟ್​ಗೆ ಗಿಲ್ಲಿಗೆ ಕಾಲ್​ ಮಾಡಿ ಕರೆದಿದ್ದು ಯಾರೋ ಮ್ಯಾನೆಜರ್​ಗಳೋ.. ಇನ್ಯಾರೋ ಅಲ್ಲ.. ಸ್ವತಃ ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್​ ಅವ್ರೇ ಕಾಲ್​ ಮಾಡಿದ್ರಂತೆ.. ಡಿಕೆ ಸಾಹೆಬ್ರ ಧ್ವನಿ ಕೇಳೀ ಗಿಲ್ಲಿ ರಿಯಾಕ್ಷನ್​ ಏನು ಗೊತ್ತಾ?ಗಿಲ್ಲಿಯ ಹವಾ ಇಷ್ಟೇ ಅಲ್ಲ.. ಇಡೀ ರಾಜ್ಯದ ತುಂಬಾ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಸೋಷಿಯಲ್​ ಮೀಡಿಯಾದಲ್ಲೂ ಗಿಲ್ಲಿ ಫಾಲೋವರ್ಸ್​ ಒಂದು ಮಿಲಿಯನ್​ ದಾಟಿದೆ. ಗಿಲ್ಲಿಯ ಱಪ್​ ಸಾಂಗ್ಸ್​.. ಡಿಜೆ ಸಾಂಗ್ಸ್​ ಹವಾ ಜೋರಾಗಿವೆ. ಇದೇ ಉತ್ಸವದಲ್ಲಿ ಗಿಲ್ಲಿ ಹಾಡು ಹಾಡಿದಾಗ ಹೇಗಿತ್ತು ನೋಡಿ.ಇದೇ ಸ್ಟೇಜ್​ ಮೇಲೆ ಗಿಲ್ಲಿ ಮಿಮಿಕ್ರಿ ಮಾಡಿದಾಗ.. ಡಿಕೆ ಬ್ರದರ್ಸ್​ ಮುಗುಳ್ನಗ್ತಲೇ ಇದ್ರು.  ಗಿಲ್ಲಿ ಸ್ಟೇಜ್ ನಲ್ಲಿ ಮಿಮಿಕ್ರಿ ಮಾಡಿ ಜನರನ್ನು ರಂಜಿಸಿದ್ದರು.  ಗಿಲ್ಲಿ ಹಾವಳಿ ಇಲ್ಲಿಗೆ ಮುಗಿದಿಲ್ಲ.. ಕ್ರೇಜ್​ ಇನ್ನೂ ಕ್ರೇಜಿಯಾಗಿದೆ. ಸ್ಟೇಜ್​ಗೆ ನುಗ್ಗಿದ ಜನ.. ಆತನ ಜೊತೆ ಸೆಲ್ಫೀಗೆ ಮುಗಿಬಿದ್ದಿದ್ರು. ಆ ದೃಶ್ಯ​ ಮತ್ತಷ್ಟು ಪಳಾರ್​ ಆಗಿದೆ.ಗಿಲ್ಲಿಗೆ ಈ ಪಾಟಿ ಫಾಲೋಯಿಂಗ್​ ಇದೆ ಅಂತ ಗೊತ್ತೇ ಇಲ್ಲ. ಗಿಲ್ಲಿ ರೇಂಜ್​ ಹೇಗಿದೆ? ಎಷ್ಟಿದೆ ಅಂತ ಈ ಕನಕೋತ್ಸವ ಸಾಕ್ಷಿಯಾಗಿತ್ತು. ಹಾಗೆ ಚೆನ್ನಪಟ್ಟಣದಲ್ಲಿ ನಡೆದಿದ್ದ ಗಂಗೋತ್ಸವದಲ್ಲಿ ಗಿಲ್ಲಿ ಕ್ರೇಜ್​ ಜೋರಾಗಿತ್ತು. 

ವಿಶೇಷ ಸೂಚನೆ: ಎಲ್ಲಾ DTH &amp; Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.  ]]></description>
<enclosure url="https://img-cdn.publive.online/fit-in/1280x960/newsfirstlive-kannada/media/media_files/2026/02/03/gilli-at-kanakosatva-4-2026-02-03-15-53-46.jpg" length="49398" type="image/jpeg"/>
<pubDate>Thu, 12 Feb 2026 09:44:04 +0530</pubDate>
<dc:creator>Newsfirst</dc:creator>
<media:keywords>ಕನಕೋತ್ಸವ, ಗಂಗೋತ್ಸವದಲ್ಲಿ, ಬಿಗ್, ಬಾಸ್, ವಿನ್ನರ್‌, ಗಿಲ್ಲಿ, ಹವಾ, ಜೋರು:, ಗಿಲ್ಲಿ, ಮುಂದೇನು, ಮಾಡ್ತಾರೆ</media:keywords>
</item>

<item>
<title>ತಮಿಳು ನಟ ಧನುಷ್&#45; ನಟಿ ಮೃಣಾಲ್ ಠಾಕೂರ್ ನಡುವೆ ಏನಿಲ್ಲ, ಏನಿಲ್ಲ! ಧನುಷ್ ನನ್ನ ಸಹೋದರ ಎಂದ ಮೃಣಾಲ್‌ ಠಾಕೂರ್‌</title>
<link>https://thinkerr.in/%E0%B2%A4%E0%B2%AE%E0%B2%BF%E0%B2%B3%E0%B3%81-%E0%B2%A8%E0%B2%9F-%E0%B2%A7%E0%B2%A8%E0%B3%81%E0%B2%B7%E0%B3%8D-%E0%B2%A8%E0%B2%9F%E0%B2%BF-%E0%B2%AE%E0%B3%83%E0%B2%A3%E0%B2%BE%E0%B2%B2%E0%B3%8D-%E0%B2%A0%E0%B2%BE%E0%B2%95%E0%B3%82%E0%B2%B0%E0%B3%8D-%E0%B2%A8%E0%B2%A1%E0%B3%81%E0%B2%B5%E0%B3%86-%E0%B2%8F%E0%B2%A8%E0%B2%BF%E0%B2%B2%E0%B3%8D%E0%B2%B2-%E0%B2%8F%E0%B2%A8%E0%B2%BF%E0%B2%B2%E0%B3%8D%E0%B2%B2-%E0%B2%A7%E0%B2%A8%E0%B3%81%E0%B2%B7%E0%B3%8D-%E0%B2%A8%E0%B2%A8%E0%B3%8D%E0%B2%A8-%E0%B2%B8%E0%B2%B9%E0%B3%8B%E0%B2%A6%E0%B2%B0-%E0%B2%8E%E0%B2%82%E0%B2%A6-%E0%B2%AE%E0%B3%83%E0%B2%A3%E0%B2%BE%E0%B2%B2%E0%B3%8D-%E0%B2%A0%E0%B2%BE%E0%B2%95%E0%B3%82%E0%B2%B0%E0%B3%8D</link>
<guid>https://thinkerr.in/%E0%B2%A4%E0%B2%AE%E0%B2%BF%E0%B2%B3%E0%B3%81-%E0%B2%A8%E0%B2%9F-%E0%B2%A7%E0%B2%A8%E0%B3%81%E0%B2%B7%E0%B3%8D-%E0%B2%A8%E0%B2%9F%E0%B2%BF-%E0%B2%AE%E0%B3%83%E0%B2%A3%E0%B2%BE%E0%B2%B2%E0%B3%8D-%E0%B2%A0%E0%B2%BE%E0%B2%95%E0%B3%82%E0%B2%B0%E0%B3%8D-%E0%B2%A8%E0%B2%A1%E0%B3%81%E0%B2%B5%E0%B3%86-%E0%B2%8F%E0%B2%A8%E0%B2%BF%E0%B2%B2%E0%B3%8D%E0%B2%B2-%E0%B2%8F%E0%B2%A8%E0%B2%BF%E0%B2%B2%E0%B3%8D%E0%B2%B2-%E0%B2%A7%E0%B2%A8%E0%B3%81%E0%B2%B7%E0%B3%8D-%E0%B2%A8%E0%B2%A8%E0%B3%8D%E0%B2%A8-%E0%B2%B8%E0%B2%B9%E0%B3%8B%E0%B2%A6%E0%B2%B0-%E0%B2%8E%E0%B2%82%E0%B2%A6-%E0%B2%AE%E0%B3%83%E0%B2%A3%E0%B2%BE%E0%B2%B2%E0%B3%8D-%E0%B2%A0%E0%B2%BE%E0%B2%95%E0%B3%82%E0%B2%B0%E0%B3%8D</guid>
<description><![CDATA[ ತಮಿಳಿನ ಸ್ಟಾರ್ ನಟ ಧನುಷ್ ಹಾಗೂ ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಮಧ್ಯೆ ಏನೋ ನಡೀತಿದೆ.. ಇಬ್ಬರೂ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ವದಂತಿ ಓಡಾಡುತ್ತಿತ್ತು.  ಸದ್ಯದಲ್ಲೇ  ಇಬ್ಬರು  ಮದುವೆ ಆಗ್ತಾರೆ ಅನ್ನೋ ವಿಚಾರವೂ ಗಾಳಿಯಂತೆ ಹಬ್ಬಿತ್ತು.. ಇದೀಗ ಈ ವಿಚಾರವಾಗಿ ಮೃಣಾಲ್, ಪ್ರತಿಕ್ರಿಯಿಸಿದ್ದಾರಂತೆ.. ಧನುಷ್ ನನ್ನ ಸಹೋದರ ರೀತಿ.. ನಮ್ಮಿಬ್ಬರ ಮಧ್ಯೆ ಪ್ರೊಫೆಷನಲ್ ರಿಲೇಷ್ನನ್ಶಿಪ್ ಮಾತ್ರ ಇರೋದು ಅಂತಾ ತಿಳಿಸಿದ್ದಾರೆ. ನನ್ನ ಕಠಿಣ ಪರಿಶ್ರಮ ಮತ್ತು ನನ್ನ ಕೆಲಸವು ನನಗೆ ಮನ್ನಣೆ ತರಬೇಕೆಂದು ನಾನು ಬಯಸುತ್ತೇನೆ. ಆದರೆ ಸಂಬಂಧವಿಲ್ಲದ ವಿಷಯಗಳಲ್ಲಿ ನನ್ನ ಹೆಸರನ್ನು ಎಳೆದು ತರುವುದು ನೋವಿನ ಸಂಗತಿ. ಈ &#039;ಮದುವೆ ವಿವಾದ&#039;ದ ಬಗ್ಗೆ ನಾನು ಸ್ಪಷ್ಟನೆ ನೀಡಲು ಬಯಸುತ್ತೇನೆ. ಧನುಷ್ ನನಗೆ ಸಹೋದರನಂತೆ. ನಮ್ಮ ನಡುವೆ ವೃತ್ತಿಪರ ಗೌರವ ಮಾತ್ರ ಇದೆ. ಹುಡುಗಿಯ ವೈಯಕ್ತಿಕ ಜೀವನದ ಬಗ್ಗೆ ಇಂತಹ ವದಂತಿಗಳನ್ನು ಏಕೆ ಸೃಷ್ಟಿಸಲಾಗುತ್ತದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಲೈಕ್ ಮತ್ತು ಶೇರ್‌ಗಳಿಗಾಗಿ ಮಾಡುವ ಇಂತಹ ಕೆಲಸಗಳು ನಮ್ಮ ಜೀವನದ ಮೇಲೆ ಬಲವಾದ ಪರಿಣಾಮ ಬೀರುತ್ತವೆ&quot; ಎಂದು ಮೃಣಾಲ್ ಠಾಕೂರ್ ಹೇಳಿದ್ದಾರೆ. ವಿಶೇಷ ಸೂಚನೆ: ಎಲ್ಲಾ DTH &amp; Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ ]]></description>
<enclosure url="https://img-cdn.publive.online/fit-in/1280x960/newsfirstlive-kannada/media/media_files/2026/02/03/mrunal-thakuru-2026-02-03-14-17-38.jpg" length="49398" type="image/jpeg"/>
<pubDate>Thu, 12 Feb 2026 09:44:04 +0530</pubDate>
<dc:creator>Newsfirst</dc:creator>
<media:keywords>ತಮಿಳು, ನಟ, ಧನುಷ್-, ನಟಿ, ಮೃಣಾಲ್, ಠಾಕೂರ್, ನಡುವೆ, ಏನಿಲ್ಲ, ಏನಿಲ್ಲ, ಧನುಷ್, ನನ್ನ, ಸಹೋದರ, ಎಂದ, ಮೃಣಾಲ್‌, ಠಾಕೂರ್‌</media:keywords>
</item>

<item>
<title>‘ಕಿಚ್ಚ’ ಸುದೀಪ್ ಸಿನಿ ಪಯಣಕ್ಕೆ 30 ವರ್ಷ.. ಅಭಿಮಾನಿಗಳಿಗೆ ಭಾವುಕ ಪತ್ರ ಬರೆದ ಸುದೀಪ್..!</title>
<link>https://thinkerr.in/%E0%B2%95%E0%B2%BF%E0%B2%9A%E0%B3%8D%E0%B2%9A-%E0%B2%B8%E0%B3%81%E0%B2%A6%E0%B3%80%E0%B2%AA%E0%B3%8D-%E0%B2%B8%E0%B2%BF%E0%B2%A8%E0%B2%BF-%E0%B2%AA%E0%B2%AF%E0%B2%A3%E0%B2%95%E0%B3%8D%E0%B2%95%E0%B3%86-30-%E0%B2%B5%E0%B2%B0%E0%B3%8D%E0%B2%B7-%E0%B2%85%E0%B2%AD%E0%B2%BF%E0%B2%AE%E0%B2%BE%E0%B2%A8%E0%B2%BF%E0%B2%97%E0%B2%B3%E0%B2%BF%E0%B2%97%E0%B3%86-%E0%B2%AD%E0%B2%BE%E0%B2%B5%E0%B3%81%E0%B2%95-%E0%B2%AA%E0%B2%A4%E0%B3%8D%E0%B2%B0-%E0%B2%AC%E0%B2%B0%E0%B3%86%E0%B2%A6-%E0%B2%B8%E0%B3%81%E0%B2%A6%E0%B3%80%E0%B2%AA%E0%B3%8D</link>
<guid>https://thinkerr.in/%E0%B2%95%E0%B2%BF%E0%B2%9A%E0%B3%8D%E0%B2%9A-%E0%B2%B8%E0%B3%81%E0%B2%A6%E0%B3%80%E0%B2%AA%E0%B3%8D-%E0%B2%B8%E0%B2%BF%E0%B2%A8%E0%B2%BF-%E0%B2%AA%E0%B2%AF%E0%B2%A3%E0%B2%95%E0%B3%8D%E0%B2%95%E0%B3%86-30-%E0%B2%B5%E0%B2%B0%E0%B3%8D%E0%B2%B7-%E0%B2%85%E0%B2%AD%E0%B2%BF%E0%B2%AE%E0%B2%BE%E0%B2%A8%E0%B2%BF%E0%B2%97%E0%B2%B3%E0%B2%BF%E0%B2%97%E0%B3%86-%E0%B2%AD%E0%B2%BE%E0%B2%B5%E0%B3%81%E0%B2%95-%E0%B2%AA%E0%B2%A4%E0%B3%8D%E0%B2%B0-%E0%B2%AC%E0%B2%B0%E0%B3%86%E0%B2%A6-%E0%B2%B8%E0%B3%81%E0%B2%A6%E0%B3%80%E0%B2%AA%E0%B3%8D</guid>
<description><![CDATA[ ಬೆಂಗಳೂರು: ಸ್ಯಾಂಡಲ್‌ವುಡ್‌ನ ‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಅವರು ಚಿತ್ರರಂಗಕ್ಕೆ ಕಾಲಿಟ್ಟು ಇಂದಿಗೆ ಸರಿಯಾಗಿ ಮೂರು ದಶಕಗಳು ಸಂದಿವೆ. 30 ವರ್ಷಗಳ ಈ ಅದ್ಭುತ ಸಿನಿ ಪಯಣದ ಸಂಭ್ರಮವನ್ನು ಸುದೀಪ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅತ್ಯಂತ ಭಾವುಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಆಚರಿಸಿದ್ದಾರೆ.
ಹೃದಯ ತುಂಬಿ ಬಂದಿದೆ
ತಮ್ಮ ಸುದೀರ್ಘ ಜರ್ನಿ ಕುರಿತು ಬರೆದುಕೊಂಡಿರುವ ಸುದೀಪ್, ಮೂರು ದಶಕಗಳ ನಂತರ ಈ ಸುಂದರ ಸಿನಿರಂಗದಲ್ಲಿ ನಿಂತಿರುವಾಗ ನನ್ನ ಹೃದಯ ತುಂಬಿದೆ. ಕನಸುಗಳ ಜೊತೆ ಆರಂಭಿಸಿದ ನನ್ನ ಪ್ರಯಾಣ ಇಷ್ಟು ದೊಡ್ಡದಾಗುತ್ತದೆ ಎಂದು ನಾನು ಅಂದು ಊಹಿಸಿರಲಿಲ್ಲ. ಇದಕ್ಕೆ ಕಾರಣ ನೀವು, ಎಂದು ತಮ್ಮ ಯಶಸ್ಸಿನ ಶ್ರೇಯಸ್ಸನ್ನು ಜನರಿಗೆ ಅರ್ಪಿಸಿದ್ದಾರೆ.
ಅಭಿಮಾನಿಗಳೇ ನನ್ನ ಶಕ್ತಿ:
ತಮ್ಮ ಏಳುಬೀಳುಗಳಲ್ಲಿ ಜೊತೆಯಾಗಿ ನಿಂತ ಅಭಿಮಾನಿಗಳನ್ನು ನೆನೆದ ಅವರು, ಅಭಿಮಾನಿಗಳೇ ನೀವು ನನ್ನ ಶಕ್ತಿ. ನಿಮ್ಮ ಪ್ರೀತಿಯೇ ನನಗೆ ಮುಂದೆ ಸಾಗುವ ಧೈರ್ಯ ಕೊಡುತ್ತದೆ ಎಂದಿದ್ದಾರೆ. ಸಿನಿಮಾ ಎನ್ನುವುದು ಒಬ್ಬರ ಕೆಲಸವಲ್ಲ, ಅದೊಂದು ತಂಡದ ಕೆಲಸ ಎಂದು ಸುದೀಪ್ ಅಭಿಪ್ರಾಯಪಟ್ಟಿದ್ದಾರೆ. &quot;ನನ್ನ ಮೇಲೆ ನಂಬಿಕೆ ಇಟ್ಟ ನಿರ್ದೇಶಕರು ಮತ್ತು ಬರಹಗಾರರಿಗೆ ಧನ್ಯವಾದಗಳು. ನಿರ್ಮಾಪಕರು ತೋರಿಸಿದ ಧೈರ್ಯ ಮತ್ತು ವಿಶ್ವಾಸದಿಂದ ನನ್ನ ಕನಸುಗಳು ನಿಜವಾದವು. ನನ್ನ ಎಲ್ಲಾ ಸಹನಟರು ಹಾಗೂ ತಾಂತ್ರಿಕ ವರ್ಗದವರ ಪರಿಶ್ರಮ ಅಮೂಲ್ಯ ಎಂದು ಸ್ಮರಿಸಿದ್ದಾರೆ.
ಇದನ್ನೂ ಓದಿ: ‘ರಾಯ್ ಸರ್..’ ಎನ್ನುತ್ತ ಹನುಮಂತ ಭಾವುಕ.. ಗಾಯಕನಿಗೆ ಉದ್ಯಮಿ ಕೊಟ್ಟಿದ್ದ ಭರವಸೆ ಏನು ಗೊತ್ತಾ..?
ತಮ್ಮ ವೃತ್ತಿಜೀವನದಲ್ಲಿ ಮಾಧ್ಯಮಗಳ ಪಾತ್ರವನ್ನು ಉಲ್ಲೇಖಿಸಿದ ಕಿಚ್ಚ, &quot;ನೀವು ನನ್ನನ್ನು ಬೆಂಬಲಿಸಿ, ಪ್ರಶ್ನಿಸಿ, ಬೆಳೆಸಿದಿರಿ. ಕನ್ನಡ ಚಿತ್ರರಂಗ ನನಗೆ ಗುರುತು ಮತ್ತು ಗೌರವ ಕೊಟ್ಟಿದೆ. ಕನ್ನಡ ಸಿನೆಮಾ ನನ್ನ ಹೆಮ್ಮೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ವಿನಯ ಕಲಿಸಿದ 30 ವರ್ಷ
ಕೊನೆಯದಾಗಿ ಕುಟುಂಬ ಮತ್ತು ಸ್ನೇಹಿತರಿಗೆ ಧನ್ಯವಾದ ತಿಳಿಸಿರುವ ಸುದೀಪ್, ಈ 30 ವರ್ಷಗಳು ನನಗೆ ವಿನಯವನ್ನು ಕಲಿಸಿವೆ. ನಾನು ಇನ್ನಷ್ಟು ಶ್ರಮಿಸುತ್ತೇನೆ. ಈ ಕಲೆಗೆ ಸದಾ ಗೌರವ ಕೊಡುತ್ತಾ ಮುಂದುವರೆಯುತ್ತೇನೆ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ. 1996ರಲ್ಲಿ ಆರಂಭವಾದ ಸುದೀಪ್ ಅವರ ಈ ಪಯಣ ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ. ಅವರ ಈ ಸಾಧನೆಗೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ.
ಇದನ್ನೂ ಓದಿ: ಸಿ.ಜೆ.ರಾಯ್‌ 8,400 ಕೋಟಿ ರೂಪಾಯಿ ಒಡೆಯ : ಸರ್ಜಾಪುರದಲ್ಲಿ ಭೂಮಿ ಖರೀದಿಯಿಂದ ಸಿಕ್ತು ಸಕ್ಸಸ್‌!

30 years. Infinite gratitude. 🎬❤️Standing here after three decades in this crazy, beautiful film world, my heart is just… full. From a boy with dreams, doubts and wild hope to whatever this has become — it’s bigger than I ever imagined because of YOU. Fans — you’re my… pic.twitter.com/cvKTZoGYnC
— Kichcha Sudeepa (@KicchaSudeep) January 31, 2026



ವಿಶೇಷ ಸೂಚನೆ: ಎಲ್ಲಾ DTH &amp; Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ ]]></description>
<enclosure url="https://img-cdn.publive.online/fit-in/1280x960/newsfirstlive-kannada/media/media_files/2025/08/04/kiccha-sudeep2-2025-08-04-11-34-03.jpg" length="49398" type="image/jpeg"/>
<pubDate>Thu, 12 Feb 2026 09:44:04 +0530</pubDate>
<dc:creator>Newsfirst</dc:creator>
<media:keywords>‘ಕಿಚ್ಚ’, ಸುದೀಪ್, ಸಿನಿ, ಪಯಣಕ್ಕೆ, ವರ್ಷ.., ಅಭಿಮಾನಿಗಳಿಗೆ, ಭಾವುಕ, ಪತ್ರ, ಬರೆದ, ಸುದೀಪ್..</media:keywords>
</item>

<item>
<title>ಕಾನ್ಪಿಡೆಂಟ್ ಗ್ರೂಪ್‌ ಕಚೇರಿಯಲ್ಲಿ ಇಂದು ಏನೇನಾಯಿತು? ಪೊಲೀಸ್ ತನಿಖೆಯಲ್ಲಿ ಸಿಕ್ಕಿದ್ದೇನು? ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿರೋದೇನು?</title>
<link>https://thinkerr.in/%E0%B2%95%E0%B2%BE%E0%B2%A8%E0%B3%8D%E0%B2%AA%E0%B2%BF%E0%B2%A1%E0%B3%86%E0%B2%82%E0%B2%9F%E0%B3%8D-%E0%B2%97%E0%B3%8D%E0%B2%B0%E0%B3%82%E0%B2%AA%E0%B3%8D-%E0%B2%95%E0%B2%9A%E0%B3%87%E0%B2%B0%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%87%E0%B2%82%E0%B2%A6%E0%B3%81-%E0%B2%8F%E0%B2%A8%E0%B3%87%E0%B2%A8%E0%B2%BE%E0%B2%AF%E0%B2%BF%E0%B2%A4%E0%B3%81-%E0%B2%AA%E0%B3%8A%E0%B2%B2%E0%B3%80%E0%B2%B8%E0%B3%8D-%E0%B2%A4%E0%B2%A8%E0%B2%BF%E0%B2%96%E0%B3%86%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%B8%E0%B2%BF%E0%B2%95%E0%B3%8D%E0%B2%95%E0%B2%BF%E0%B2%A6%E0%B3%8D%E0%B2%A6%E0%B3%87%E0%B2%A8%E0%B3%81-%E0%B2%B8%E0%B2%BF%E0%B2%B8%E0%B2%BF%E0%B2%9F%E0%B2%BF%E0%B2%B5%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%B0%E0%B3%86%E0%B2%95%E0%B2%BE%E0%B2%B0%E0%B3%8D%E0%B2%A1%E0%B3%8D-%E0%B2%86%E0%B2%97%E0%B2%BF%E0%B2%B0%E0%B3%8B%E0%B2%A6%E0%B3%87%E0%B2%A8%E0%B3%81</link>
<guid>https://thinkerr.in/%E0%B2%95%E0%B2%BE%E0%B2%A8%E0%B3%8D%E0%B2%AA%E0%B2%BF%E0%B2%A1%E0%B3%86%E0%B2%82%E0%B2%9F%E0%B3%8D-%E0%B2%97%E0%B3%8D%E0%B2%B0%E0%B3%82%E0%B2%AA%E0%B3%8D-%E0%B2%95%E0%B2%9A%E0%B3%87%E0%B2%B0%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%87%E0%B2%82%E0%B2%A6%E0%B3%81-%E0%B2%8F%E0%B2%A8%E0%B3%87%E0%B2%A8%E0%B2%BE%E0%B2%AF%E0%B2%BF%E0%B2%A4%E0%B3%81-%E0%B2%AA%E0%B3%8A%E0%B2%B2%E0%B3%80%E0%B2%B8%E0%B3%8D-%E0%B2%A4%E0%B2%A8%E0%B2%BF%E0%B2%96%E0%B3%86%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%B8%E0%B2%BF%E0%B2%95%E0%B3%8D%E0%B2%95%E0%B2%BF%E0%B2%A6%E0%B3%8D%E0%B2%A6%E0%B3%87%E0%B2%A8%E0%B3%81-%E0%B2%B8%E0%B2%BF%E0%B2%B8%E0%B2%BF%E0%B2%9F%E0%B2%BF%E0%B2%B5%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%B0%E0%B3%86%E0%B2%95%E0%B2%BE%E0%B2%B0%E0%B3%8D%E0%B2%A1%E0%B3%8D-%E0%B2%86%E0%B2%97%E0%B2%BF%E0%B2%B0%E0%B3%8B%E0%B2%A6%E0%B3%87%E0%B2%A8%E0%B3%81</guid>
<description><![CDATA[ ಇಂದು  ಬೆಳಿಗ್ಗೆಯಿಂದಲೇ ಬೆಂಗಳೂರಿನ ರಿಚ್ಮಂಡ್ ಸರ್ಕಲ್ ಬಳಿ ಇರುವ ಕಾನ್ಪಿಡೆಂಟ್ ಗ್ರೂಪ್ ಕಚೇರಿ ಮೇಲೆ ಐ.ಟಿ. ಇಲಾಖೆಯ ದಾಳಿ ನಡೆಯುತ್ತಿತ್ತು.  ಮಧ್ಯಾಹ್ನದ ಬಳಿಕ ಸಿ.ಜೆ. ರಾಯ್ ತಮ್ಮ ಕಾನ್ಪಿಡೆಂಟ್ ಗ್ರೂಪ್ ಕಚೇರಿಗೆ ಬಂದಿದ್ದರು. ಕಚೇರಿಗೆ  ಬಂದ ಕೂಡಲೇ  ಐ.ಟಿ. ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಸುಮಾರು ಒಂದು ಗಂಟೆಗಳ‌ ಕಾಲ ವಿಚಾರಣೆ ಮಾಡಿದ್ದರು.  ಈ ವೇಳೆ ಕೆಲ ದಾಖಲಾತಿಗಳನ್ನು  ಅಧಿಕಾರಿಗಳು ಕೇಳಿದ್ದರು.  ಬಳಿಕ ತಮ್ಮ ಕಚೇರಿಯ ಕೊಠಡಿಗೆ  ಸಿಜೆ ರಾಯ್ ಹೋಗಿದ್ದರು.  ದಾಖಲೆಗಳನ್ನು ತಂದು ಕೊಡುವುದಾಗಿ ಹೇಳಿ ಕೊಠಡಿಗೆ ಹೋಗಿದ್ದರು.  ಈ ವೇಳೆ ಪಿಸ್ತೂಲ್ ನಿಂದ ಸಿ.ಜೆ.ರಾಯ್ ಫೈರ್ ಮಾಡಿಕೊಂಡಿದ್ದಾರೆ.  ಕೂಡಲೇ ಐ.ಟಿ. ಅಧಿಕಾರಿಗಳು  ಸಿ.ಜೆ.ರಾಯ್ ಅವರನ್ನು  ಆಸ್ಪತ್ರೆಗೆ ರವಾನೆ ಮಾಡಿದ್ದರು. ಈ ವೇಳೆಗಾಗಲೇ ಸಿ.ಜೆ.ರಾಯ್ ಸಾವನ್ನಪ್ಪಿದ್ದರು. ತಮ್ಮ ಗನ್ ನಿಂದ  ಎದೆಗೆ ಫೈರ್ ಮಾಡಿಕೊಂಡು ಸಿ.ಜೆ. ರಾಯ್ ಸಾವನ್ನಪ್ಪಿದ್ದಾರೆ.  ಒಂದು ಬುಲೆಟ್ ಫೈರ್ ಮಾಡಿಕೊಂಡಿದ್ದಾರೆ. ಬಳಿಕ ಐ.ಟಿ. ಇಲಾಖೆ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ಕಾನ್ಪಿಡೆಂಟ್ ಗ್ರೂಪ್ ಕಚೇರಿಗೆ ಪೊಲೀಸರು ಆಗಮಿಸಿ, ಘಟನಾ ಸ್ಥಳದಲ್ಲಿ ತನಿಖೆ ನಡೆಸುತ್ತಿದ್ದಾರೆ. ಪೊಲೀಸರಿಂದ ಈ ಆತ್ಮಹತ್ಯೆ ಕೇಸ್ ಬಗ್ಗೆ ತನಿಖೆ ಆರಂಭವಾಗಿರುವುದರಿಂದ ಐ.ಟಿ. ಇಲಾಖೆ ಅಧಿಕಾರಿಗಳು ಕಾನ್ಪಿಡೆಂಟ್ ಗ್ರೂಪ್ ಕಚೇರಿಯಿಂದ ನಿರ್ಗಮಿಸಿದ್ದಾರೆ. ಕಾನ್ಪಿಡೆಂಟ್ ಕಚೇರಿಯಿಂದ 2 ಇನ್ನೋವಾ ಕಾರ್ ಗಳಲ್ಲಿ ದಾಖಲೆಗಳನ್ನು ತುಂಬಿಕೊಂಡು ಐ.ಟಿ. ಇಲಾಖೆ ಅಧಿಕಾರಿಗಳು ತೆರಳಿದ್ದಾರೆ. 
ಪೊಲೀಸರಿಂದ ತನಿಖೆ ಶುರು ಸಿಜೆ ರಾಯ್ ಕಚೇರಿ ಕೊಠಡಿಯ ಸಿಸಿ ಕ್ಯಾಮರಾವನ್ನು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ಪಿಸ್ತೂಲ್ ನಿಂದ ಫೈರ್ ಮಾಡಿಕೊಂಡಿರೋ ದೃಶ್ಯ ಪರಿಶೀಲನೆ ಮಾಡುತ್ತಿದ್ದಾರೆ.  ಈಗಾಗಲೇ ಫೈರ್ ಮಾಡಿಕೊಂಡ ಪಿಸ್ತೂಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಜೊತೆಗೆ ಸಿ.ಜೆ. ರಾಯ್ ಕೊಠಡಿ ಕೂಡ ಪರಿಶೀಲನೆ…ಮಾಡುತ್ತಿದ್ದಾರೆ.  ಯಾವುದಾದರೂ ಡೆತ್ ನೋಟ್ ಇದೆಯಾ ಅಂತ ಪರಿಶೀಲನೆ ಮಾಡುತ್ತಿದ್ದಾರೆ. ಜೊತೆಗೆ ಮೊಬೈಲ್ ನಲ್ಲಿ ಏನಾದ್ರೂ ನೋಟ್ ಇದೆಯೇ ಎಂದು ಮೊಬೈಲ್ ಅನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಸಿ.ಜೆ.ರಾಯ್ ಗುಂಡು ಹಾರಿಸಿಕೊಳ್ಳುವ ಮೊದಲು ಯಾರಿಗಾದರೂ ಏನಾದರೂ ಮೇಸೇಜ್ ಮಾಡಿದ್ದಾರಾ ಅಂತಾನೂ ಪರಿಶೀಲನೆ ಮಾಡುತ್ತಿದ್ದಾರೆ. …ಸದ್ಯ ಸಿಜೆ ರಾಯ್ ಮೊಬೈಲ್ ಸಹ ಪರಿಶೀಲನೆ ಮಾಡುತ್ತಿದ್ದಾರೆ.  ವಾಟ್ಸಾಪ್, ಫೇಸ್ ಬುಕ್, ಇನ್ಸ್ಟಾಗ್ರಾಂ, ಟ್ವಿಟರ್ ಕೂಡ ಪರಿಶೀಲನೆ ಮಾಡಲಾಗುತ್ತಿದ್ದಾರೆ.  ಖುದ್ದು ಡಿಸಿಪಿ ಅಕ್ಷಯ್ ಅವರೇ ತನಿಖೆ ಮಾಡುತ್ತಿದ್ದಾರೆ.ಕಚೇರಿಯ ವಾಶ್ ರೂಂ  ನಲ್ಲಿ ಸಿ.ಜೆ.ರಾಯ್  ಫೈರ್ ಮಾಡಿಕೊಂಡಿದ್ದಾರೆ.  ಒಂದೇ ಸುತ್ತು ಫೈರ್ ಮಾಡಿಕೊಂಡಿದ್ದಾರೆ.  ಎದೆಭಾಗಕ್ಕೆ ಲೈಸೆನ್ಸ್ ಪಿಸ್ತೂಲ್ ನಿಂದ ಗುಂಡು ಹಾರಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಸೋಕೋ ಟೀಂ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. 
ವಿಶೇಷ ಸೂಚನೆ: ಎಲ್ಲಾ DTH &amp; Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.  ]]></description>
<enclosure url="https://img-cdn.publive.online/fit-in/1280x960/newsfirstlive-kannada/media/media_files/2026/01/30/confident-group-owner-cj-roy-suicide-3-2026-01-30-18-46-56.jpg" length="49398" type="image/jpeg"/>
<pubDate>Thu, 12 Feb 2026 09:44:04 +0530</pubDate>
<dc:creator>Newsfirst</dc:creator>
<media:keywords>ಕಾನ್ಪಿಡೆಂಟ್, ಗ್ರೂಪ್‌, ಕಚೇರಿಯಲ್ಲಿ, ಇಂದು, ಏನೇನಾಯಿತು, ಪೊಲೀಸ್, ತನಿಖೆಯಲ್ಲಿ, ಸಿಕ್ಕಿದ್ದೇನು, ಸಿಸಿಟಿವಿಯಲ್ಲಿ, ರೆಕಾರ್ಡ್, ಆಗಿರೋದೇನು</media:keywords>
</item>

<item>
<title>ಬೆಂಗಳೂರು ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ಯಾಲೆಸ್ಟೈನ್ ಸಿನಿಮಾ ವಿವಾದ: ರಾಯಭಾರಿ ಪ್ರಕಾಶ್ ರಾಜ್ ಒತ್ತಾಯ ಏನು?</title>
<link>https://thinkerr.in/%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81-%E0%B2%87%E0%B2%82%E0%B2%9F%E0%B2%B0%E0%B3%8D-%E0%B2%A8%E0%B3%8D%E0%B2%AF%E0%B2%BE%E0%B2%B7%E0%B2%A8%E0%B2%B2%E0%B3%8D-%E0%B2%AB%E0%B2%BF%E0%B2%B2%E0%B3%8D%E0%B2%AE%E0%B3%8D-%E0%B2%AB%E0%B3%86%E0%B2%B8%E0%B3%8D%E0%B2%9F%E0%B2%BF%E0%B2%B5%E0%B2%B2%E0%B3%8D-%E0%B2%A8%E0%B2%B2%E0%B3%8D%E0%B2%B2%E0%B2%BF-%E0%B2%AA%E0%B3%8D%E0%B2%AF%E0%B2%BE%E0%B2%B2%E0%B3%86%E0%B2%B8%E0%B3%8D%E0%B2%9F%E0%B3%88%E0%B2%A8%E0%B3%8D-%E0%B2%B8%E0%B2%BF%E0%B2%A8%E0%B2%BF%E0%B2%AE%E0%B2%BE-%E0%B2%B5%E0%B2%BF%E0%B2%B5%E0%B2%BE%E0%B2%A6-%E0%B2%B0%E0%B2%BE%E0%B2%AF%E0%B2%AD%E0%B2%BE%E0%B2%B0%E0%B2%BF-%E0%B2%AA%E0%B3%8D%E0%B2%B0%E0%B2%95%E0%B2%BE%E0%B2%B6%E0%B3%8D-%E0%B2%B0%E0%B2%BE%E0%B2%9C%E0%B3%8D-%E0%B2%92%E0%B2%A4%E0%B3%8D%E0%B2%A4%E0%B2%BE%E0%B2%AF-%E0%B2%8F%E0%B2%A8%E0%B3%81</link>
<guid>https://thinkerr.in/%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81-%E0%B2%87%E0%B2%82%E0%B2%9F%E0%B2%B0%E0%B3%8D-%E0%B2%A8%E0%B3%8D%E0%B2%AF%E0%B2%BE%E0%B2%B7%E0%B2%A8%E0%B2%B2%E0%B3%8D-%E0%B2%AB%E0%B2%BF%E0%B2%B2%E0%B3%8D%E0%B2%AE%E0%B3%8D-%E0%B2%AB%E0%B3%86%E0%B2%B8%E0%B3%8D%E0%B2%9F%E0%B2%BF%E0%B2%B5%E0%B2%B2%E0%B3%8D-%E0%B2%A8%E0%B2%B2%E0%B3%8D%E0%B2%B2%E0%B2%BF-%E0%B2%AA%E0%B3%8D%E0%B2%AF%E0%B2%BE%E0%B2%B2%E0%B3%86%E0%B2%B8%E0%B3%8D%E0%B2%9F%E0%B3%88%E0%B2%A8%E0%B3%8D-%E0%B2%B8%E0%B2%BF%E0%B2%A8%E0%B2%BF%E0%B2%AE%E0%B2%BE-%E0%B2%B5%E0%B2%BF%E0%B2%B5%E0%B2%BE%E0%B2%A6-%E0%B2%B0%E0%B2%BE%E0%B2%AF%E0%B2%AD%E0%B2%BE%E0%B2%B0%E0%B2%BF-%E0%B2%AA%E0%B3%8D%E0%B2%B0%E0%B2%95%E0%B2%BE%E0%B2%B6%E0%B3%8D-%E0%B2%B0%E0%B2%BE%E0%B2%9C%E0%B3%8D-%E0%B2%92%E0%B2%A4%E0%B3%8D%E0%B2%A4%E0%B2%BE%E0%B2%AF-%E0%B2%8F%E0%B2%A8%E0%B3%81</guid>
<description><![CDATA[ ಬೆಂಗಳೂರು ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆರಂಭವಾಗಿದೆ. ಫಿಲ್ಮ್ ಫೆಸ್ಟಿವಲ್ ನಲ್ಲಿ ಸಿನಿಮಾಗಳ ಪ್ರದರ್ಶನ ನಡೆಯುತ್ತಿದೆ. ಆದರೇ, ಇದರ ಮಧ್ಯೆ ಫ್ಯಾಲೆಸ್ಟೈನ್ ಸಿನಿಮಾ ವಿಷಯವಾಗಿ ವಿವಾದವೂ ಶುರುವಾಗಿದೆ. ಬೆಂಗಳೂರು ಇಂಟರ್ ನ್ಯಾಷನಲ್‌  ಫಿಲ್ಮ್ ಫೆಸ್ಟಿವಲ್ ಅಂದ್ರೆ ಅಲ್ಲಿ ಬರೀ ಬಣ್ಣದ ಲೋಕ ಮಾತ್ರ ಇರಲ್ಲ, ಜಗತ್ತಿನ ಕಹಿ ಸತ್ಯಗಳೂ ಇರುತ್ತಾವೆ. ಆದ್ರೆ ಈ ಬಾರಿ ಬೆಂಗಳೂರಿನಲ್ಲಿ ಪ್ರದರ್ಶನವಾಗಬೇಕಿದ್ದ &#039;ಪ್ಯಾಲೇಸ್ತೈನ್&#039; ಕಥೆಗಳಿಗೆ ಡೆಲ್ಲಿಯಿಂದ ಬ್ರೇಕ್ ಬಿದ್ದಿದೆ! &quot;ಗಾಜಾದ ಜನರ ಕಣ್ಣೀರು ಬೆಂಗಳೂರಿಗೆ ಬೇಡ&quot; ಅಂತ ಕೇಂದ್ರ ಸರ್ಕಾರ ಅಡ್ಡಗಾಲು ಹಾಕಿದ್ಯಾ? ರಾಯಭಾರಿ ಪ್ರಕಾಶ್ ರಾಜ್ ಕೆಂಡಾಮಂಡಲ ಆಗಿರೋದ್ಯಾಕೆ? ಕಂಪ್ಲೀಟ್ ರಿಪೋರ್ಟ್ ನಿಮ್ಮ ಮುಂದೆ..
ಸಿನಿಮಾ ಅಂದ್ರೆ ಬರೀ ಫೈಟು, ಹಾಡು ಅಷ್ಟೇ ಅಲ್ಲ.. ನೋವಿನ ಕಥೆಗಳೂ ಇರ್ತವೆ. ಬೆಂಗಳೂರಿನ 17ನೇ ಚಲನಚಿತ್ರೋತ್ಸವದಲ್ಲಿ ಈ ಭಾರಿ ಪ್ಯಾಲೇಸ್ತೈನ್ ದೇಶದ ಜನರ ಸಂಕಷ್ಟದ ಕಥೆಗಳನ್ನ ಹೇಳೋ ಸಿನಿಮಾಗಳು ಪ್ರದರ್ಶನವಾಗಬೇಕಿತ್ತು. ಆದ್ರೆ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಇವುಗಳಿಗೆ &#039;ನೋ&#039; ಅಂದಿದೆ. ಸೆನ್ಸಾರ್ ವಿನಾಯಿತಿ ಕೊಡೋಕೆ ಹಿಂದೇಟು ಹಾಕಿದೆ. ಅಲ್ಲಿಗೆ ಪ್ಯಾಲೇಸ್ತೈನ್ ಜನರ ಧ್ವನಿ ಸಿನೆಮಾ ಪರದೆಯ ಮೇಲೆ ಮೂಡೋಕೆ ಮುನ್ನವೇ ಮೌನವಾಗಿದೆ!
ಇದೇ ವಿಚಾರ ಇಟ್ಕೊಂಡು ಪ್ರಕಾಶ್ ರಾಜ್ ಈಗ ಅಖಾಡಕ್ಕೆ ಇಳಿದಿದ್ದಾರೆ. &quot;ನೋಡಿ.. ಪ್ಯಾಲೇಸ್ತೈನ್‌ನಲ್ಲಿ ಜನ ಸಾಯ್ತಿದ್ದಾರೆ, ಆ ನೋವನ್ನ ಇಲ್ಲಿ ತೋರಿಸೋಕೆ ಕೇಂದ್ರಕ್ಕೆ ಯಾಕೆ ಭಯ? ಕೇರಳದವರು ಗಂಡಸ್ತನ ತೋರಿಸಿ ಸಿನಿಮಾಗಳನ್ನ ಪ್ರದರ್ಶನ ಮಾಡಿದ್ದಾರೆ. ನಮ್ಮ ಸಿದ್ದರಾಮಯ್ಯ ಸರ್ಕಾರ ಕೂಡ ಅದೇ ರೀತಿ ಗಟ್ಟಿಯಾದ ನಿರ್ಧಾರ ತಗೋಬೇಕು&quot; ಅಂತ ನೇರವಾಗಿಯೇ ಸವಾಲು ಹಾಕಿದ್ದಾರೆ.


ಈ ವಿವಾದ ಈಗ ಬರೀ ಸಿನಿಮಾಗೆ ಸೀಮಿತವಾಗಿಲ್ಲ. ಇದೊಂದು ಪೊಲಿಟಿಕಲ್ ಫೈಟ್ ಆಗಿ ಬದಲಾಗಿದೆ. ಯಾಕಂದ್ರೆ, ವಿಶ್ವಸಂಸ್ಥೆಯಲ್ಲಿ ಪ್ಯಾಲೇಸ್ತೈನ್ ಪರ ವೋಟ್ ಹಾಕೋ ಮೋದಿ ಸರ್ಕಾರ, ಅದೇ ಪ್ಯಾಲೇಸ್ತೈನ್ ಸಿನಿಮಾ ತೋರಿಸೋಕೆ ಯಾಕೆ ತಡೆ ಹಿಡಿತಿದೆ ಅನ್ನೋದು ಸದ್ಯದ ಪ್ರಶ್ನೆ. ಸಿಎಂ ಸಿದ್ದರಾಮಯ್ಯ ಕೂಡ ಈ ಬಗ್ಗೆ ಸಾಫ್ಟ್ ಆಗಿಯೇ ಬ್ಯಾಟಿಂಗ್ ಮಾಡಿದ್ದು, ಸಿನಿಮಾ ಸಮಾಜದ ಕನ್ನಡಿ ಆಗಿರಬೇಕು ಅಂದಿದ್ದಾರೆ.ಒಂದ್ಕಡೆ ಕಲಾ ಪ್ರೇಮಿಗಳು ಸಿನಿಮಾ ಪ್ರದರ್ಶನ ಆಗಲಿ ಅಂತಿದ್ದಾರೆ. ಇನ್ನೊಂದ್ಕಡೆ ಕೇಂದ್ರ ಸರ್ಕಾರದ ಈ ನಿರ್ಬಂಧ ರಾಜತಾಂತ್ರಿಕ ಕಾರಣಕ್ಕಾ ಅಥವಾ ರಾಜಕೀಯಕ್ಕಾ ಅನ್ನೋ ಚರ್ಚೆ ಜೋರಾಗಿದೆ. ಕೇರಳದ ಹಾದಿಯಲ್ಲಿ ಕರ್ನಾಟಕ ಕೂಡ ಬಂಡಾಯ ಎದ್ದು ಈ ಸಿನಿಮಾಗಳನ್ನ ಪ್ರದರ್ಶನ ಮಾಡುತ್ತಾ? ಅಥವಾ ಕೇಂದ್ರದ ಆದೇಶಕ್ಕೆ ಶರಣಾಗುತ್ತಾ?  ಪ್ಯಾಲೇಸ್ತೈನ್ ಜನರ ಕಣ್ಣೀರಿಗೆ ಬೆಂಗಳೂರಿನಲ್ಲಿ ಬೆಲೆ ಸಿಗುತ್ತಾ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ.ವಿಶೇಷ ಸೂಚನೆ: ಎಲ್ಲಾ DTH &amp; Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.  ]]></description>
<enclosure url="https://img-cdn.publive.online/fit-in/1280x960/newsfirstlive-kannada/media/media_files/2026/01/30/bangalore-film-festival-2026-01-30-16-34-12.jpg" length="49398" type="image/jpeg"/>
<pubDate>Thu, 12 Feb 2026 09:44:04 +0530</pubDate>
<dc:creator>Newsfirst</dc:creator>
<media:keywords>ಬೆಂಗಳೂರು, ಇಂಟರ್, ನ್ಯಾಷನಲ್, ಫಿಲ್ಮ್, ಫೆಸ್ಟಿವಲ್, ನಲ್ಲಿ, ಪ್ಯಾಲೆಸ್ಟೈನ್, ಸಿನಿಮಾ, ವಿವಾದ:, ರಾಯಭಾರಿ, ಪ್ರಕಾಶ್, ರಾಜ್, ಒತ್ತಾಯ, ಏನು</media:keywords>
</item>

<item>
<title>ಮಾರ್ಚ್ ತಿಂಗಳಲ್ಲಿ ದರ್ಶನ್ ಬಿಡುಗಡೆ.. ರಚಿತಾ ರಾಮ್ ರಿಯಾಕ್ಷನ್!</title>
<link>https://thinkerr.in/%E0%B2%AE%E0%B2%BE%E0%B2%B0%E0%B3%8D%E0%B2%9A%E0%B3%8D-%E0%B2%A4%E0%B2%BF%E0%B2%82%E0%B2%97%E0%B2%B3%E0%B2%B2%E0%B3%8D%E0%B2%B2%E0%B2%BF-%E0%B2%A6%E0%B2%B0%E0%B3%8D%E0%B2%B6%E0%B2%A8%E0%B3%8D-%E0%B2%AC%E0%B2%BF%E0%B2%A1%E0%B3%81%E0%B2%97%E0%B2%A1%E0%B3%86-%E0%B2%B0%E0%B2%9A%E0%B2%BF%E0%B2%A4%E0%B2%BE-%E0%B2%B0%E0%B2%BE%E0%B2%AE%E0%B3%8D-%E0%B2%B0%E0%B2%BF%E0%B2%AF%E0%B2%BE%E0%B2%95%E0%B3%8D%E0%B2%B7%E0%B2%A8%E0%B3%8D</link>
<guid>https://thinkerr.in/%E0%B2%AE%E0%B2%BE%E0%B2%B0%E0%B3%8D%E0%B2%9A%E0%B3%8D-%E0%B2%A4%E0%B2%BF%E0%B2%82%E0%B2%97%E0%B2%B3%E0%B2%B2%E0%B3%8D%E0%B2%B2%E0%B2%BF-%E0%B2%A6%E0%B2%B0%E0%B3%8D%E0%B2%B6%E0%B2%A8%E0%B3%8D-%E0%B2%AC%E0%B2%BF%E0%B2%A1%E0%B3%81%E0%B2%97%E0%B2%A1%E0%B3%86-%E0%B2%B0%E0%B2%9A%E0%B2%BF%E0%B2%A4%E0%B2%BE-%E0%B2%B0%E0%B2%BE%E0%B2%AE%E0%B3%8D-%E0%B2%B0%E0%B2%BF%E0%B2%AF%E0%B2%BE%E0%B2%95%E0%B3%8D%E0%B2%B7%E0%B2%A8%E0%B3%8D</guid>
<description><![CDATA[ ಬೆಂಗಳೂರು: ಸ್ಯಾಂಡಲ್‌ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಿಡುಗಡೆಯ ಬಗ್ಗೆ ದಿನಕ್ಕೊಂದು ಸುದ್ದಿಗಳು ಹರಿದಾಡುತ್ತಿವೆ. ಮಾರ್ಚ್ ತಿಂಗಳಲ್ಲಿ ದರ್ಶನ್ ಜೈಲಿನಿಂದ ಹೊರಬರಲಿದ್ದಾರೆ ಎಂಬ ಬಲವಾದ ವದಂತಿಗಳು ಕೇಳಿಬರುತ್ತಿವೆ. ಈ ಬಗ್ಗೆ ನಟಿ ರಚಿತಾ ರಾಮ್ ಪ್ರತಿಕ್ರಿಯಿಸಿದ್ದು, ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.
ನಾನು ಈಗಷ್ಟೇ ಕೇಳಿಪಟ್ಟೆ, ತುಂಬಾ ಖುಷಿಯಾಯ್ತು
ದರ್ಶನ್ ಅವರು ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂಬ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ರಚಿತಾ ರಾಮ್, &quot;ನಾನು ಕೂಡ ಈ ವಿಚಾರವನ್ನು ಈಗಷ್ಟೇ ಕೇಳಿಪಟ್ಟೆ. ದರ್ಶನ್ ಸರ್ ಮಾರ್ಚ್ ತಿಂಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆಯಿದೆ ಎಂಬ ಸುದ್ದಿ ನಿಜವಾದರೆ ನಾನು ಎಲ್ಲರಿಗಿಂತ ಹೆಚ್ಚು ಖುಷಿಪಡುತ್ತೇನೆ. ಅವರ ಬರುವಿಕೆಗಾಗಿ ನಾವೆಲ್ಲರೂ ಕಾಯುತ್ತಿದ್ದೇವೆ&quot; ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಭಿಮಾನಿಗಳ ತಲೆಗೆ ಹುಳು ಬಿಟ್ಟ KL ರಾಹುಲ್; ನಿವೃತ್ತಿ ಬಗ್ಗೆ ಕನ್ನಡಿಗ ಓಪನ್​ ಟಾಕ್..!

&quot;ಅದೊಂದು ಊಹೆ ಮಾಡದ ಘಟನೆ&quot;
ದರ್ಶನ್ ಅವರ ಜೈಲುವಾಸದ ಬಗ್ಗೆ ಮಾತನಾಡುತ್ತಾ ಭಾವುಕರಾದ ರಚಿತಾ, &quot;ದರ್ಶನ್ ಸರ್ ಜೈಲು ಪಾಲಾಗುತ್ತಾರೆ ಎಂದು ನಾವು ಯಾರೂ ಕನಸಿನಲ್ಲೂ ಊಹೆ ಮಾಡಿರಲಿಲ್ಲ. ಅದೊಂದು ಅತ್ಯಂತ ಅನಿರೀಕ್ಷಿತ ಘಟನೆ. ಅವರ ವಿಚಾರ ಬಂದಾಗಲೆಲ್ಲಾ ನಾನು ತುಂಬಾ ಎಮೋಷನಲ್ ಆಗುತ್ತೇನೆ. ಅವರು ಮತ್ತೆ ಬಂದರೆ ಕನ್ನಡ ಚಿತ್ರರಂಗಕ್ಕೆ ಒಂದು ಕಳೆ ಬರುತ್ತದೆ&quot; ಎಂದು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.
ಮುಂದೆಯೂ ದರ್ಶನ್ ಜೊತೆ ನಟಿಸುವ ಆಸೆ!
ದರ್ಶನ್ ಮತ್ತು ರಚಿತಾ ರಾಮ್ ಕೆಮಿಸ್ಟ್ರಿ &#039;ಬುಲ್ ಬುಲ್&#039; ಸಿನಿಮಾ ಕಾಲದಿಂದಲೂ ಪ್ರೇಕ್ಷಕರಿಗೆ ನೆಚ್ಚಿನದ್ದು. &quot;ನಾವು ಭೇಟಿಯಾದಾಗಲೆಲ್ಲಾ ಹೆಚ್ಚಾಗಿ ಸಿನಿಮಾಗಳ ಬಗ್ಗೆಯೇ ಚರ್ಚೆ ಮಾಡುತ್ತಿದ್ದೆವು. ಅವರ ದೊಡ್ಡ ಗುಣವೇ ಅದು. ಮುಂದಿನ ದಿನಗಳಲ್ಲಿ ಮತ್ತೆ ಅವರ ಜೊತೆ ತೆರೆ ಹಂಚಿಕೊಳ್ಳುವ ಆಸೆ ನನಗಿದೆ&quot; ಎಂದು ರಚಿತಾ ರಾಮ್ ಭರವಸೆ ವ್ಯಕ್ತಪಡಿಸಿದ್ದಾರೆ.
ಅಭಿಮಾನಿಗಳಲ್ಲಿ ಹೆಚ್ಚಿದ ನಿರೀಕ್ಷೆ
ಕಳೆದ ಕೆಲವು ತಿಂಗಳಿಂದ ಜೈಲಿನಲ್ಲಿರುವ ದರ್ಶನ್ ಅವರ ಜಾಮೀನು ಪ್ರಕ್ರಿಯೆಗಳ ಬಗ್ಗೆ ವಕೀಲರು ಪ್ರಯತ್ನ ನಡೆಸುತ್ತಿದ್ದಾರೆ. ಮಾರ್ಚ್ ತಿಂಗಳೊಳಗೆ ದರ್ಶನ್ ಹೊರಬರಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿರುವುದು ಅವರ ಲಕ್ಷಾಂತರ ಅಭಿಮಾನಿಗಳಲ್ಲಿ ಹೊಸ ಆಸೆ ಚಿಗುರಿಸಿದೆ. ರಚಿತಾ ರಾಮ್ ಅವರ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಡಿ-ಬಾಸ್ ಅಭಿಮಾನಿಗಳು &quot;ಮಾರ್ಚ್‌ಗಾಗಿ ಕಾಯುತ್ತಿದ್ದೇವೆ&quot; ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಅಲೋಕ್ ಕುಮಾರ್ ಎಂಟ್ರಿ, ಅಧಿಕಾರಿಗಳ ಕಳ್ಳಾಟ ಬಯಲು.. ದರ್ಶನ್ ವಿಚಾರದಲ್ಲಿ ಮತ್ತೇನಾಯ್ತು..?
ವಿಶೇಷ ಸೂಚನೆ: ಎಲ್ಲಾ DTH &amp; Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ ]]></description>
<enclosure url="https://img-cdn.publive.online/fit-in/1280x960/newsfirstlive-kannada/media/media_files/2026/01/29/darshan-and-rachita-ram-2026-01-29-15-46-03.jpg" length="49398" type="image/jpeg"/>
<pubDate>Thu, 12 Feb 2026 09:44:04 +0530</pubDate>
<dc:creator>Newsfirst</dc:creator>
<media:keywords>ಮಾರ್ಚ್, ತಿಂಗಳಲ್ಲಿ, ದರ್ಶನ್, ಬಿಡುಗಡೆ.., ರಚಿತಾ, ರಾಮ್, ರಿಯಾಕ್ಷನ್</media:keywords>
</item>

<item>
<title>ಅಲೋಕ್ ಕುಮಾರ್ ಎಂಟ್ರಿ, ಅಧಿಕಾರಿಗಳ ಕಳ್ಳಾಟ ಬಯಲು.. ದರ್ಶನ್ ವಿಚಾರದಲ್ಲಿ ಮತ್ತೇನಾಯ್ತು..?</title>
<link>https://thinkerr.in/%E0%B2%85%E0%B2%B2%E0%B3%8B%E0%B2%95%E0%B3%8D-%E0%B2%95%E0%B3%81%E0%B2%AE%E0%B2%BE%E0%B2%B0%E0%B3%8D-%E0%B2%8E%E0%B2%82%E0%B2%9F%E0%B3%8D%E0%B2%B0%E0%B2%BF-%E0%B2%85%E0%B2%A7%E0%B2%BF%E0%B2%95%E0%B2%BE%E0%B2%B0%E0%B2%BF%E0%B2%97%E0%B2%B3-%E0%B2%95%E0%B2%B3%E0%B3%8D%E0%B2%B3%E0%B2%BE%E0%B2%9F-%E0%B2%AC%E0%B2%AF%E0%B2%B2%E0%B3%81-%E0%B2%A6%E0%B2%B0%E0%B3%8D%E0%B2%B6%E0%B2%A8%E0%B3%8D-%E0%B2%B5%E0%B2%BF%E0%B2%9A%E0%B2%BE%E0%B2%B0%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%AE%E0%B2%A4%E0%B3%8D%E0%B2%A4%E0%B3%87%E0%B2%A8%E0%B2%BE%E0%B2%AF%E0%B3%8D%E0%B2%A4%E0%B3%81</link>
<guid>https://thinkerr.in/%E0%B2%85%E0%B2%B2%E0%B3%8B%E0%B2%95%E0%B3%8D-%E0%B2%95%E0%B3%81%E0%B2%AE%E0%B2%BE%E0%B2%B0%E0%B3%8D-%E0%B2%8E%E0%B2%82%E0%B2%9F%E0%B3%8D%E0%B2%B0%E0%B2%BF-%E0%B2%85%E0%B2%A7%E0%B2%BF%E0%B2%95%E0%B2%BE%E0%B2%B0%E0%B2%BF%E0%B2%97%E0%B2%B3-%E0%B2%95%E0%B2%B3%E0%B3%8D%E0%B2%B3%E0%B2%BE%E0%B2%9F-%E0%B2%AC%E0%B2%AF%E0%B2%B2%E0%B3%81-%E0%B2%A6%E0%B2%B0%E0%B3%8D%E0%B2%B6%E0%B2%A8%E0%B3%8D-%E0%B2%B5%E0%B2%BF%E0%B2%9A%E0%B2%BE%E0%B2%B0%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%AE%E0%B2%A4%E0%B3%8D%E0%B2%A4%E0%B3%87%E0%B2%A8%E0%B2%BE%E0%B2%AF%E0%B3%8D%E0%B2%A4%E0%B3%81</guid>
<description><![CDATA[ ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ನೋಡುವ ಹಂಬಲ ಇದೀಗ ಪೊಲೀಸರಿಗೇ ಮುಳುವಾಗಿದೆ. ನಿಯಮ ಮೀರಿ ದರ್ಶನ್ ಅವರನ್ನು ನೋಡಲು ಹೋದ ಯಲಹಂಕ ಮೂಲದ ಪೊಲೀಸ್ ಕಾನ್​ಸ್ಟೇಬಲ್ ಹಾಗೂ ಅವರಿಗೆ ಸಾಥ್ ನೀಡಿದ ಜೈಲು ವಾರ್ಡನ್ ವಿರುದ್ಧ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಕಠಿಣ ಕ್ರಮ ಕೈಗೊಂಡಿದ್ದಾರೆ.
ನಡೆದಿದ್ದೇನು?
ಕಳೆದ ಜನವರಿ 24 ರಂದು ಯಲಹಂಕ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಒಬ್ಬರು ಬೇರೊಂದು ಪ್ರಕರಣದ ಆರೋಪಿಗಳನ್ನು ಜೈಲಿಗೆ ಬಿಡಲು ಪರಪ್ಪನ ಅಗ್ರಹಾರಕ್ಕೆ ಬಂದಿದ್ದರು. ಈ ವೇಳೆ ಜೈಲಿನಲ್ಲಿ ಕೆಲಸ ಮಾಡುತ್ತಿದ್ದ ವಾರ್ಡರ್ ಪ್ರಭಾಕರ್ ಚೌಹಾನ್ ಬಳಿ, &quot;ನನಗೆ ನಟ ದರ್ಶನ್ ಅವರನ್ನು ನೋಡಬೇಕು, ತೋರಿಸಿ&quot; ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಒಪ್ಪಿದ ಪ್ರಭಾಕರ್, ಸಿಸಿಟಿವಿ ಕ್ಯಾಮರಾಗಳ ಕಣ್ಣು ತಪ್ಪಿಸಿ ರಹಸ್ಯವಾಗಿ ಪೇದೆಯನ್ನು ದರ್ಶನ್ ಇದ್ದ ಬ್ಯಾರಕ್‌ ಬಳಿ ಕರೆದೊಯ್ದಿದ್ದಾರೆ.
ಅಲೋಕ್ ಕುಮಾರ್ ಎಂಟ್ರಿ - ಕಳ್ಳಾಟ ಬಯಲು!
ಜನವರಿ 26 ರಂದು ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಅವರು ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ದರ್ಶನ್ ಅವರನ್ನು ವಿಚಾರಣೆಗೆ ಒಳಪಡಿಸಿದಾಗ, &quot;ಯಾರೋ ಖಾಕಿ ಬಟ್ಟೆ ಹಾಕಿಕೊಂಡವರು ಬಂದು ನನ್ನನ್ನು ನೋಡಿ ಹೋದರು&quot; ಎಂದು ದರ್ಶನ್ ಹೇಳಿಕೆ ನೀಡಿದ್ದಾರೆ. ಇದರಿಂದ ಅನುಮಾನಗೊಂಡ ಡಿಜಿಪಿ, ಸಿಸಿಟಿವಿ ದೃಶ್ಯಾವಳಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಪೊಲೀಸರ ಈ ಕಳ್ಳಾಟ ಬಯಲಾಗಿದೆ.
ಇದನ್ನೂ ಓದಿ: ಹೆಂಡತಿಯ ಒಡವೆ ಅಡ ಇಟ್ಟಿದ್ದೆ, ಕಾರು ಖರೀದಿಸಿ ವಾರವೂ ಆಗಿರಲಿಲ್ಲ -ಮಯೂರ್ ಪಾಟೀಲ್ ಅಪಘಾತದಲ್ಲಿ ಸಂತ್ರಸ್ತ ಕಣ್ಣೀರು..!
ವಾರ್ಡನ್ ಚಾಮರಾಜನಗರಕ್ಕೆ ವರ್ಗಾವಣೆ
ಸಿಸಿಟಿವಿ ದೃಶ್ಯಾವಳಿಗಳಲ್ಲಿ ಪೇದೆಯ ಚಲನವಲನ ಹಾಗೂ ವಾರ್ಡರ್ ಪ್ರಭಾಕರ್ ಆತನಿಗೆ ಸಹಾಯ ಮಾಡುತ್ತಿರುವುದು ಸ್ಪಷ್ಟವಾಗಿ ಸೆರೆಯಾಗಿದೆ. ಜೈಲಿನ ನಿಯಮಗಳನ್ನು ಗಾಳಿಗೆ ತೂರಿದ ಹಿನ್ನೆಲೆಯಲ್ಲಿ ವಾರ್ಡರ್ ಪ್ರಭಾಕರ್ ಚೌಹಾನ್ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಚಾಮರಾಜನಗರ ಜೈಲಿಗೆ ವರ್ಗಾವಣೆ ಮಾಡಲಾಗಿದೆ. ಅವರ ವಿರುದ್ಧ ಇಲಾಖಾ ತನಿಖೆಗೂ ಆದೇಶಿಸಲಾಗಿದೆ.
ಪೇದೆ ವಿರುದ್ಧವೂ ಕ್ರಮಕ್ಕೆ ಸೂಚನೆ
ಕೇವಲ ಜೈಲು ಸಿಬ್ಬಂದಿ ಮಾತ್ರವಲ್ಲದೆ, ಅನಧಿಕೃತವಾಗಿ ದರ್ಶನ್ ನೋಡಲು ಹೋದ ಯಲಹಂಕದ ಪೊಲೀಸ್ ಪೇದೆಯ ವಿರುದ್ಧವೂ ಶಿಸ್ತು ಕ್ರಮ ಜರುಗಿಸುವಂತೆ ಈಶಾನ್ಯ ವಿಭಾಗದ ಡಿಸಿಪಿಗೆ ಅಲೋಕ್ ಕುಮಾರ್ ಅವರು ಖಡಕ್ ಸೂಚನೆ ನೀಡಿದ್ದಾರೆ. ಜೈಲಿನೊಳಗೆ ಎಷ್ಟೇ ದೊಡ್ಡ ಸೆಲೆಬ್ರಿಟಿ ಇದ್ದರೂ ನಿಯಮಗಳು ಎಲ್ಲರಿಗೂ ಒಂದೇ ಎಂಬ ಸಂದೇಶವನ್ನು ಡಿಜಿಪಿ ಅಲೋಕ್ ಕುಮಾರ್ ಈ ಕ್ರಮದ ಮೂಲಕ ರವಾನಿಸಿದ್ದಾರೆ. ಈ ಘಟನೆಯು ಪೊಲೀಸ್ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಸರಣಿ ಅಪಘಾತ ಎಸಗಿದ ನಟ ಮಯೂರ್ ಪಟೇಲ್ ವಿರುದ್ಧ ಎಫ್‌ಐಆರ್..!
ವಿಶೇಷ ಸೂಚನೆ: ಎಲ್ಲಾ DTH &amp; Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ ]]></description>
<enclosure url="https://img-cdn.publive.online/fit-in/1280x960/newsfirstlive-kannada/media/media_files/2026/01/29/alok-kumar-2026-01-29-10-04-28.jpg" length="49398" type="image/jpeg"/>
<pubDate>Thu, 12 Feb 2026 09:44:04 +0530</pubDate>
<dc:creator>Newsfirst</dc:creator>
<media:keywords>ಅಲೋಕ್, ಕುಮಾರ್, ಎಂಟ್ರಿ, ಅಧಿಕಾರಿಗಳ, ಕಳ್ಳಾಟ, ಬಯಲು.., ದರ್ಶನ್, ವಿಚಾರದಲ್ಲಿ, ಮತ್ತೇನಾಯ್ತು..</media:keywords>
</item>

<item>
<title>ಸರಣಿ ಅಪಘಾತ ಎಸಗಿದ ನಟ ಮಯೂರ್ ಪಟೇಲ್ ವಿರುದ್ಧ ಎಫ್‌ಐಆರ್..!</title>
<link>https://thinkerr.in/%E0%B2%B8%E0%B2%B0%E0%B2%A3%E0%B2%BF-%E0%B2%85%E0%B2%AA%E0%B2%98%E0%B2%BE%E0%B2%A4-%E0%B2%8E%E0%B2%B8%E0%B2%97%E0%B2%BF%E0%B2%A6-%E0%B2%A8%E0%B2%9F-%E0%B2%AE%E0%B2%AF%E0%B3%82%E0%B2%B0%E0%B3%8D-%E0%B2%AA%E0%B2%9F%E0%B3%87%E0%B2%B2%E0%B3%8D-%E0%B2%B5%E0%B2%BF%E0%B2%B0%E0%B3%81%E0%B2%A6%E0%B3%8D%E0%B2%A7-%E0%B2%8E%E0%B2%AB%E0%B3%8D%E0%B2%90%E0%B2%86%E0%B2%B0%E0%B3%8D</link>
<guid>https://thinkerr.in/%E0%B2%B8%E0%B2%B0%E0%B2%A3%E0%B2%BF-%E0%B2%85%E0%B2%AA%E0%B2%98%E0%B2%BE%E0%B2%A4-%E0%B2%8E%E0%B2%B8%E0%B2%97%E0%B2%BF%E0%B2%A6-%E0%B2%A8%E0%B2%9F-%E0%B2%AE%E0%B2%AF%E0%B3%82%E0%B2%B0%E0%B3%8D-%E0%B2%AA%E0%B2%9F%E0%B3%87%E0%B2%B2%E0%B3%8D-%E0%B2%B5%E0%B2%BF%E0%B2%B0%E0%B3%81%E0%B2%A6%E0%B3%8D%E0%B2%A7-%E0%B2%8E%E0%B2%AB%E0%B3%8D%E0%B2%90%E0%B2%86%E0%B2%B0%E0%B3%8D</guid>
<description><![CDATA[ ಬೆಂಗಳೂರು: ಮದ್ಯದ ಅಮಲಿನಲ್ಲಿ ಸರಣಿ ಅಪಘಾತ ಎಸಗಿದ ಆರೋಪದ ಮೇಲೆ ಸ್ಯಾಂಡಲ್‌ವುಡ್ ನಟ ಮಯೂರ್ ಪಟೇಲ್ ವಿರುದ್ಧ ಈಗ ಅಧಿಕೃತವಾಗಿ ಎಫ್‌ಐಆರ್ (FIR) ದಾಖಲಾಗಿದೆ. ಕಳೆದ ರಾತ್ರಿ ಬೆಂಗಳೂರಿನ ಹಲಸೂರಿನಲ್ಲಿ ನಡೆದ ಈ ಭೀಕರ ಅಪಘಾತ ಪ್ರಕರಣ ಈಗ ಕಾನೂನು ಸಂಕಷ್ಟಕ್ಕೆ ತಿರುಗಿದ್ದು, ನಟನ ವಿರುದ್ಧ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಸ್ಯಾಂಡಲ್​ವುಡ್ ನಟನಿಂದ ಡ್ರಿಂಕ್ &amp; ಡ್ರೈವ್ ಅಪಘಾತ.. ಇನ್ಸೂರೆನ್ಸ್ ಕೂಡ ಲ್ಯಾಪ್ಸ್..!

ನಟನ ವಿರುದ್ಧ ದಾಖಲಾದ ಸೆಕ್ಷನ್‌ಗಳು ಯಾವುವು?
ಹಲಸೂರು ಸಂಚಾರ ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ನಟ ಮಯೂರ್ ಪಟೇಲ್ ವಿರುದ್ಧ ಈ ಕೆಳಗಿನ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

BNS 285: ಸಾರ್ವಜನಿಕ ರಸ್ತೆಯಲ್ಲಿ ಅಜಾಗರೂಕತೆಯಿಂದ ವಾಹನ ಚಲಾಯಿಸಿ ಇತರರ ಜೀವಕ್ಕೆ ಅಪಾಯ ತಂದೊಡ್ಡುವುದು.
IMV 185: ಮದ್ಯಪಾನ ಮಾಡಿ ವಾಹನ ಚಲಾಯಿಸುವುದು (Drink and Drive).

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್‌ಗೆ ಬ್ರೇಕ್ ಹಾಕಲು ಸಂಚಾರಿ ಪೊಲೀಸರ ಮಾಸ್ಟರ್ ಪ್ಲಾನ್: ಪಾಲಿಕೆಗೆ ಸಲ್ಲಿಕೆಯಾಯ್ತು ಬೃಹತ್ ಪಟ್ಟಿ!

ಏನಿದು ಘಟನೆ?
ಬುಧವಾರ ರಾತ್ರಿ ಸುಮಾರು 10 ಗಂಟೆಗೆ ನಟ ಮಯೂರ್ ಪಟೇಲ್ ತಮ್ಮ ಫಾರ್ಚೂನರ್ ಕಾರನ್ನು ತಾವೇ ಚಲಾಯಿಸಿಕೊಂಡು ಅತೀ ವೇಗವಾಗಿ ಬರುತ್ತಿದ್ದರು. ಹಲಸೂರು ಸಮೀಪ ನಿಯಂತ್ರಣ ತಪ್ಪಿದ ಕಾರು ರಸ್ತೆಯಲ್ಲಿದ್ದ ಎರಡು ಸ್ವಿಫ್ಟ್ ಡಿಜೈರ್ ಮತ್ತು ಒಂದು ಸರ್ಕಾರಿ ವಾಹನ ಸೇರಿದಂತೆ ಒಟ್ಟು ನಾಲ್ಕು ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಯೂರ್ ಪಟೇಲ್‌ಗೆ ಡಿಡಿ (DD) ತಪಾಸಣೆ ನಡೆಸಿದಾಗ ಮದ್ಯ ಸೇವಿಸಿರುವುದು ಪಾಸಿಟಿವ್ ಬಂದಿದೆ. ಜೊತೆಗೆ ಅವರು ಚಲಾಯಿಸುತ್ತಿದ್ದ ಕಾರಿನ ಇನ್ಸೂರೆನ್ಸ್ ಕೂಡ ಲ್ಯಾಪ್ಸ್ ಆಗಿರುವುದು ಪತ್ತೆಯಾಗಿದೆ.
ಕಾರು ಸೀಜ್, ಕಾನೂನು ಕ್ರಮ
ಅಪಘಾತದ ತೀವ್ರತೆಗೆ ವಾಹನಗಳು ಪೂರ್ಣ ಜಖಂಗೊಂಡಿದ್ದು, ಪೊಲೀಸರು ಮಯೂರ್ ಪಟೇಲ್ ಅವರ ಫಾರ್ಚೂನರ್ ಕಾರನ್ನು ಸೀಜ್ ಮಾಡಿದ್ದಾರೆ. ಸದ್ಯ ಹಲಸೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ತನಿಖೆ ಮುಂದುವರಿದಿದ್ದು, ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. 
ಇದನ್ನೂ ಓದಿ: ಹೆಂಡತಿಯ ಒಡವೆ ಅಡ ಇಟ್ಟಿದ್ದೆ, ಕಾರು ಖರೀದಿಸಿ ವಾರವೂ ಆಗಿರಲಿಲ್ಲ -ಮಯೂರ್ ಪಾಟೀಲ್ ಅಪಘಾತದಲ್ಲಿ ಸಂತ್ರಸ್ತ ಕಣ್ಣೀರು..!
ವಿಶೇಷ ಸೂಚನೆ: ಎಲ್ಲಾ DTH &amp; Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ ]]></description>
<enclosure url="https://img-cdn.publive.online/fit-in/1280x960/newsfirstlive-kannada/media/media_files/2026/01/29/mayur-patel-2-2026-01-29-09-46-49.jpg" length="49398" type="image/jpeg"/>
<pubDate>Thu, 12 Feb 2026 09:44:04 +0530</pubDate>
<dc:creator>Newsfirst</dc:creator>
<media:keywords>ಸರಣಿ, ಅಪಘಾತ, ಎಸಗಿದ, ನಟ, ಮಯೂರ್, ಪಟೇಲ್, ವಿರುದ್ಧ, ಎಫ್‌ಐಆರ್..</media:keywords>
</item>

</channel>
</rss>